ಹಿರಿಯೂರು ತಾಲ್ಲೋಕು ಉಪ್ಪಾರ ಸಮಾಜ ಮತ್ತು ಚಂದ್ರಾ ಲೇ ಔಟ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಬಬ್ಬೂರು ಸರ್ವೇ ನಂಬರ್ 40 ರಲ್ಲಿ ಸಾರ್ವಜನಿಕ ರಸ್ತೆ ಆಕ್ರಮಿಸಿಕೊಂಡು ಅಡ್ಡಿಪಡಿಸಿರುವ ರಸ್ತೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶಿಲ್ದಾರ್ ಮತ್ತು ಪೌರಾಯುಕ್ತರು ಜಂಟಿ ಕಾರ್ಯಾಚರಣೆ ಮಾಡಿ ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಉಪ್ಪಾರ ಸಮುದಾಯ ಭವನದಲ್ಲಿ ಸಭೆ ನಡೆಸುತ್ತಿರುವ ಸುದ್ದಿ ತಿಳಿದು ಹಿರಿಯೂರು ಶಾಸಕರ ಪುತ್ರ ಸುಹಾಸ್ ಸುಧಾಕರ್ 3 ನೇ ವಾರ್ಡ್ ಕೌನ್ಸಿಲರ್ ಶಿವ ರಂಜಿನಿ ಯಾದವ್ ರವರ ಜೊತೆಗೆ ಸಭೆಗೆ ಆಗಮಿಸಿ,ಸ್ಥಳ ವೀಕ್ಷಣೆ ಮಾಡಿ ಈ ಭಾಗದ ನಾಗರೀಕರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ದಾರಿ ಬಿಡಿಸಿಕೊಡಲು ಸಚಿವರ ಜೊತೆ ಮಾತನಾಡಿ ನಿಮ್ಮ ನ್ಯಾಯ ಸಮ್ಮತ ಹೋರಾಟಕ್ಕೆ ಬೆಂಬಲ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಗರಸಭೆ ಕೌನ್ಸಿಲರ್ ಶಿವ ರಂಜಿನಿಯಾದವ್ ಮಾತನಾಡಿ 3 ನೇ ವಾರ್ಡ್ ನಾಗರೀಕರಿಗೆ ರಸ್ತೆ ಚರಂಡಿ,ಬೀದಿ ದೀಪ ಕುಡಿಯುವ ನೀರು,ಉದ್ಯಾನವನ ಮುಂತಾದ ಮೂಲಭೂತ ಸೌಕರ್ಯಗಳನ್ನು ಪ್ರಥಮ ಆದ್ಯತೆ ಮೇರೆಗೆ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ಆಲೂರು ರಾಮಣ್ಣ,ಕಾರ್ಯದರ್ಶಿ ತವಂಧಿ ಕರಿಯಾಲಪ್ಪ,ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್,ಅಧ್ಯಕ್ಷ ಸಂತೋಷ ರಾಥೋಡ್ ಉಪಾಧ್ಯಕ್ಷ ಸ್ವಾಮಿ ಕಾರ್ಯದರ್ಶಿ ಸಿ ಜಿ ಗೌಡ,ಹುಲುಗಲಕುಂಟೆ ಗ್ರಾ. ಪಂ ಸದಸ್ಯರಾದ ಶಶಿಕಲಾ,ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವಿ ಕುಭೇರಪ್ಪ ಮುಂತಾದವರು ಉಪಸ್ಥಿತರಿದ್ಧರು.
![](https://janadhwani.in/wp-content/uploads/2023/05/IMG-20230528-WA0005-1024x768.jpg)
0 Comments