ಚಳ್ಳಕೆರೆ ಡಿ.17. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಮತ್ಸಮುದ್ರ ಗ್ರಾಮ ಮತ್ಸ್ಯಾಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಡಿ.30 ಶನಿವಾರ ನಡೆಯಲಿದೆ.
ಡಿ.30ರ ಶನಿವಾರ ಬೆಳಿಗ್ಗೆ 7-30ಕ್ಕೆ ಗಂಗಾ ಪೂಜೆ, 8-30 ರಿಂದ ಪುಣ್ಯಾಹ, ಸ್ವಸ್ತಿವಾಚನ, ಋತ್ವಿಗುಣ, ಪಂಚಗವ್ವ ದೇವನಾಂದಿ,ಡಿಸೆಂಬರ್ 31 ಭಾನುವಾರ ನವಗ್ರಹಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ ಮತ್ತು ಶ್ರೀರಾಮತಾರಕ ಹೋಮ, ಪೂರ್ಣಾಹುತಿ ಶ್ರೀ ಸ್ವಾಮಿಗೆ ಪಂಚಾಭಿಷೇಕ, ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ಏನಿಯೋಗ,
ಕಲಶ ಪ್ರತಿಷ್ಠಾಪನೆ ನಂತರ ಕಡೇ ಕಾರ್ತಿಕೋತ್ಸವ, ಬೆಳಗಿನ ಜಾವ 5-00 ಗಂಟೆಯಿಂದ
ರಥೋತ್ಸವ ಶನಿವಾರ ನಡೆಯಲಿದೆ ಡಿಸೆಂಬರ್ 31ಬೆಳಿಗ್ಗೆ 7-00 ಗಂಟೆಗೆ ಹೂವಿನ ಹಾರ ಹರಾಜು ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ,ಸಾಯಂಕಾಲ ಉದ್ದ ಪರಿಷ, ವಿನೋದ ವಸಂತೋತ್ಸವ ಭಾನುವಾರ ಜನವರಿ 1ರ
ಸೋಮವಾರ ಮಂಗಳಾರತಿ ಪ್ರಸಾದ ವಿನಿಯೋಗ
ಮತ್ತು 4 ಗಂಟೆಗೆ ಓಕುಳಿ ಉತ್ಸವದೊಂದಿಗೆ ಶ್ರೀ ಆಂಜನೇಯಸ್ವಾಮಿ ಕಾರ್ತಿಕೋತ್ಸವಕ್ಕೆ ತೆರೆಬೀಳಲಿದೆ.
ಶ್ರೀ ಆಂಜನೇಯಸ್ವಮಿಯ ಹಿನ್ನೆಲೆ
ಚನ್ನಮ್ಮನಾಗತಿಹಳ್ಳಿ ಗ್ರಾಪಂ ವ್ಯಾಪ್ತಿಯ ಮತ್ಸಮುದ್ರ ಗ್ರಾಮದಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಆಂಜನೇಯ ದೇವಸ್ಥಾನವನ್ನು ವ್ಯಾಸರಾಯರು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಆಂಜನೇಯ ಸ್ವಾಮಿಯು ಲಂಕಾ ದಹನ ಮಾಡಿ ಬರುವಾಗ ಈ ಭಾಗದಿಂದ ಹಾದು ಹೋಗುವಾಗ ಬಾಯರಿಕೆಯಾಯಿತು. ಆಗ ವೇದಾವತಿ ನದಿ ತೀರದಲ್ಲಿನ ಬಂಡೆಯನ್ನು ತನ್ನ ಮೊಳಕೈಯಿಂದ ಗುದ್ದಿ ನೀರು ತೆಗೆದು ಕುಡಿದ ಎಂಬ ಪ್ರತೀತಿಯಿದೆ. ಅದಕ್ಕೆ ಈಗಲೂ ಈ ಜಾಗವನ್ನು ಮಂಗದೋಣಿ ಎಂದು ಕರೆಯುತ್ತಾರೆ’ ಇಲ್ಲಿನ ಹಿರಿಯರುಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ವಿಶೇಷ ಜಾತ್ರೆ ನಡೆಸುತ್ತಾ ಬಂದಿದೆ. ಜಾತ್ರೆಗೆ ಸುತ್ತ ಮುತ್ತಲ ಜಿಲ್ಲೆಯ ಜನರು, ಸೀಮಾಂಧ್ರ ಮತ್ತು ತೆಲಂಗಾಣದಿಂದಲೂ ಭಕ್ತರು ಬರುತ್ತಾರೆ.
ಪ್ರತಿ ಶನಿವಾರವೂ ಸ್ವಾಮಿಗೆ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದ ಜಾತ್ರೆಯಲ್ಲಿ ವಿಶೇಷ ಪೂಜೆ ನಡೆಯುತ್ತದೆ ಎಂದು ಅರ್ಚಕ ಸುಧೀಂದ್ರಚಾರ್ ತಿಳಿಸಿದರು.
0 Comments