ಚಳ್ಳಕೆರೆ ಜನಧ್ವನಿ ವಾರ್ತೆ ಮಾ.9. ರಾಜ್ಯ ರಸ್ತೆ ಸಾರಿಗೆ ಚಳ್ಳಕೆರೆ ಘಟಕದಲ್ಲಿ ಸಾರಿಗೆ ನಂತೆಕೇಕ್ ತಯಾರಿಸಿ ಕತ್ತರಿಸುವ ಮೂಲಕ ಮಹಿಳಾದಿನಾಚರಣೆ ಆಚರಿಸಲಾಗಿದೆ. ನಗರದ ಪಾವಗಡ ರಸ್ತೆಯಲ್ಲಿರುವ ಸಾರಿಗೆ ಘಟಕದಲ್ಲಿ ಸಾರಿಗೆ ಸಿಬ್ಬಂದಿಗಳು ಮಹಿಳಾದಿನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥಾಪಕ ಪ್ರಭು ಮಾತನಾಡಿ ಸರಕಾರದ ಶಕ್ತಿ
ಯೋಜನೆಯಿಂದಾಗಿ ನಮ್ಮ ಸಂಸ್ಥೆ ಲಾಭದತ್ತ ಸಾಗುತ್ತಿದೆ ಇಂದು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಶುಭಕೋರೋಣ ಎಂದು ತಿಳಿಸಿದರು. ನಿರ್ವಾಹಕಿ ಜಯಶೀಲಾ ಮಾತನಾಡಿ ಪುರಷರ ಪ್ರೋತ್ಸಾಹದ ಮೇರೆಗೆ ನಾವೆಲ್ಲಾ ಮಹಿಳೆಯರು ಮುಂದೆ
ಬಂದಿದ್ದೇವೆ ತಮ್ಮದೆ ಘಟಕದ ವಾಹನ ಸಂಖ್ಯೆ ಕೆ.ಎ.17 ಎಫ್ 173 ರ ಭಾವಚಿತ್ರ ವುಳ್ಳ ಕೇಕ್ ಕತ್ತರಿಸಿ ಮಾಡಿದರು.
ನಿರ್ವಾಹಕಿ ಉಮಾದೇವಿ ಮಾತನಾಡಿ ದೇಶ ಮಹಿಳೆಯರಿಗಾಗಿ
ಏನೆಲ್ಲಾ ಕೋಟ್ಟಿದೆ. ಇಂದು ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂದು ಯೋಚನೆ ಮಾಡಬೇಕಿದೆ ಎಂದು ತಿಳಿಸಿದರು ಘಟಕ
ಇನಸ್ಪೆಕ್ಟರಾದ ಪಲ್ಲವಿ ಮಾತನಾಡಿ ಈ ಮಹಿಳಾ ಸ್ವಾತಂತ್ರ ಎನ್ನುವುದು ಕೇವಲ ದಿನಾಚರಣೆಗೆ ಮಾತ್ರ
ಸೀಮಿತವಾಗಬಾರದು ಎಂದು ಹೇಳಿದರು. ಘಟಕದ ಸಿಬ್ಬಂದಿ ಸಂಗಪ್ಪ ಚೌಧರಿ ಅಕ್ಕಮಹಾದೇವಿ ಯವರ
ವಚನವನ್ನು ತಮ್ಮ ಭಾಷಣದೂದ್ದಕ್ಕೂ ಹೇಳಿದರು.
ಘಟಕದ ಸೂಪರವೈಸರ್ ಹಾಗಲೂರಪ್ಪ, ನಿರ್ವಾಹಕರಾದ ವರವು ತಿಪ್ಪೆಸ್ವಾಮಿ. ಶ್ರೀನಿವಾಸ
ಗೋಪನಹಳ್ಳಿ ಸತೀಶ,ಚಾಲಕ ಡಿ.ಎಸ್ ಪ್ರಸಾದ, ಸಾಹಿತಿ ತಿಪ್ಪೇಸ್ವಾಮಿ, ಸೈಫುದ್ದಿನ್ ಯಶವಂತ, ಭಜರಂಗಿ
ವಾಹನದ ಭದ್ರಿ ಮಲ್ಲನಗೌಡ ಪಾಟೀಲ .ವಿನೊದಮ್ಮ, ನಾಗವೇಣಿ ಇತರರಿದ್ದರು.
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments