ಹಿರಿಯೂರು :
ವೇದಾವತಿ ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್ “ಡಾಗ್ ಸರ್ಕಲ್” ನಲ್ಲಿ ಮಂಗಳವಾರ ಬೆಳಿಗ್ಗೆ ಸಮೃದ್ಧವಾಗಿ ವಾಣಿವಿಲಾಸ ಸಾಗರ ಜಲಾಶಯದ ಶುದ್ಧ ಕುಡಿಯುವ ನೀರು ಬಂದು ಯುಗಾದಿ ಸಂಭ್ರಮ ಮನೆ ಮಾಡಿದೆ ಎಂಬುದಾಗಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.
ದೀಪದ ಕೆಳಗೆ ಕತ್ತಲೆ ಎಂಬಂತೆ ಕೂಗಳತೆ ದೂರದಲ್ಲಿ ಓವರ್ ಹೆಡ್ ಟ್ಯಾಂಕ್ ಇದ್ದಾಗ್ಯೂ ಕಳೆದ 3 ತಿಂಗಳಿಂದ ಸಮರ್ಪಕ ಕುಡಿಯುವ ನೀರು ಬಂದಿರಲಿಲ್ಲ. ನಾಗರೀಕ ಹಿತರಕ್ಷಣಾ ಸಮಿತಿ ಸದಸ್ಯರ ನಿರಂತರ ಬೇಡಿಕೆಗೆ ನಗರಸಭೆ ಅಧಿಕಾರಿಗಳು ಸ್ಪಂದಿಸಿ ನೀರು ಪೂರೈಕೆ ಮಾಡಿದ್ದಕ್ಕೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಚಂದ್ರಾ ಲೇ ಔಟ್ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಮಾಡಿಸಿ ನಾಗರೀಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು, ನಗರಸಭೆ ದಾಖಲೆ ಪ್ರಕಾರ ಪಾರ್ಕ್ ಜಾಗ ಅಳತೆ ಮಾಡಿಸಿ ಸಸಿ ನೆಡುವ ಮೂಲಕ ಉದ್ಯಾನವನ ಜಾಗ ಉಳಿಸಿ ಕೊಡಬೇಕು ಎಂದರಲ್ಲದೆ,
ನಗರಸಭೆಗೆ ಸಕಾಲದಲ್ಲಿ ಆಸ್ತಿ ತೆರಿಗೆ,ನೀರಿನ ಕಂದಾಯ ಪಾವತಿಸಿದ್ದಾಗ್ಯೂ ನಗರಸಭೆ ಲೆಡ್ಜರ್ ಗಳಲ್ಲಿ ಕಂದಾಯ ಬಾಕಿ ತೋರಿಸುತ್ತಿದೆ, ಅಕಸ್ಮಾತ್ ರಸೀದಿ ಕಳೆದುಕೊಂಡರೆ ನಮ್ಮ ಮಕ್ಕಳು ಮೊಮ್ಮಕ್ಕಳು ಮತ್ತೊಮ್ಮೆ ದಂಡ ಸಹಿತ ಬಾಕಿ ಕಂದಾಯ ಕಟ್ಟಬೇಕಾಗುತ್ತದೆ, ಪ್ರಯುಕ್ತ ಸಂಬಂಧಿಸಿದ ನೌಕರರು ಇಂತಹ ತಪ್ಪು ನಡೆಯದಂತೆ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್, ಉಪಾಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಸಿ.ಜಿ.ಗೌಡ ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments