ಚಳ್ಳಕೆರೆ28. ತಾಲೂಕಿನ ರೈತರ ಸಮಸ್ಯೆಗಳಿಗೆ ತಹಸಿಲ್ದಾರ್ ರವರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ರಾಜ್ಯ ಸರ್ಕಾರವು ರೈತರ ಬಂಡಿದಾರಿ ಕಾಲುದಾರಿ ರೂಡಿಗತ ದಾರಿ ನಕಾಶದಾರಿಗಳಲ್ಲಿ ಓಡಾಡಲು ತೊಂದರೆಯಾಗುತ್ತಿರುವುದನ್ನು ಮನಗಂಡು ಸರ್ಕಾರ ಆದೇಶ ಮಾಡಿ ರೈತರಿಗೆ ಓಡಾಡಲು ತೊಂದರೆಯಾಗದಂತೆ ತಕ್ಷಣವೇ ತಹಶೀಲ್ದಾರ್ ರವರು ದಾರಿ ಬಿಡಿಸಿ ಕೊಡಬೇಕೆಂದು ಆದೇಶಿಸಿದ್ದರೂ ಸಹ ಇದುವರೆಗೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಸಮಸ್ಯೆಗಳು ಹಾಗೆ ಉಳಿದಿವೆ ಚಳ್ಳಕೆರೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರುಗಳು ಜನ ಸಂಪರ್ಕ ಸಭೆಗಳಲ್ಲಿ ಜನರ ಸಮಸ್ಯೆ ರೈತರ ಸಮಸ್ಯೆಗಳು ಬಂದಲ್ಲಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೇಳಿದ್ದರು ಇದುವರೆಗೂ ಕ್ರಮ ಕೈಗೊಂಡಿಲ್ಲ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಸುಳ್ಳು ಮಾಹಿತಿ ನೀಡಿ ರೈತ ವಿರೋಧಿ ಕೆಲಸ ಮಾಡುತ್ತಾ ತಾಲೂಕಿನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ರೈತರ ಕೆಲಸಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ ಮತ್ತು ಉದಾಸೀನ ಮಾಡುವ ಬಗ್ಗೆ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳದೆ ರೈತರನ್ನು ಅವಮಾನ ಮಾಡುತ್ತಿದ್ದಾರೆ ಇಂತಹ ಅಧಿಕಾರಿಗಳಿಂದ ರೈತರ ಯಾವುದೇ ಸಮಸ್ಯೆಗಳು ಬಗೆಹರಿಯುವುದಿಲ್ಲ ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
![](https://janadhwani.in/wp-content/uploads/2023/12/IMG-20231228-WA0158.jpg)
ರೈತ ಮುಖಂಡ ಕೊಟ್ರಬಸಪ್ಪ ಮಾತನಾಡಿ ರಾಜ್ಯ ಸರ್ಕಾರ ಬರ ಪರಿಹಾರವನ್ನು ಒಂದು ಹೆಕ್ಟೆರಿಗೆ 2ಸಾವಿರ ಘೋಷಿಸಿ ರೈತರನ್ನು ಅವಮಾನಿಸಿದ್ದಾರೆ ಕೇಂದ್ರ ಮತ್ತು ರಾಜ್ಯ ಬರ ಅಧ್ಯಯನ ತಂಡಗಳು ಬಂದು ಬೆಳೆ ಸಮೀಕ್ಷೆ ಮಾಡಿ ಮೂರು ನಾಲ್ಕು ತಿಂಗಳು ಕಳೆದರೂ ಬೆಳೆ ವಿಮೆ ಬೆಳೆ ಪರಿಹಾರ ನೀಡದೆ ಇಲ್ಲಸಲ್ಲದ ನೆಪ ಹೇಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲೋಕಸಭೆ ಚುನಾವಣೆ ರಾಜಕೀಯ ಮಾಡುತ್ತ ರೈತನಿಗೆ ಕಿರುಕುಳ ಕೊಡುತ್ತಿವೆ ಬರಗಾಲದಿಂದ ತತ್ತರಿಸುವ ರೈತರಿಗೆ ಹೆಕ್ಟೆರಿಗೆ 25,000 ನೀಡಬೇಕು ಹಾಗೂ ವಿಮಾ ಕಂಪನಿಗಳು ಯಾವುದೇ ಸಬೂಬು ಹೇಳದೆ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೂ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಚಿವರು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ಹೊನ್ನೂರು ಶ್ರೀನಿವಾಸ್ ಡಿ ಚಂದ್ರಶೇಖರ್ ನಾಯಕ್, ಗಂಗಾಧರ ತಿಪ್ಪೇಸ್ವಾಮಿ ಮಂಜುನಾಥ್ ರುದ್ರಸ್ವಾಮಿಒಬ ನಾಯಕ ಓ ಟಿ ತಿಪ್ಪೇಸ್ವಾಮಿ ಶರಣಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments