ಹಿರಿಯೂರು ಜು.26 ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್,3 ನೇ ವಾರ್ಡ್,ವೇದಾವತಿ ನಗರದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಂದ್ರಾ ಲೇ ಔಟ್ ಪಾಂಡುರಂಗಪ್ಪ ಲೇ ಔಟ್,ಶಿವಶಂಕರಪ್ಪ ಲೇ ಔಟ್,ಉಪ್ಪಾರ ಸಮುದಾಯ ಭವನ,ಸಂ. ರಂಗಯ್ಯ ಲೇ ಔಟ್ ಮೂಲಕ ಬಬ್ಬೂರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಾರಂಪರಿಕ ರಸ್ತೆಯನ್ನು ಕಳೆದ 03 ವರ್ಷಗಳಿಂದ ಬಬ್ಬೂರ್ ಸರ್ವೇ ನಂಬರ್ 39 ಮತ್ತು 40 ರ ನಡುವೆ ತಡೆ ಹಿಡಿಯಲಾಗಿದೆ.ಈ ಹಿಂದೆ ಎಲ್ಲಾ ಕಾಲಕ್ಕೂ ರಸ್ತೆ ಇರುವ ಬಗ್ಗೆ ಅಡ್ಡಿ ಪಡಿಸಿರುವ ಉಭಯ ಪಕ್ಷಗಾರರು ಒಪ್ಪಿಕೊಳ್ಳುತ್ತಾರೆ,ಆದಾಗ್ಯೂ ಅಳತೆ ಮಾಡಿಸಿ ರಸ್ತೆ ಗಡಿ ಗುರುತು ಮಾಡುವಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ರಸ್ತೆ ಬಂದ್ ಮಾಡಲಾಗಿದೆ, ಇಲ್ಲಿಯತನಕ ಅಧಿಕಾರಿಗಳು ಅನೇಕ ಬಾರಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದರೂ ಕೂಡ ರಸ್ತೆ ಬಿಡಿಸಿಕೊಡಲು ಸಾಧ್ಯವಾಗಿಲ್ಲ. ಈ ಭಾಗದ ಜನ ಜಾನುವಾರುಗಳು ಕೂಲಿ ಕಾರ್ಮಿಕರು,ಕಚೇರಿಗೆ ತೆರಳುವ ನೌಕರರು,ಅಂಗವಿಕಲರು,ವಯೋವೃದ್ಧರು, ಮಹಿಳೆಯರು,ಶಾಲಾ ಮಕ್ಕಳು ತಗ್ಗು ಗುಂಡಿಗಳಲ್ಲಿ ಬಿದ್ದು ಅಪಾಯ ಕೂಡ ಮಾಡಿ ಕೊಂಡಿರುತ್ತಾರೆ.ನಮಗೆ ಯಾವುದೇ ದಿಕ್ಕಿನಿಂದಲೂ ಸರಿಯಾದ ಶಾಶ್ವತ ರಸ್ತೆ ಸಂಪರ್ಕ ಇರುವುದಿಲ್ಲ,ಮಳೆಗಾಲದಲ್ಲಿ ಇಲ್ಲಿನ ನಾಗರಿಕರು ಕೆಸರುಗದ್ದೆ ಕೊಚ್ಚೆ ಗುಂಡಿಗಳಲ್ಲಿ ಸುತ್ತಿ ಬಳಸಿ ಅರ್ಧ ಕಿಲೋ ಮೀಟರ್ ನಲ್ಲಿ ಸಿಗುವ ಮುಖ್ಯ ರಸ್ತೆ ತಲುಪಲು 2 ಕಿಲೋ ಮೀಟರ್ ಚಲಿಸಿ ಹರಸಾಹಸ ಮಾಡಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗಬೇಕು. ದಾರಿ ಅಡ್ಡಿ ಪಡಿಸಿರುವ ಸ್ಥಳದಲ್ಲಿ ಕೊಳಚೆ ನೀರು ನಿಂತು ಹಂದಿ ಮತ್ತು ಸೊಳ್ಳೆಗಳ ಆಶ್ರಯ ತಾಣವಾಗಿ ಸಾಂಕ್ರಾಮಿಕ ರೋಗ ಭೀತಿ ಉಂಟುಮಾಡಿದೆ. ಸ್ವಂತ ವಾಹನ ಇಲ್ಲದೆ ಕಾಲ್ನಡಿಗೆಯಲ್ಲಿ ಓಡಾಡುವ ನಾಗರಿಕರು ಕಲ್ಲು ಮುಳ್ಳು,ಹಾವು ಚೇಳು,ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ತಗ್ಗು ಗುಂಡಿ,ಕೊಳಚೆ ದಾಟಿ ಮುಖ್ಯ ರಸ್ತೆ ತಲುಪಬೇಕು.ರಾತ್ರಿ ಸಮಯದಲ್ಲಿ ಗರ್ಭಿಣಿ,ಬಾಣಂತಿ, ನವಜಾತ ಶಿಶುಗಳು, ವಯೋವೃದ್ಧರು ತುರ್ತು ಚಿಕಿತ್ಸೆಗೆ ಹೋಗಿ ಬರಲು ಆಟೋರಿಕ್ಷಾ ಆಂಬುಲೆನ್ಸ್ ಕೂಡಾ ಮನೆ ಹತ್ತಿರ ಬರಲು ಸಾಧ್ಯವಿಲ್ಲ.ಪ್ರಯುಕ್ತ ಜಿಲ್ಲಾಧಿಕಾರಿಗಳು ದಯಮಾಡಿ ರಸ್ತೆ ಅಡ್ಡಿ ಪಡಿಸಿರುವ ಉಭಯ ಪಕ್ಷಗಾರರ ನಡುವೆ ರಾಜೀ ಸಂಧಾನ ಏರ್ಪಡಿಸಿ ಇಲ್ಲವೇ ತಾತ್ಕಾಲಿಕವಾಗಿ ಓಡಾಡಲು ಅನುಕೂಲ ಆಗುವಂತೆ ಚರಂಡಿ ನೀರನ್ನು ಒಂದು ಕಡೆ ಹರಿಯುವಂತೆ ಮಾಡಿ ಸೀಮೆ ಜಾಲಿ ಪಾರ್ಥೇನಿಯಂ ಗಿಡ ತೆಗಿಸಿ ಮೇಲ್ಕಂಡ ಪಾರಂಪರಿಕ ರಸ್ತೆಯನ್ನು ಬಿಡಿಸಿಕೊಟ್ಟು ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್,ಅಧ್ಯಕ್ಷ ಸಂತೋಷ ರಾಥೋಡ್,ಉಪಾಧ್ಯಕ್ಷ ಟಿ ಸ್ವಾಮಿ,ಕಾರ್ಯದರ್ಶಿ ಸಿ ಜಿ ಗೌಡ,ಸದಸ್ಯರಾದ ರಂಗಸ್ವಾಮಿ, ತಿಪ್ಪೇಸ್ವಾಮಿ,ಗೋವರ್ಧನ್,ಸನಾವುಲ್ಲಾ,ಶ್ರೀನಿವಾಸ್,ರಾಘವೇಂದ್ರ,ಮಧು,ಜಾಫರ್,ಮತ್ತಿತರರು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments