ಚಳ್ಳಕೆರೆ ಜು.24.ತಾಲ್ಲೂಕು ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆಗೆ ಜನ ಜೀವನ ತಲ್ಲಣಗೊಂಡಿದ್ದು, ವ್ಯಾಪಾರ, ವಹಿವಾಟು ಹಾಗೂ ಕೃಷಿ ಚಟುವಟಿಕೆಗಳು ಕುಂಟಿತಗೊಂಡಿದ್ದು ಬಹುತೇಕ ನೆಲಕಚ್ಚಿದೆ. ಬಿಡದೇ ಸುರಿಯುತ್ತಿರುವ ಮಳೆಯು ರೈತಾಪಿ ವರ್ಗಕ್ಕೆ ಆತಂಕಕ್ಕೆ ದೂಡುವಂತೆ ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬಡವರ ಬಾದಮಿ ಎಂದೇ ಖ್ಯಾತಿ ಪಡೆದ ಶೇಂಗಾ ಬೆಳೆಯನ್ನು ಬಿತ್ತನೆ ಮಾಡಿ ಎಡೆ ಒಡೆದು ಬೇಸಾಯ ಮಾಡಲು ಮುಂದಾಗಿದ್ದು ಕಳೆದ ಒಂದು ವಾರದಿಂದ ಮೋಡ ಮುಸಿಕಿದ ವಾತಾವೆಣ ಜತೆಗೆ ಜಿಟಿ ಜಿಟಿ ಮಳೆಯಿಂದಾಗಿ ಒಲದಲ್ಲಿ ಕಳೆಯಂತಹ ಹುಲ್ಲು ಹೆಚ್ಚಾಗಿ ಬೆಳೆದಿದ್ದು ಎಡೆ ಕುಂಟೆ ಬೇಸಾಯ ಒಡೆಯಲು ಹಾಗೂ ಕಳೆ ತೆಗೆಯಲು ಮಳೆ ಅಡ್ಡಿಯಾಗಿದ್ದು ಶೇಂಗಾ ಬೆಳೆಯಲ್ಲಿ ಕಳೆಹುಲ್ಲು ಸ್ವಚ್ಚಗೊಳಿಸಲು ರೈತರು ಹರಸಹಾಸ ಪಡುವಂತಾಗಿ ಕಳೆನಾಷಕ ಔಷಧಿ ಸಿಂಪರಣೆಗೆ ಮುಂದಾಗಿದ್ದಾರೆ.
ಹೀಗೆ ನಿರಂತರ ಮಳೆ ಸುರಿಯುತ್ತಿದ್ದರೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಶೇಂಗಾ ಬೆಳೆಗಳು ವಿವಿಧ ಕೀಟಬಾದೆಗೆ ತುತ್ತಾಗುವ ಸಾಧ್ಯತೆ ಇದೆ ಎಂಬ ಆತಂಕವೂಸಹ ರೈತರಲ್ಲಿ ಮನೆ ಮಾಡಿದೆ.
ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಶೇಂಗಾ ಬೆಳೆಯ ಸಾಲಿನ ಮಧ್ಯೆ ಕಳೆ ತೆಗೆಯುವ ಕಾರ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ‘ಮಳೆ ಬೇಕು ಎಂದಾಗ ಬರದೆ, ಈಗ ಸತತ ಬಿಡದೇ ಸುರಿಯುವುದರುಂದ ಬೆಳೆಗಳಿಗೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments