ತನಿಖಾವರದಿ‌‌ಅಧಿಕಾರಿಗಳ ಕೈಸೇರಿ ನಾಲ್ಕು ತಿಂಗಳು ಕಳೆದರೂ ಪಿಡಿಒ ವಿರುದ್ದ ಕ್ರಮಕೈಕೊಂಡಿ ನವೀನ್ ರೆಡ್ಡಿ ಆರೋಪ

by | 28/11/23 | ತನಿಖಾ ವರದಿ


ಚಳ್ಳಕೆರೆ ನ 28 ಗ್ರಾಮಪಂಚಾಯಿಯಲ್ಲಿನ ಅನುದಾನ ದುರ್ಬಳಕೆ ತನಿಖೆಯಿಂದ ಬಯಲಾಗಿ ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಪಿಡಿಒ ಬಗ್ಗೆ ಯಾವ ಕ್ರಮ ಕೈಕೊಂಡಿಲ್ಲ ಎಂದು ಗ್ರಾಮದ ನವೀನ್ ರೆಡ್ಡಿ ಆರೂಪಿಸಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ ಡಿ ಒ ಹೇಮಾವತಿ 15 ನೇ ಹಣ ಕಾಸು ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ಹಾಗೂ ಸಾಮಾನ್ಯ ಸಭೆ ಮಾಡದೆ 10 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿರುವುದು. 15 ನೇ ಹಣಕಾಸು ಯೋಜನೆಯಡಿಯಲ್ಲಿ ಸಾಮಾಗ್ರಿ ಖರೀದಿಗೆಂದು ಚಳ್ಳಕೆರೆ ಅಂಗಡಿಗೆ ನೀಡಿದ್ದು ಸಾಮಾಗ್ರಿ ಖರೀದಿಸದೆ ಅಂಗಡಿಯವರಿಂದ ವಾಪಾಸ್ ಪಡೆದಿರುತ್ತಾರೆ .ಸಾರ್ವಜನಿಕ ಶೌಚಾಲಯ ಹಣ ವಿಳಂಬ. ಗ್ರಾಮಗಳಲ್ಲಿ ಬೀದಿಗಳಲ್ಲಿದೆ ಕತ್ತಲು ಹಾಗೂ ವಿಷಜಂತುಗಳ ಹಾವಳಿ‌ಹೆಚ್ಚಾಗಿದೆ ಹೀಗೆ ‌ಹಲವು ಭ್ರಷ್ಟಾಚಾರ ವಾಗಿರುವ ಬಗ್ಗೆ ದಾಖಲೆ ಸಮೇತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗೆ ಗ್ರಾಮದ ನವೀನ್ ರೆಡ್ಡಿ ದಾಖಲೆ ಸಮೇತ ದೂರು ನೀಡಿದ್ದರು.
<strong>ದಿನಗೂಲಿ ನೌಕರನ ಹೆಸರಿಗೆ ಚೆಕ್. ಹರೀಶ್ ಯಾದವ್ ಎಂ. ಆದ ನಾನು
ಬೇಡರೆಡ್ಡಿಹಳ್ಳಿ ಗ್ರಾ.ಪಂ.ಯಲ್ಲಿ ದಿನಗೂಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು,
ನನ್ನ ಹೆಸರಿಗೆ ಈ ಹಿಂದಿನ ಪಿ.ಡಿ.ಓ. ಹೆಚ್.ಹೇಮವತಿ ಎಂಬುವರು ದಿನಾಂಕ:-23/06/2023
ರಂದು check No.008672, ರೂ.19400/-ಗಳ ಚೆಕ್ ಅನ್ನು ನನ್ನ ಹೆಸರಿಗೆ ಬರೆದು ಕೊಟ್ಟಿರುತ್ತಾರೆ. ಆ
ಹಣವನ್ನು ನಾನು ಡ್ರಾ ಮಾಡಿ ಪಿ.ಡಿ.ಓ. ಹೆಚ್.ಹೇಮವತಿ ರವರಿಗೆ ಕೊಟ್ಟಿರುತ್ತೇನೆ.
ನಾನು ಪಿ.ಡಿ.ಓ.ಹೆಚ್.ಹೇಮವತಿ ನನಗೆ ಡ್ರಾಯಿಂಗ್ ಅಧಿಕಾರಿ ಇರುವುದರಿಂದ ಮತ್ತು ನನ್ನ ಕೈ
ಕೆಳಗಿನ ಸಿಬ್ಬಂದಿ ನೌಕರನಾಗಿರುವುದರಿಂದ ನಾನು ಹೇಳಿದಂತೆ ಈ ಚೆಕ್ ಅನ್ನು ತೆಗೆದುಕೊಂಡು ಹೋಗಿ
ಬ್ಯಾಂಕಿನಲ್ಲಿ ಜಮಾ ಮಾಡಿಕೊಂಡು ನನಗೆ ಹಣ ತಂದು ಕೊಡಬೇಕೆಂದು ಹೇಳಿದರು. ಆದರೆ ಹರೀಶ್
ಯಾದವ್ ಎಂ. ಆದ ನಾನು ನನ್ನ ಹೆಸರಿಗೆ ಚೆಕ್ ಕೊಡಬೇಡಿ ಅಂದರೂ ಸಹ ನನ್ನ ಹೆಸರಿಗೆ
ಬಲವಂತವಾಗಿ ಚೆಕ್ ಬರೆದು ಕೊಟ್ಟು ಹಣ ಬಿಡಿಸಿಕೊಡು ಎಂದು ಒತ್ತಾಯ ಮಾಡಿದ್ದರಿಂದ ನಾನು
ಮೇಲಾಧಿಕಾರಿ ಪಿ.ಡಿ.ಓ. ಹೆಚ್.ಹೇಮವತಿ ಯವರ ಮೌಖಿಕ ಆದೇಶದಂತೆ ಭಯದಿಂದ ಹಣವನ್ನು ಬಿಡಿಸಿ
ಪಿ.ಡಿ.ಓ. ಹೆಚ್.ಹೇಮವತಿಯವರಿಗೆ ನಗದು ಹಣವನ್ನು ರೂ19400/-ಕೊಟ್ಟಿರುತ್ತೇನೆ. ಆ ಚೆಕ್‌ನ ಹಣದಲ್ಲಿ ನಾನು ಯಾವುದೇರೀತಿಯ ಹಣವನ್ನು ಪಡೆಯದೇ ಪೂರ್ತಿಹಣವನ್ನು ಪಿ.ಡಿ.ಓ.ಹೆಚ್.ಹೇಮವತಿಯವರಿಗೆ
ಚಳ್ಳಕೆರೆಯ ತಾಲ್ಲೂಕು ಪಂಚಾಯಿತಿ ಹಳೇಮೀಟಿಂಗ್ ಹಾಲ್ ಮುಂದೆ ಕೊಟ್ಟಿರುತ್ತೇನೆ. ನನಗೂ ಆ
ಹಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಈ ಮೂಲಕ ತಿಳಿಯ ಪಡಿಸುತ್ತೇನೆ.

ದೂರು ನೀಡಿದ ಮೇರೆಗೆ ಜಿಪಂ ಸಿಇಒ ತನಿಖೆ ನಡೆಸುವಂತೆ ಮಹಿಳಾ ಮಕ್ಕಳ ಕಲ್ಯಾಣಾಧಿಕಾರಿ ಹರಿಪ್ರಸಾದ್ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ಧೇಶಕ ತಿಪ್ಪೇಸ್ವಾಮಿ ಇವರನ್ನು ನೇಮಕ ಮಾಡಲಾಗಿತ್ತು. ಇಬ್ಬರು ಅಧಿಕಾರಿಗಳು ಬೇಡರೆಡ್ಡಿಹಳ್ಳಿ ಗ್ರಾಪಂ ಕಚೇರಿಗೆ ಭೇಟಿ ನೀಡಿ ದೂರಿನಲ್ಲಿರುವ ಅಂಶಗಳ ಬಗ್ಗೆ ತನಿಖೆ ನಡೆಸಿದಾಗ ಅಕ್ರಮಗಳ ಬಗ್ಗೆ ಬಯಲಾಗಿದ್ದು ತನಿಖೆ ವರದಿಯನ್ನು ತಾಲೂಕು ಪಂಚಾಯತ್ ಕಚೇರಿಗೆ ನೀಡಿ ಸುಮಾರು ನಾಲ್ಕು ತಿಂಗಳು ಕಳೆದರೂ ತಪ್ಪಿತಸ್ಥ ಪಿಡಿಒ ಹೇಮಾವತಿ ವಿರುದ್ದ ಕ್ರಮ ಕೈಗೊಳ್ಳಲು ಅಧುಕಾರಿಗಳು ಮುಂದಾಗಿಲ್ಲ ಎಂದು ಬೇಡರೆಡ್ಡಿಹಳ್ಳಿ ಗ್ರಾಮದ ನವೀನ್ ರೆಡ್ಡಿ ಆರೋಪಿಸಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page