ಚಳ್ಳಕೆರೆ ಜನಧ್ವನಿ ವಾರ್ತೆ ಮೇ 28 ಬೆಳಕಿಗೆ ಬಂದಿದೆ.
ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಶ್ವೇತ(20) ಎಂಬ ಯುವತಿ ಮೃತಪಟ್ಟ ಯುವತಿ ಯಾಗಿದ್ದಾಳೆ.
ಪದೇ ಪದೇ ಜ್ವರಬರುತ್ತಿದ್ದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಬಿಟ್ಟು ಬಿಟ್ಟು ಜ್ವರ ಬುತ್ತಿರುವುದರಿಂದ ಪರಿಚರಯಸ್ತರೊಬ್ಬರು ಚಳ್ಳಕೆರೆ ತಾಲೂಕಿನ ಗೊರ್ತು ಗ್ರಾಮದಲ್ಲಿ ಕೈ ಮಸುಕು( ಕೈ ಮದ್ದು)ಗೆ ಔಷಧಿ ಕೊಡುತ್ತಾರೆ ತೆಗೆದುಕೊಂಡರೆ ಗುಣವಾಗುತ್ತದೆ ಎಂದು ಹೇಳಿದ್ದಾರೆ.
ಶ್ವೇತ ಶನಿವಾರ ಬೆಳಗ್ಗೆ ಗೊರ್ಲತ್ತು ಗ್ರಾಮದಲ್ಲಿ ಹಾಲಿನಲ್ಲಿ ಔಷಧಿ ಸೇವನೆ ಮಾಡಲು ಕೊಟ್ಟಿದ್ದಾರೆ ಅದನ್ನು ಸೇವಿಸಿದ ನಂತರ ವಾಂತಿ ಬಂದಿದೆ . ಜ್ವರವೂ ಕಡಿಮೆಯಾಗಿದೆ ಊಟ ಸೇರುತ್ತಿರಲಿಲ್ಲ ಊರಿಗೆ ಹೋದ ನಂತರ ಹೆಚ್ಚು ವಾಂತಿಯಾಗಿದ್ದು ಆರೋಗ್ಯದಲ್ಲಿ ಏರು ಪೇರು ಆಗಿದ್ದು ಅದನ್ನು ತಡೆಯಲು ಆಗದೆ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ 26 ಭಾನುವಾರ ದಾಖಲು ಮಾಡಿದ್ದು ವೈದ್ಯರು ಚಿಕಿತ್ಸೆ ಕೊಡುವಾಗಲೆ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ.
ನನ್ನ ಮಗಳು ಶ್ವೇತಾ ಅವಳಿಗಿದ್ದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ನಾಟಿ ಔಷಧಿಯನ್ನು ಕೊಡಿಸಿದರೂ ಸಹ ಗುಣಮುಖವಾಗದೇ ಮೃತಪಟ್ಟಿದ್ದು ಮೃತಳ ಸಾವಿನ ಸಂಬಂದ ಯಾರ ಮೇಲೂ ಯಾವ ರೀತಿಯ ಅನುಮಾನ ಇರುವುದಿಲ್ಲ, ಮುಂದಿನ
ಕಾನೂನು ಕ್ರಮ ಜರುಗಿಸಿಬೇಕೆಂದು ಮೃತಳ ತಾಯಿ ರತ್ನಮ್ಮ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
0 Comments