ಚಳ್ಳಕೆರೆ: ತಾಲೂಕಿನ ನರಹರಿ ನಗರದಲ್ಲಿರುವ ಶ್ರೀ ನರಹರೇಶ್ವರ ದೇವಾಲಯದ ಪ್ರಾಂಗಣದಲ್ಲಿ ಶ್ರೀ ನರಹರಿ ಸೇವಾ ಪ್ರತಿಷ್ಠಾನ ವತಿಯಿಂದ ಬ್ರಹ್ಮಶ್ರೀ ಲಕ್ಷ್ಮಿನರಸಿಂಹ ಸದ್ಗುರು ಸ್ವಾಮಿ ಶ್ರೀ ಸಿಂಹಾದ್ರಿ ಸದ್ಗುರು ಸ್ವಾಮಿ ಹಾಗೂ ಮಾತೃಶ್ರೀ ನಾಗವೇಣಮ್ಮನವರ ದಿವ್ಯ ಮಂಗಳ ವಿಗ್ರಹ ಅನಾವರಣ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ನರಹರಿ ಸೇವಾ ಪ್ರತಿಷ್ಠಾನದ ಮಾರ್ಗದರ್ಶಕರಾದ ಶ್ರೀ ಶಾಂತರಾಮ್ ಸ್ವಾಮೀಜಿಗಳವರು ಮಾತನಾಡಿ ಚಳ್ಳಕೆರೆ ತಾಲೂಕು ಬರಪೀಡಿತ ಪ್ರದೇಶವಾಗಿದ್ದರೂ ಸಹ ಆಧ್ಯಾತ್ಮಿಕತೆಯಲ್ಲಿ ಉತ್ತಮ ನೆಲೆಯಾಗಿ ರೂಪುಗೊಳ್ಳುತ್ತಿದೆ ಇತ್ತೀಚಿನ ದಿನಗಳಲ್ಲಿ ವೇಗದ ಬದುಕು ಸಾಗಿಸುತ್ತಿರುವ ಸಾರ್ವಜನಿಕರು ಆಧ್ಯಾತ್ಮಿಕ ದ ಕಡೆ ಒಲವು ತೋರುತ್ತಿದ್ದಾರೆ. ಆಧ್ಯಾತ್ಮಿಕ ಭಾವನೆ ಜನರಲ್ಲಿ ಜಾಗೃತಿಗೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸದ್ಗುರು ಕಬೀರಾನಂದಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಜಾತಿ ಮತ ಧರ್ಮದ ಸಂಕೋಲೆಯಿಂದ ಹೊರಬಂದು ಚಿಂತನೆಗಳನ್ನು ನಡೆಸಿದಾಗ ಮಾತ್ರ ಸಮಾಜದ ದೃಷ್ಟಿಕೋನ ಬದಲಾಗಲು ಸಾಧ್ಯ ಮುಂದಿನ ಯುವ ಪೀಳಿಗೆಗೆ ಆಧ್ಯಾತ್ಮವನ್ನು ಬೋಧಿಸುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯವಾಗಬೇಕು ಪ್ರತಿ ಮಗು ಸಂಸ್ಕಾರಯುತವಾಗಿ ಬೆಳೆದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನರಹರಿ ಸದ್ಗುರು ಸಂಪ್ರದಾಯ ಪೀಠಾಧ್ಯಕ್ಷ ಡಾ. ರಾಜಾರಾಮ್ ಸ್ವಾಮೀಜಿ ಮಾತನಾಡಿ ಭಾರತೀಯ ಧಾರ್ಮಿಕ ನಂಬಿಕೆ ಉಳಿಯಬೇಕೆಂದರೆ ಇಲ್ಲಿ ಸನ್ಯಾಸಿಯತೆ ಗೃಹಸ್ಥನು ಮುಕ್ತಿ ಮಾರ್ಗ ಕಂಡುಕೊಳ್ಳಬೇಕು ಅಂತಹ ಚಿಂತನೆಯಲ್ಲಿ ಜಾತಿ ವರ್ಗ ಭೇದ ಮರೆತು 200 ವರ್ಷಗಳ ಕಾಲಮಾನದ ನರಹರಿ ಸದ್ಗುರು ಸ್ವಾಮೀಜಿಗಳು ಅನುಸರಿಸುವ ಗೃಹಸ್ತ ಸಂಪ್ರದಾಯ ಅಧ್ಯಾತ್ಮಿಕ ಸೇವಾ ಕಾರ್ಯ ನಡೆಸಲಾಗುತ್ತಿದೆ ಈ ಪರಂಪರೆ ಅನುಸರಣೆಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿರುವ ಲಕ್ಷ್ಮಿ ನರಸಿಂಹ ಸದ್ಗುರು ಸ್ವಾಮೀಜಿ ಸಿಂಹಾದ್ರಿ ಸದ್ಗುರು ಸ್ವಾಮೀಜಿ ಮಾತೃಶ್ರೀ ನಾಗವೇಣಿ ಅಮ್ಮನವರ ವಿಗ್ರಹಗಳ ಅನಾವರಣ ಕಾರ್ಯವನ್ನು ನಡೆಸಲಾಗುತ್ತದೆ ಪ್ರತಿಯೊಬ್ಬರು ಲೋಕ ಮತ್ತು ಬದುಕಿನ ನಡುವೆ ತನ್ನನ್ನು ತಾನು ಅರ್ಥೈಸಿಕೊಳ್ಳಲು ಪ್ರಯತ್ನ ಪಡಬೇಕು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಬೆಳಗ್ಗೆಯಿಂದಲೇ ಸುಪ್ರಭಾತ ಪ್ರಾರ್ಥನೆ, ಪುಣ್ಯ ವಾಚನ ರುದ್ರಭಿಷೇಕ ಗಣ ಹೋಮ ನವಗ್ರಹ ವಾಸ್ತು ಹೋಮ ಸಾಮೂಹಿಕ ಗುರುಮಾಲ ಮಂತ್ರ ಹೋಮ ಭೂಮಿ ಪೂಜೆ ಹಾಗೂ ದಿವ್ಯ ಮಂಗಳ ವಿಗ್ರಹಗಳ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಶಾರದಾಶ್ರಮದ ಮಾತಾಜಿ ತ್ಯಾಗಮಯಿ ನರಹರಿ ಸೇವಾ ಪ್ರತಿಷ್ಠಾನ ಹಾಗೂ ಸ್ಥಾನಿಕ ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿ ಬಿಸಿಮೂರ್ತಿ ಎನ್ ಪದ್ಮನಾಭ ಪುರುಷೋತ್ತಮ ಸಿಕೇಶ್ ದರ್ಶನ್ ಸುಧಾಕರ್ ಬಿಸಿ ವೆಂಕಟೇಶ್ ಮೂರ್ತಿ ಬಿಸಿ ರಾಘವೇಂದ್ರ ಗುಪ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments