ಚಳ್ಳಕೆರೆ ಜನಧ್ವನಿ ವಾರ್ತೆ ಜ.16. ಬರಗಾಲ ಎಂದು ಸರಕಾರ ಘೋಷಣೆ ಮಾಡಿದರೂ ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ಬೆಳೆ ನಷ್ಟ ಕಂಡ ರೈತರಿಗೆ ಆರ್ಥಿಕ ನೆರವು ನೀಡುವ ಮಹತ್ವದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮತ್ತೆ ಮುಗ್ಗರಿಸಿದೆ. 2022-23ನೇ ರೈತರು ಬೆಳೆ ವಿಮೆ ಕಂತು ಕಟ್ಟಿದ್ದಾರೆ. ಆದರೆ, ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ರೈತರಿಗೆ ಮಾತ್ರ ಯೋಜನೆಯಡಿ ಬೆಳೆ ವಿಮೆ ಕಾಸು ಇನ್ನೂ ಕೈ ಸೇರಿಲ್ಲ ಜ.೩೦ರೊಳಗೆಲ ಬೆಳೆವಿಮೆ ಹಾಗೂ ಪರಿಹಾರ ನೀಡಿದ್ದರೆ ಲೋಕ ಸಭಾ ಚುನಾವಣೆ ಬಹಿಷ್ಟಕರಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ರೈತರಿಗೆ ಕರೆದಿದ್ದ ಕುಂದು ಕೊರತೆಗಳ ಸಭೆಯಲ್ಲಿ ರೈತ್ರರು ಅಕ್ರೋಶ ಹೊರಹಾಕಿದ್ದಾರೆ.
ಸಭೆಯಲ್ಲಿ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮತಾನಾಡಿ ಜಿಲ್ಲಾಧಿಕಾರಿಗಳ ಕುಂದುಕೊರತೆ ಸಭೆಯಲ್ಲೇ ಡಿ. ಒಳಗೆ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡುವಂತೆ ವಿಮೆ ಕಂಪನಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರೂ ಸಹ ಬೆಳೆ ವಿಮೆ ಕಂಪನಿಕರಳು ಒಬ್ಬರ ಮೇಲೆ ಒಬ್ಬರು ಹೇಳುತ್ತಿದ್ದಾರೆ.
ಚಳ್ಳಕೆರೆ ತಾಲ್ಲೂಕು ಬರ ಪೀಡಿತ ಪ್ರದೇಶವೆಂದು ಘೋಷಣೆಯಾದರೂ ರೈತರಿಗೆ ಬೆಳೆ ವಿಮೆ, ಬೆಳೆ ಪರಿಹಾರ ಇದುವರೆಗೆಯಾದರೂ ರೈತರ ಖಾತೆಗೆ ಬಂದಿಲ್ಲ, ಸಂಕಷ್ಟಕ್ಕೆ ಸಿಲುಕಿದ ರೈತರು ಪರಿಹಾರದ ಹಣಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಕೂಡಲೇ ಬೆಳೆ ವಿಮೆ ಕಂಪನಿ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ರೈರು ಲಕ್ಷಾಂತರ ಹಾಕಿದ ಬಂಡವಾಳ ಬೆಳೆ ನಷ್ಟದಿಂದ ಕಳೆದುಕೊಂಡಿದ್ದರೂ ರೈತರಿಗೆ ಪುಡಿಗಾಸು 2 ಸಾವಿರ ಪರಿಹಾರ ಮೊತ್ತ ಬಿಕ್ಷೆ ನೀಡಿದೆ ಈ ಕೂಡಲೆ ರೈತರ ಖರ್ಚು ಮಾಡಿದ ಅರ್ಧದಷ್ಟು ಬೆಳೆ ಪರಿಹಾರ ಹಾಗೂ ರೈತರು ಕಟ್ಟಿದ ಬೆಳೆವಿಮೆಯನ್ನು ಕೂಡಲೆ ಬಿಡುಗಡೆ ಮಾಡಬೇಕು ಬಿಡುಗಡೆ ಮಾಡದಿಂದ್ದರೆ ಕಂಪನಿಗಳು ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
