ಡಾಗ್ ಸರ್ಕಲ್ ನಾಗರೀಕರ ಗೋಳು! ಯಾರಿಗೆ ಹೇಳಲಿ ನಮ್ಮ ಪ್ರಾಬ್ಲಮ್?

by | 26/07/23 | Uncategorized


ಹಿರಿಯೂರು ಜು.26 ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್,3 ನೇ ವಾರ್ಡ್,ವೇದಾವತಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಂದ್ರಾ ಲೇ ಔಟ್ ಪಾಂಡುರಂಗಪ್ಪ ಲೇ ಔಟ್,ಶಿವಶಂಕರಪ್ಪ ಲೇ ಔಟ್,ಉಪ್ಪಾರ ಸಮುದಾಯ ಭವನ,ಸಂ. ರಂಗಯ್ಯ ಲೇ ಔಟ್ ಮೂಲಕ ಬಬ್ಬೂರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಾರಂಪರಿಕ ರಸ್ತೆಯನ್ನು ಕಳೆದ 03 ವರ್ಷಗಳಿಂದ ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ರ ನಡುವೆ ತಡೆ ಹಿಡಿಯಲಾಗಿದೆ.ಈ ಹಿಂದೆ ಎಲ್ಲಾ ಕಾಲಕ್ಕೂ ರಸ್ತೆ ಇರುವ ಬಗ್ಗೆ ಅಡ್ಡಿ ಪಡಿಸಿರುವ ಉಭಯ ಪಕ್ಷಗಾರರು ಒಪ್ಪಿಕೊಳ್ಳುತ್ತಾರೆ,ಆದಾಗ್ಯೂ ಅಳತೆ ಮಾಡಿಸಿ ರಸ್ತೆ ಗಡಿ ಗುರುತು ಮಾಡುವಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ರಸ್ತೆ ಬಂದ್ ಮಾಡಲಾಗಿದೆ, ಇಲ್ಲಿಯತನಕ ಅಧಿಕಾರಿಗಳು ಅನೇಕ ಬಾರಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದರೂ ಕೂಡ ರಸ್ತೆ ಬಿಡಿಸಿಕೊಡಲು ಸಾಧ್ಯವಾಗಿಲ್ಲ. ಈ ಭಾಗದ ಜನ ಜಾನುವಾರುಗಳು ಕೂಲಿ ಕಾರ್ಮಿಕರು,ಕಚೇರಿಗೆ ತೆರಳುವ ನೌಕರರು,ಅಂಗವಿಕಲರು,ವಯೋವೃದ್ಧರು, ಮಹಿಳೆಯರು,ಶಾಲಾ ಮಕ್ಕಳು ತಗ್ಗು ಗುಂಡಿಗಳಲ್ಲಿ ಬಿದ್ದು ಅಪಾಯ ಕೂಡ ಮಾಡಿ ಕೊಂಡಿರುತ್ತಾರೆ.ನಮಗೆ ಯಾವುದೇ ದಿಕ್ಕಿನಿಂದಲೂ ಸರಿಯಾದ ಶಾಶ್ವತ ರಸ್ತೆ ಸಂಪರ್ಕ ಇರುವುದಿಲ್ಲ,ಮಳೆಗಾಲದಲ್ಲಿ ಇಲ್ಲಿನ ನಾಗರಿಕರು ಕೆಸರುಗದ್ದೆ ಕೊಚ್ಚೆ ಗುಂಡಿಗಳಲ್ಲಿ ಸುತ್ತಿ ಬಳಸಿ ಅರ್ಧ ಕಿಲೋ ಮೀಟರ್ ನಲ್ಲಿ ಸಿಗುವ ಮುಖ್ಯ ರಸ್ತೆ ತಲುಪಲು 2 ಕಿಲೋ ಮೀಟರ್ ಚಲಿಸಿ ಹರಸಾಹಸ ಮಾಡಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗಬೇಕು. ದಾರಿ ಅಡ್ಡಿ ಪಡಿಸಿರುವ ಸ್ಥಳದಲ್ಲಿ ಕೊಳಚೆ ನೀರು ನಿಂತು ಹಂದಿ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿ ಸಾಂಕ್ರಾಮಿಕ ರೋಗ ಭೀತಿ ಉಂಟುಮಾಡಿದೆ. ಸ್ವಂತ ವಾಹನ ಇಲ್ಲದೆ ಕಾಲ್ನಡಿಗೆಯಲ್ಲಿ ಓಡಾಡುವ ನಾಗರಿಕರು ಕಲ್ಲು ಮುಳ್ಳು,ಹಾವು ಚೇಳು,ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ತಗ್ಗು ಗುಂಡಿ,ಕೊಳಚೆ ದಾಟಿ ಮುಖ್ಯ ರಸ್ತೆ ತಲುಪಬೇಕು.ರಾತ್ರಿ ಸಮಯದಲ್ಲಿ ಗರ್ಭಿಣಿ,ಬಾಣಂತಿ, ನವಜಾತ ಶಿಶುಗಳು, ವಯೋವೃದ್ಧರು ತುರ್ತು ಚಿಕಿತ್ಸೆಗೆ ಹೋಗಿ ಬರಲು ಆಟೋರಿಕ್ಷಾ ಆಂಬುಲೆನ್ಸ್ ಕೂಡಾ ಮನೆ ಹತ್ತಿರ ಬರಲು ಸಾಧ್ಯವಿಲ್ಲ.ಪ್ರಯುಕ್ತ ಜಿಲ್ಲಾಧಿಕಾರಿಗಳು ದಯಮಾಡಿ ರಸ್ತೆ ಅಡ್ಡಿ ಪಡಿಸಿರುವ ಉಭಯ ಪಕ್ಷಗಾರರ ನಡುವೆ ರಾಜೀ ಸಂಧಾನ ಏರ್ಪಡಿಸಿ ಇಲ್ಲವೇ ತಾತ್ಕಾಲಿಕವಾಗಿ ಓಡಾಡಲು ಅನುಕೂಲ ಆಗುವಂತೆ ಚರಂಡಿ ನೀರನ್ನು ಒಂದು ಕಡೆ ಹರಿಯುವಂತೆ ಮಾಡಿ ಸೀಮೆ ಜಾಲಿ ಪಾರ್ಥೇನಿಯಂ ಗಿಡ ತೆಗಿಸಿ ಮೇಲ್ಕಂಡ ಪಾರಂಪರಿಕ ರಸ್ತೆಯನ್ನು ಬಿಡಿಸಿಕೊಟ್ಟು ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್,ಅಧ್ಯಕ್ಷ ಸಂತೋಷ ರಾಥೋಡ್,ಉಪಾಧ್ಯಕ್ಷ ಟಿ ಸ್ವಾಮಿ,ಕಾರ್ಯದರ್ಶಿ ಸಿ ಜಿ ಗೌಡ,ಸದಸ್ಯರಾದ ರಂಗಸ್ವಾಮಿ, ತಿಪ್ಪೇಸ್ವಾಮಿ,ಗೋವರ್ಧನ್,ಸನಾವುಲ್ಲಾ,ಶ್ರೀನಿವಾಸ್,ರಾಘವೇಂದ್ರ,ಮಧು,ಜಾಫರ್,ಮತ್ತಿತರರು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page