ಚಳ್ಳಕೆರೆ ನ 28 ಗ್ರಾಮಪಂಚಾಯಿಯಲ್ಲಿನ ಅನುದಾನ ದುರ್ಬಳಕೆ ತನಿಖೆಯಿಂದ ಬಯಲಾಗಿ ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಪಿಡಿಒ ಬಗ್ಗೆ ಯಾವ ಕ್ರಮ ಕೈಕೊಂಡಿಲ್ಲ ಎಂದು ಗ್ರಾಮದ ನವೀನ್ ರೆಡ್ಡಿ ಆರೂಪಿಸಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ ಡಿ ಒ ಹೇಮಾವತಿ 15 ನೇ ಹಣ ಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ಹಾಗೂ ಸಾಮಾನ್ಯ ಸಭೆ ಮಾಡದೆ 10 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿರುವುದು. 15 ನೇ ಹಣಕಾಸು ಯೋಜನೆಯಡಿಯಲ್ಲಿ ಸಾಮಾಗ್ರಿ ಖರೀದಿಗೆಂದು ಚಳ್ಳಕೆರೆ ಅಂಗಡಿಗೆ ನೀಡಿದ್ದು ಸಾಮಾಗ್ರಿ ಖರೀದಿಸದೆ ಅಂಗಡಿಯವರಿಂದ ವಾಪಾಸ್ ಪಡೆದಿರುತ್ತಾರೆ .ಸಾರ್ವಜನಿಕ ಶೌಚಾಲಯ ಹಣ ವಿಳಂಬ. ಗ್ರಾಮಗಳಲ್ಲಿ ಬೀದಿಗಳಲ್ಲಿದೆ ಕತ್ತಲು ಹಾಗೂ ವಿಷಜಂತುಗಳ ಹಾವಳಿಹೆಚ್ಚಾಗಿದೆ ಹೀಗೆ ಹಲವು ಭ್ರಷ್ಟಾಚಾರ ವಾಗಿರುವ ಬಗ್ಗೆ ದಾಖಲೆ ಸಮೇತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗೆ ಗ್ರಾಮದ ನವೀನ್ ರೆಡ್ಡಿ ದಾಖಲೆ ಸಮೇತ ದೂರು ನೀಡಿದ್ದರು.
<strong>ದಿನಗೂಲಿ ನೌಕರನ ಹೆಸರಿಗೆ ಚೆಕ್. ಹರೀಶ್ ಯಾದವ್ ಎಂ. ಆದ ನಾನು
ಬೇಡರೆಡ್ಡಿಹಳ್ಳಿ ಗ್ರಾ.ಪಂ.ಯಲ್ಲಿ ದಿನಗೂಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು,
ನನ್ನ ಹೆಸರಿಗೆ ಈ ಹಿಂದಿನ ಪಿ.ಡಿ.ಓ. ಹೆಚ್.ಹೇಮವತಿ ಎಂಬುವರು ದಿನಾಂಕ:-23/06/2023
ರಂದು check No.008672, ರೂ.19400/-ಗಳ ಚೆಕ್ ಅನ್ನು ನನ್ನ ಹೆಸರಿಗೆ ಬರೆದು ಕೊಟ್ಟಿರುತ್ತಾರೆ. ಆ
ಹಣವನ್ನು ನಾನು ಡ್ರಾ ಮಾಡಿ ಪಿ.ಡಿ.ಓ. ಹೆಚ್.ಹೇಮವತಿ ರವರಿಗೆ ಕೊಟ್ಟಿರುತ್ತೇನೆ.
ನಾನು ಪಿ.ಡಿ.ಓ.ಹೆಚ್.ಹೇಮವತಿ ನನಗೆ ಡ್ರಾಯಿಂಗ್ ಅಧಿಕಾರಿ ಇರುವುದರಿಂದ ಮತ್ತು ನನ್ನ ಕೈ
ಕೆಳಗಿನ ಸಿಬ್ಬಂದಿ ನೌಕರನಾಗಿರುವುದರಿಂದ ನಾನು ಹೇಳಿದಂತೆ ಈ ಚೆಕ್ ಅನ್ನು ತೆಗೆದುಕೊಂಡು ಹೋಗಿ
ಬ್ಯಾಂಕಿನಲ್ಲಿ ಜಮಾ ಮಾಡಿಕೊಂಡು ನನಗೆ ಹಣ ತಂದು ಕೊಡಬೇಕೆಂದು ಹೇಳಿದರು. ಆದರೆ ಹರೀಶ್
ಯಾದವ್ ಎಂ. ಆದ ನಾನು ನನ್ನ ಹೆಸರಿಗೆ ಚೆಕ್ ಕೊಡಬೇಡಿ ಅಂದರೂ ಸಹ ನನ್ನ ಹೆಸರಿಗೆ
ಬಲವಂತವಾಗಿ ಚೆಕ್ ಬರೆದು ಕೊಟ್ಟು ಹಣ ಬಿಡಿಸಿಕೊಡು ಎಂದು ಒತ್ತಾಯ ಮಾಡಿದ್ದರಿಂದ ನಾನು
ಮೇಲಾಧಿಕಾರಿ ಪಿ.ಡಿ.ಓ. ಹೆಚ್.ಹೇಮವತಿ ಯವರ ಮೌಖಿಕ ಆದೇಶದಂತೆ ಭಯದಿಂದ ಹಣವನ್ನು ಬಿಡಿಸಿ
ಪಿ.ಡಿ.ಓ. ಹೆಚ್.ಹೇಮವತಿಯವರಿಗೆ ನಗದು ಹಣವನ್ನು ರೂ19400/-ಕೊಟ್ಟಿರುತ್ತೇನೆ. ಆ ಚೆಕ್ನ ಹಣದಲ್ಲಿ ನಾನು ಯಾವುದೇರೀತಿಯ ಹಣವನ್ನು ಪಡೆಯದೇ ಪೂರ್ತಿಹಣವನ್ನು ಪಿ.ಡಿ.ಓ.ಹೆಚ್.ಹೇಮವತಿಯವರಿಗೆ
ಚಳ್ಳಕೆರೆಯ ತಾಲ್ಲೂಕು ಪಂಚಾಯಿತಿ ಹಳೇಮೀಟಿಂಗ್ ಹಾಲ್ ಮುಂದೆ ಕೊಟ್ಟಿರುತ್ತೇನೆ. ನನಗೂ ಆ
ಹಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಈ ಮೂಲಕ ತಿಳಿಯ ಪಡಿಸುತ್ತೇನೆ.
![](https://janadhwani.in/wp-content/uploads/2023/11/IMG-20231128-WA0181.jpg)
![](https://janadhwani.in/wp-content/uploads/2023/11/IMG-20231128-WA0182.jpg)
0 Comments