ಚಿತ್ರದುರ್ಗ ಚಳ್ಳಕೆರೆ ತಾಲೂಕನ್ನು ಸರ್ಕಾರವು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದು ಇದ್ದರಿಂದ ಬೇಸಿಗೆ ಪ್ರಾರಂಭವಾಗುತ್ತಿದ್ದು ಜನ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು ಇದರಿಂದ ಹೆಗ್ಗೆರೆ ಸಮೀಪ ಇರುವ ಸಣ್ಣ ಕೆರೆಯನ್ನು ದೊಡ್ಡ ಕೆರೆಯನ್ನಾಗಿ ನಿರ್ಮಾಣ ಮಾಡಿಕೊಡುವಂತೆ ಹೆಗ್ಗೆರೆ ಗ್ರಾಮದ ರೈತರು ಚಿತ್ರದುರ್ಗದ ಪ್ರವಾಸಿ ಮಂದಿರದ ಹತ್ತಿರ ಸಂಸದ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಚಳ್ಳಕೆರೆಯು ಅತಿ ಕಡಿಮೆ ಮಳೆ ಬೀಳುವ ಬಯಲು ಸೀಮೆ ಪ್ರದೇಶವಾಗಿದ್ದು ಇದರಿಂದ ಹೆಗ್ಗೆರೆಯ ಪ್ರಕಾಶ್ ಸ್ಪಂಜ್ ಐರನ್ ಕಂಪನಿಯವರು ಸಣ್ಣಕೆರೆಯನ್ನು ನಿರ್ಮಿಸಿದ್ದು 2022 ರಲ್ಲಿ ಕೆರೆಯು ಭರ್ತಿಯಾಗಿದ್ದು ಈ ವರ್ಷ ಮಳೆಬಾರದೇ ಬರಗಾಲಕ್ಕೆ ತುತ್ತಾಗಿದ್ದು ಇದರಿಂದ ಕೆರೆಯ ನೀರು ಬತ್ತಿ ಹೋಗುತ್ತಿದ್ದು ರೈತರ ಬೋರ್ ವೆಲ್ ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದೆ ಇದರಿಂದ ಆದಷ್ಟು ಬೇಗ ದೊಡ್ಡ ಕೆರೆಯನ್ನಾಗಿ ನಿರ್ಮಾಣ ಮಾಡಿದರೆ ಮಳೆಗಾಲದಲ್ಲಿ ಮಳೆಯ ನೀರು ಶೇಖರಣೆಯಾಗಿ ನೀರು ತುಂಬಿದರೆ ರೈತರ ಬೋರ್ವೆಲ್ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದು ರೈತರು ಸಂಸದ ನಾರಾಯಣಸ್ವಾಮಿಯವರಿಗೆ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ನಾರಾಯಣಸ್ವಾಮಿ ಅವರು ಗ್ರಾಮೀಣ ಭಾಗಗಳಲ್ಲಿ ಜನಜಾನುವಾರುಗಳಿಗೆ. ರೈತರುಗಳಿಗೆ ನೀರಿನ ತೊಂದರೆ ಉಂಟಾಗದ ರೀತಿ ಅಗತ್ಯ ಕ್ರಮ ವಹಿಸಲು ಜಿಲ್ಲಾಧಿಕಾರಿ.ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಮಾತುಕತೆ ನಡೆಸುತ್ತೇನೆ. ನಾಲ್ಕೈದು ಗ್ರಾಮಗಳ ರೈತರ ಬೋರ್ ವೆಲ್ ಗಳಿಗೆ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರೆ ಆದಷ್ಟು ಬೇಗ ದೊಡ್ಡ ಕೆರೆಯನ್ನಾಗಿ ನಿರ್ಮಿಸಿ ಕೊಡಲು ಅನುಕೂಲ ಮಾಡಿಕೊಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.
ಮಾಧ್ಯಮದವರಿಗೆ ಮಾಹಿತಿ ನೀಡಿದ ರೈತ ದ್ಯಾಮಣ್ಣ ಹೆಗ್ಗೆರೆ ಸಮೀಪ ಪ್ರಕಾಶ ಸ್ಪಂಜ್ ಐರನ್ ಕಂಪನಿಯವರು ಸಣ್ಣ ಕೆರೆಯನ್ನು ನಿರ್ಮಿಸಿದ್ದು ಹೆಗ್ಗೆರೆ, ಕಾಪರಹಳ್ಳಿ ,ಜಡೆಕುಂಟೆ, ಗೊಲ್ಲಹಳ್ಳಿ, ಹುಲಿಕುಂಟೆ, ಹೂಟ್ಟಜನ ಕಪಿಲೆ ಗ್ರಾಮಗಳ ರೈತರಿಗೆ ಬಹಳ ಅನುಕೂಲವಾಗಿದೆ ಹಾಗೂ ಈ ವರ್ಷ ಬೋರ್ ವೆಲ್ ಗಳು ಸೇಫ್ ಆಗಿವೆ. ಇದರಿಂದ ಮಳೆ ನೀರು ಶೇಖರಣೆ ಮಾಡಲು ದೊಡ್ಡ ಕೆರೆ ನಿರ್ಮಿಸಿ ಕೊಡಲು ಸಂಸದರ ಹತ್ತಿರ ಮನವಿ ಮಾಡಿ ಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಸ್ ಆರ್ ಕೆಂಚಪ್ಪ, ಅಪರಂಗಪ್ಪ, ಕೆಂಚಪ್ಪ, ದುರುಗೇಶ್, ಗುರುಸ್ವಾಮಿ, ಹನುಮಂತ, ಲಕ್ಷ್ಮಣ, ರಂಗಪ್ಪ, ಬಾಲಕೃಷ್ಣ, ನವೀನ್ ಅಣ್ಣಪ್ಪ ಇತರರು ಇದ್ದರು.
0 Comments