ದುಡಿಯುವ ಕೈಗಳಿಗೆ ನರೇಗಾ ಕೆಲಸ ನೀಡಲು ಅಧಿಕಾರಿಗಳು ಮುಂದಾಗುವಂತೆ ತಾಪಂ ಇಒ ಶಶಿಧರ್.

by | 18/11/23 | ಆರ್ಥಿಕ

ಚಳ್ಳಕೆರೆ ನ.18 ಬರಗಾಲವಿರುದರಿಂದ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ವಾರದೊಗಳಗೆ ನರೇಗಾ ಪ್ರಗತಿ ಸಾಧಿಸುವಂತೆ ತಾಂತ್ರಿಕ ಸಹಾಯಕರಿಗೆ ತಾಪಂ ಇಒ ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನರೇಗಾ ಇಂಜಿನಿಯರ್, ಬಿಎಫ್ ಟಿ ಗಳಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು,
ತಾಲೂಕನ್ನು ಬರಗಾಲ ಎಂದು ಸರಕಾರ ಘೋಷಣೆ ಮಾಡಿರುವುದರಿಂದ 100 ರಿಂದ 150 ಮಾನವ ದಿನಗಳನ್ನು ಹೆಚ್ಚಿಸುವ ಸಾಧ್ಯತೆ ಇದ್ದು ಕನಿಷ್ಟ ಒಂದು ಪಂಚಾಯಿತಿಗೆ 500 ಮಾನವ ದಿನಗಳನ್ನು ಸೃಷ್ಠಿಯಾಗುವಂತೆ ಕೆರೆ, ಕಾಲುವೆ, ಗೋಕಟ್ಟೆ ಹೂಳೆತ್ತುವ ಕಾಮಗಾರಿ ರೈತರ ಬದು ನಿರ್ಮಾಣ, ತೋಟಗಾರಿಕೆ, ಅರಣ್ಯಸಸಿಗಳ ಬೆಳೆಸಲು ಕೂಲಿ ಕಾರ್ಮಿಕರು ಹೆಚ್ಚು ಭಾಗವಹಿಸಂತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು,
ನರೇಗಾ ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆ ನಿಶೇಷದವಿದ್ದು ದುಡಿಯುವ ಕೈಗಳಿಗೆ ಕೆಲಸ ನೀಡ ಬೇಕು, ನರೇಗಾ ಕಾಮಗಾರಿಗಳಲ್ಲಿ ಹೆಚ್ಚು ಮಹಿಳಾ ಕೂಲಿಕಾರ್ಮಿಕರು ಭಾಗವಸುವಂತೆ ನೋಡಿಕೊಳ್ಳಬೇಕು ಕಾಮಗಾರಿಗಳ ಗುಣ ಮಟ್ಟ ನೋಡಿಕೊಳ್ಳ ಬೇಕು ಕಾಮಗಾರಿ ಮಾಡದೆ ಬಿಲ್ ಪಾವತಿ ಮಾಡುವಂತಿಲ್ಲ, ಕಾಮಗಾರಿ ಸ್ಥಳ ಪರಿಶೀಲನೆ ಮಾಡದೆ ಎಂ.ಬಿ ದಾಖಲಿಸುವಂತಿಲ್ಲ ನರೇಗಾ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದೆ ಕಟ್ಟು ನಿಟ್ಟಾಗಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡ ಬೇಕು ಎಂದು ತಿಳಿಸಿದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿದರು.
ಈ ಸಂದರ್ಭದಲ್ಲಿ ನರೇಗಾ ತಾಂತ್ರಿಕ ಸಹಾಯಕರು, ಬಿ ಎಫ್ ಟಿ ಹಾಗೂ ಜಿ ಕೆ ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *