ದಾವಣಗೆರೆ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರನ್ನು ಅಪಮಾನಿಸಿದ ಜೈನ್ ವಿವಿಯ ವಿದ್ಯಾರ್ಥಿಗಳು ಮತ್ತು ರಾಷ್ಟ್ರೀಯ ದಲಿತ ಸೇನೆ ರಾಷ್ಟ್ರೀಯ ಅಧ್ಯಕ್ಷ ಹಮಾರಾ ಪ್ರಸಾದ್ ರನ್ನ ದೇಶದ್ರೋಹಿಗಳೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಗತ್ತಿನ ಶ್ರೇಷ್ಠ, ಅತ್ಯುನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳು ಅಂಬೇಡ್ಕರ್ ಅವರನ್ನು ಸರ್ವ ಶ್ರೇಷ್ಠ ಜಾಗತಿಕ ಜ್ಞಾನಿಯೆಂದು ಪರಿಗಣಿಸಿದೆ. ಅದರೆ ಜ್ಞಾನದ ಕೇಂದ್ರವಾಗಬೇಕಾಗಿದ್ದ ಜೈನ್ ವಿವಿಯು ಜಾತಿಯ ಕೇಂದ್ರವಾಗಿದೆ. ಅಂಬೇಡ್ಕರ್ ಗೆ ಅಪಮಾನ ಮಾಡಿದ ಜೈನ್ ವಿವಿ ಪರವಾನಗಿ ರದ್ದು ಮಾಡಬೇಕು. ಜೈನ್ ವಿಶ್ವವಿದ್ಯಾಲಯ ಮತ್ತು ಅದರ ಸಂಸ್ಥೆಯ ಅಡಿಯಲ್ಲಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಶಾಲಾ ಕಾಲೇಜುಗಳನ್ನು ಸರ್ಕಾರವೇ ವಶಪಡಿಸಿಕೊಳ್ಳುವ ಮತ್ತು ಜೈನ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಂಬೇಡ್ಕರ್ ಅವರನ್ನು ಕೊಲ್ಲುತ್ತಿದೆ ಎಂದು ಘೋಷಿಸಿರುವ ಹರಾಮಾ ಪ್ರಸಾದ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗಾಂಧಿನಗರ ತಿಪ್ಪೇರುದ್ರಪ್ಪ, ಜಿ.ಸಿ ಪರಶುರಾಮ್, ಬಿ.ಎನ್ ನಾಗೇಶ್, ಕೆ.ರುದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
0 Comments