![](https://janadhwani.in/wp-content/uploads/2024/01/IMG_20240116_120419-scaled.jpg)
ವಿಮೆ ಕಂಪನಿತಾಜ್ಯ ಮಟ್ಟದ ಅಧಿಕಾರಿ ಅಮಿತ್ ಮಾತನಾಡಿ ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ಶೇಂಗಾ ಬೆಳೆ ಸಂಪೂರ್ಣವಾಗಿ ಇಳುವರಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮಗೆ ಸಾಂಖಿಕ ಇಲಾಖೆಯಿಂದ ಇಳುವರಿ ಮಾಹಿತಿ ಬಂದಿಲ್ಲ, ಕಟಾವಿನ ಅವಧಿಗಿಂತ ಮುಂಚಿತವಾಗಿ ಬೆಳೆ ಕಟಾವು ಮಾಡಿರುವುದರಿಂದ ನಿಯಮುಲ್ಲಂಘಟನೆಯಾಗಿದ್ದು ಮಧ್ಯಂತರ ಬೆಳೆ ವಿಮೆ ಕೊಡಲು ಸಾಧ್ಯವಿಲ್ಲ ಬೆಳೆ ಸಮೀಕ್ಷೆ ವರದಿ ಬಂದ ನಂತರ ಬೆಳೆವಿಮೆ ನೀಡಲಾಗುವುದು ಎಂದು ಉತ್ತರಿಸಿದರು.
ಕೆ,ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಮಳೆ ಇಲ್ಲದೆ ಬೆಳೆಗಳು ಒಣಗಿವೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗ ಬಾರದು ಎಂದು ಕಟಾವು ಮಾಡಲಾಗಿದೆ ರೈತರು ಬೆಳೆಗಳಿಗೆ ಬೆಳೆ ವಿಮೆ ಕಟ್ಟುವಾಗ, ಕೊನೆಯ ದಿನಾಂಕವನ್ನು ನೀಡುತ್ತೀರಾ, ರೈತರಿಗೆ ಬೆಳೆ ವಿಮೆ ಹಾಕಲು ನಿಮಗೆ ಕೊನೆಯ ದಿನಾಂಕ ಇರಲ್ವಾ ಎಂದು ವಿಮೆ ಕಂಪನಿ ಅಧಿಕಾರಿಗಳನ್ನು ಪ್ರಶ್ಮೆ ಮಾಡಿದ ಅವರು, ರೈತರಿಗೆ ಬೆಳೆ ವಿಮೆ ಹಣವನ್ನು ಶೀಘ್ರದಲ್ಲಿ ನೀಡಬೇಕು ಎಂದರು.
![](https://janadhwani.in/wp-content/uploads/2024/01/IMG_20240116_120419-1-scaled.jpg)
.ಸಹಾಯಕ ಕೃಷಿ ನಿರ್ಧೇಕ ಡಾ.ಅಶೋಕ್ ಮಾತನಾಡಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಕಡಲೆ ಬೆಳೆ ಮಳೆಯಿಲ್ಲದೆ ಇಳುವರಿ ಕುಂಠಿತವಾಗಿರುವುದರಿAದ ಮಧ್ಯಂತರ ಬೆಳೆ ವಿಮೆ ನೀಡುವಂತೆ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಈ ವೇಳೆ ಶಿರಸ್ತೇದಾರ್ ಸದಾಶಿವಯ್ಯ, ತಾಂತ್ರಿಕ ಕೃಷಿ ಅಧಿಕಾರಿ ಮೇಘನಾಮ ಬೆಳೆ ವಿಮೆ ಕಂಪನಿಯ ಜಿಲ್ಲಾ ಪ್ರತಿನಿಧಿ ತೇಜಶ್ವಿನಿ, ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ರೈತಮುಖಂಡರಾದ ಶ್ರೀಕಂಠಮೂರ್ತಿ ಇತರ ರೈತ ಮುಖಂಡರು ಉಪಸ್ಥಿತರಿದ್ದರು.
0 Comments