ತಮಿಳುನಾಡು ಚಂಡಮಾರುತ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳ ವಿತರಣೆಗೆ ಶ್ರೀಜಪಾನಂದಸ್ವಾಮಿ ಸಿದ್ದತೆ.

by | 07/12/23 | ಸಾಮಾಜಿಕ


ಪಾವಗಡ ಡಿ7 ತಮಿಳುನಾಡು ಚಂಡಮಾರುತದಿಂದ ಜಲಾವೃತಗೊಂಡ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳನ್ನು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ಶ್ರೀ ಜಪಾನಂದಸ್ವಾಮಿಗಳು. ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡಕ್ಕೆ, ಕಳೆದ ಒಂದು ವಾರದಿಂದ ಏಕಪ್ರಕಾರವಾಗಿ ತಮಿಳುನಾಡಿನಿಂದ ಅದರಲ್ಲಿಯೂ ಮದ್ರಾಸ್ ಮಹಾನಗರದ ತಾಮ್ರಂ, ಏರ್ಪೋರ್ಟ್, ಮಲ್ಲಿಯಂಕರಣೆ, ಕಾಂಚಿಪುರಂ ,ಮುಂತಾದ ಪ್ರದೇಶಗಳಿಂದ ನಿರಂತರವಾಗಿ ದೂರವಾಣಿ ಕರೆ ಹಾಗೂ ಪತ್ರಗಳು ಬರುತ್ತವೆ . ಇದಕ್ಕೆ ಕಾರಣ ಈ ಹಿಂದೆ ಅಂದರೆ ಎರಡು ಸಾವಿರದ ಹದಿನೈದನೇ ಇಸವಿಯಲ್ಲಿ ಬಂದಂತಹ ಪ್ರಳಯ ಹಾಗೂ 2018ನೇ ಇಸ್ವಿಯಲ್ಲಿ ಬಂದಂತಹ ಗಜ ಚಂಡಮಾರುತದಲ್ಲಿ ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಕೈಗೊಂಡ ಪರಿಹಾರ ಕಾರ್ಯ ಇಂದಿಗೂ ಆ ಜನರು ಮರೆತಿಲ್ಲ .ಕೋಟ್ಯಾಂತರ ರೂಪಾಯಿಗಳ ಪರಿಹಾರ ಕಾರ್ಯವನ್ನು ಅನೇಕ ಸಂಘ ಸಂಸ್ಥೆಗಳ ಹಾಗೂ ಮುಖ್ಯವಾಗಿ ಇನ್ಫೋಸಿಸ್ ಫೌಂಡೇಶನ್ ರವರ ಸಹಕಾರದಿಂದ ಸಹಸ್ರ ಸಹಸ್ರ ಜನರಿಗೆ ನಿರಂತರವಾಗಿ ಆಪತ್ಬಾಂಧವರಾಗಿ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಕಾರ್ಯವೈಸಿದ್ದು, ಇಂದಿಗೂ ಆ ಜನರ ಹೃದಯದಲ್ಲಿ ಮತ್ತು ಮನದಲ್ಲಿ ಅಚ್ಚಳಿಯದೆ ಉಳಿದಿದೆ . ಈ ಕಾರಣದಿಂದ ಪೂಜ್ಯ ಸ್ವಾಮಿ ಜಪಾನಂದ ಜೀ ರವರನ್ನು ಮತ್ತೆ ಈ ಸೇವ ಕಾರ್ಯಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿ ಕೊಂಡಿರುವ ಈ ಜನರಿಗೆ ಪೂಜ್ಯ ಸ್ವಾಮೀಜಿಯವರು ಅವರ ಆ ಕಷ್ಟವನ್ನು ನೋಡಲಾರದೆ ಮತ್ತೆ ಚಂಡಮಾರುತ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ತಾಮ್ರಮ್ ಹಾಗೂ ಚೆನ್ನೈ ಮಹಾನಗರದ ಲಯನ್ಸ್ ಕ್ಲಬ್ಬಿನ ಸ್ವಯಂಸೇವಕರಿಗೆ ಸೇವಾ ಕಾರ್ಯವನ್ನು ಮಾಡಬೇಕೆಂದು ತಿಳಿಸಿರುತ್ತಾರೆ. ಈ ಯೋಜನೆ ಬಹುಶಹ ಒಂದು ಕೋಟಿಯನ್ನು ದಾಟುವಂತಿದೆ ಈಗಾಗಲೇ ಪ್ರತಿಯೊಂದು ಕುಟುಂಬಕ್ಕೆ ಎಲ್ಲ ರೀತಿಯ ದಿನಸಿ ಅಕ್ಕಿ ಸಕ್ಕರೆ ರವೆ ಗೋಧಿಹಿಟ್ಟು ಬೇಳೆ ಮುಂತಾದವುಗಳ ಜೊತೆ ನೂತನ ವಸ್ತ್ರಗಳು, ಹೊದಿಕೆಗಳು ,ಇತ್ಯಾದಿಗಳನ್ನು ಅಣಿ ಮಾಡಲು ಪ್ರಾರಂಭಿಸಿದ್ದಾರೆ .ಚೆನ್ನೈ ಮಹಾನಗರದ ಇನ್ಫೋಸಿಸ್ ಸಂಸ್ಥೆಯ ಸ್ವಯಂಸೇವಕರು ಈ ಯೋಜನೆಯಲ್ಲಿ ಸಹಕಾರ ನೀಡಲಿದ್ದಾರೆ . ಪೂಜ್ಯ ಸ್ವಾಮೀಜಿಯವರು ಈ ಬಾರಿ ಸರಿಸುಮಾರು ನಾಲ್ಕು ಸಹಸ್ರ ಕುಟುಂಬದವರಿಗೆ ತತ್ ಕ್ಷಣದ ಸಹಾಯವನ್ನು ನೀಡಲು ಸಜ್ಜಾಗಿದ್ದು ಈಗಾಗಲೇ ಚೆನ್ನೈ ಮಹಾನಗರಕ್ಕೆ ಪ್ರಯಾಣ ಬೆಳೆಸಲು ತಯಾರಾಗಿದ್ದಾರೆ ತಮ್ಮ ಸ್ವಯಂಸೇವಕ ರ ತಂಡದೊಂದಿಗೆ ಈ ಮಹಾನ್ ಕಾರ್ಯವನ್ನು ಕೈಗೊಳ್ಳಲು ಧುಮುಕಿದ್ದಾರೆ, ಇದೇ ಅಲ್ಲವೇ ನಿಜವಾದ ಆಪದ್ಬಾಂಧವ ಎನಿಸಿಕೊಳ್ಳುವಂತಹ ತಂಡ ಈ ತಂಡದ ರೂವಾರಿಯಾಗಿರುವ ಪೂಜ್ಯ ಸ್ವಾಮಿ ಜಪಾನಂದಜಿಯರವರಿಗೆ ಎಲ್ಲ ಆಶ್ರಮದ ಹಿತೈಷಿಗಳು ಭಕ್ತರು ಹಾಗೂ ಬೆಂಗಳೂರಿನ ಮತ್ತು ಇತರ ನಗರಗಳ ಹಿತೈಷಿಗಳು ಸ್ವಯಂಸೇವಕರು ಸ್ವಾಮೀಜಿಯವರಿಗೆ ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಸ್ವಾಮಿ ವಿವೇಕಾನಂದರ ಸೇನಾನಿಯಾಗಿ ಸ್ವಾಮಿ ಜಪಾನಂದರು ಎಲ್ಲ ರೀತಿಯ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಸಹಸ್ತ್ರ ಸಹಸ್ರ ಜನರಿಗೆ ಸಹಾಯ ಹಸ್ತವನ್ನು ನೀಡಲು ಮುಂದಾಗುತ್ತಿರುವುದು ಸ್ವಾಮಿ ವಿವೇಕಾನಂದರ ಶಕ್ತಿ ಅಲ್ಲದೆ ಬೇರೇನೂ ಇಲ್ಲ ಎನ್ನಬಹುದು ಈ ಭಯಾನಕ ಹಾಗೂ ಅಪಾಯಕರವಾದ ಸ್ಥಿತಿಗಳನ್ನು ಸರಿಯಾದ ನಿದ್ರೆ ಊಟ ಮತ್ತಿತರ ವ್ಯವಸ್ಥೆಗಳನ್ನು ಪಕ್ಕಕ್ಕಿಟ್ಟು ಕಷ್ಟದಲ್ಲಿರುವ ಜನರ ಕೈ ಹಿಡಿದು ಮೇಲೆತ್ತುವ ಈ ಸನ್ಯಾಸಿಗೆ ,ಜನತೆ ,ಯುವಕರು ಹಾಗೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕೆಂದು ಆಶ್ರಮದ ಅಧಿಕಾರಿ ವರ್ಗದವರು ಮನವಿ ಮಾಡಿರುತ್ತಾರೆ . ಇದೇ ಸಂದರ್ಭದಲ್ಲಿ ಜೀವನಕ್ಕೆ ಅಪಾಯವಾಗುವಂತಹ ಪರಿಸ್ಥಿತಿಯಲ್ಲಿಯೂ ಸಹ ಪೂಜ್ಯ ಸ್ವಾಮೀಜಿಯವರು ಯಾವುದನ್ನು ಲೆಕ್ಕಿಸದೆ ಕಳೆದ 30 ವರ್ಷಗಳಿಂದ ಏಕಪ್ರಕಾರವಾಗಿ ಅಂದರೆ ಗುಜರಾತಿನ ಭೂಕಂಪದಿಂದ ಹಿಡಿದು ಸುನಾಮಿ ,ಗಜ, ಹಾಗೂ ಭಯಂಕರವಾದ ಕೋವಿಡ್ ಸಂದರ್ಭದಲ್ಲಿಯೂ ಆರು ರಾಜ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಕೆಚ್ಚೆದೆಯ ಪೂಜ್ಯ ಸ್ವಾಮಿ ಜಪಾನಂದ ಜೇವರಿಗೆ ಅವರಿಗೆ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಹೋದರ ಸಂಸ್ಥೆಗಳ ಪರವಾಗಿ ಎಲ್ಲ ಕಾರ್ಯಕರ್ತರು ಶುಭಾಶಯವನ್ನು ಕೋರಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page