ನಾಯಕನಹಟ್ಟಿ:: ಡಾ ಬಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನ ಪ್ರತಿಯೊಬ್ಬರೂ ರೂಡಿಸಿಕೊಂಡಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಿ ಬಿ ಉಮೇಶ್ ಹೇಳಿದ್ದಾರೆ.
ಅವರು ಮಂಗಳವಾರ ರಾತ್ರಿ ಸ್ವಗ್ರಾಮ ಕುದಾಪುರ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಿ ಬಿ ಉಮೇಶ್ ರವರ 43ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಡಾ ಬಿ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೀಸಲಾತಿಯ ಅಡಿಯಲ್ಲಿ ನಾನು ಅಧಿಕಾರಿಯಾಗಿದ್ದೇನೆ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ಬಾಬಾ ಸಾಹೇಬ್ ಡಾ. ಬಿ ಅಂಬೇಡ್ಕರ್ ಒಂದು ಮಾತನ್ನು ಹೇಳುತ್ತಾರೆ ನಾನು ನನ್ನ ಜನರ ಉದ್ಧಾರಕ್ಕೆ ಸಂವಿಧಾನವನ್ನು ಬರೆದೆ ಆ ಸಂವಿಧಾನದ ಅಡಿಯಲ್ಲಿ ಹಲವಾರು ಜನ ರಾಜಕಾರಣಿಗಳು ನೌಕರದಾರರು ಆಸ್ತಿವಂತರಾದರು ಉದ್ಯಮಿಗಳ ಆದರೂ ಆದರೆ ನಮ್ಮ ಸಂವಿಧಾನದ ಮೂಲ ಆಶ್ರಯಗಳನ್ನ ಮರೆತಿದ್ದಾರೆ ಸಂವಿಧಾನದ ಲಾಭವನ್ನು ಪಡೆದುಕೊಂಡು ಬಡಜನರನ್ನ ಮರೆತು ಎಂಬ ಕೊರಗು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಇತ್ತು.
ನಾನು ಒಬ್ಬ ಪೊಲೀಸ್ ಅಧಿಕಾರಿಯಾಗಿ ಎಲ್ಲಾ ಕಡೆ ಡಾ. ಬಿ ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಅಡಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ.
![](https://janadhwani.in/wp-content/uploads/2023/12/IMG-20231206-WA0229.jpg)
ಅಂಬೇಡ್ಕರ್ ರವರ ಆಶ್ರಯದಂತೆನೆ ಸಾಮಾಜಿಕ ನ್ಯಾಯವನ್ನು ಕೊಟ್ಟಿರುವಂತೆ ಕೆಲಸ ಮಾಡಿದ್ದೇನೆ ನಮ್ಮ ಸಮಾಜದಲ್ಲಿ ಪೊಲೀಸ್ ಇಲಾಖೆ ಅತಿ ಮುಖ್ಯವಾದ ಇಲಾಖೆ ಪೊಲೀಸ್ ಠಾಣೆಗೆ ಪ್ರತಿದಿನವೂ ಬಡವರು ದೀನದಲಿತರು ನೊಂದವರು ಬರುತ್ತಾರೆ. ಅವರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವಲ್ಲಿ ಪ್ರತಿಯೊಬ್ಬ ಪೊಲೀಸರು ಕರ್ತವ್ಯ ಅತಿ ಮುಖ್ಯವಾದದ್ದು ನಮ್ಮ ಗ್ರಾಮದಲ್ಲಿ ಯುವಕರು ಸಿಂಗಂ ಕಪ್ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ ಯುವಕರು ಕ್ರೀಡೆಯ ಜೊತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಹೆತ್ತವರಿಗೆ ಕೀರ್ತಿಯನ್ನು ತರಬೇಕು ಹಾಗಾದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಯುವಕರಿಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಎನ್ ಮಹದೇವಪುರ ಗ್ರಾ.ಪಂ. ಸದಸ್ಯ ಎಂ ಪಾಲಯ್ಯ, ಮಾಜಿ ಬಗರು ಹುಕುಂ ಕಮಿಟಿ ಸದಸ್ಯೆ ಬಿ ಶಾರದಮ್ಮ, ಚಳ್ಳಕೆರೆ ಆರೋಗ್ಯ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕುದಾಪುರ ಎಸ್ ಬಿ ತಿಪ್ಪೇಸ್ವಾಮಿ, ಗುಂತಕೋಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಶಿಕ್ಷಕ ದಿವಾಕರ್ , ಭಾರತೀಯ ಕಿಸಾನ್ ಸಂಘದ ಸದಸ್ಯ ಪಂಚಾಕ್ಷರಿಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಜಿ ಬಿ ಲೋಕೇಶ್, ಗೂಂಚಿಗಾರ್ ಬೋರಯ್ಯ , ನಾಯಕನಹಟ್ಟಿ ಕೆಇಬಿ ಶಾಖಾಧಿಕಾರಿ ಎನ್ ಬಿ ಬೋರಣ್ಣ,ರಾಮಸಾಗರ ಪಿ ಪಿ ಮಹಾಂತೇಶ್ ನಾಯಕ, ಜಯಣ್ಣ, ನಲಗೇತನಹಟ್ಟಿ ಗಾಯಕ ಮುತ್ತುರಾಜ್ , ಶಿವಣ್ಣ, ಸತೀಶ್, ಇದ್ದರು
![](https://janadhwani.in/wp-content/uploads/2023/12/IMG-20231206-WA0226.jpg)
0 Comments