ಮೊಳಕಾಲ್ಮೂರು ಅ.15 ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ತಂದೆ ಮಗನ ಹತ್ಯೆ ಮಾಡಿರುವ ಘಟನೆ ಮೊಳಕಾಲ್ಮೂರಿನ NMS ಬಡಾವಣೆಯಲ್ಲಿ ನಡೆದಿದೆ.
ಟಿವಿ ರಿಮೋಟ್ಗಾಗಿ ಅಣ್ಣ-ತಮ್ಮ ಜಗಳ: ಸಿಟ್ಟಿಗೆದ್ದು ಕತ್ತರಿ ಎಸೆದ ತಂದೆ, ಹಿರಿಮಗ ಸಾವು
ಚಂದ್ರಶೇಖರ್ (16) ಕೊಲೆಯಾದ ಬಾಲಕ. ತಂದೆ ಲಕ್ಷ್ಮಣ ಬಾಬು ಎಂಬಾತನಿಂತ ಕೊಲೆಯಾಗಿದೆ. ಅಣ್ಣ ತಮ್ಮದಿಂದು ಟಿವಿ ರಿಮೋಟ್ ಗಾಗಿ ಕಚ್ಚಾಡುತ್ತಿದ್ದರು. ಈ ವೇಳೆ ತಂದೆ ಕೋಪಗೊಂಡು ಕತ್ತರಿಯಿಂದ ಮಗನಿಗೆ ಹೊಡೆದಿದ್ದಾರೆ. ಕಿವಿ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
0 Comments