ಜವಗೊಂಡನಹಳ್ಳಿಯ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಆಟೋ ಅಪಘಾತ, ಸ್ಥಳದಲ್ಲಿಯೇ ಸಾವನ್ನಪ್ಪಿದ ದೇವರಾಜ್ ಗಾಯಾಳುಗಳಿಗೆ ಡಿ.ಸುಧಾಕರ್ ರಿಂದ ವೈಯಕ್ತಿಕಸಹಾಯ

by | 02/03/23 | ಅಪಘಾತ


ಹಿರಿಯೂರು :
ತಾಲ್ಲೂಕಿನ ರಂಗಾಪುರಗ್ರಾಮದಿಂದ ಜವಗೊಂಡನಹಳ್ಳಿ ಗಾರ್ಮೆಟ್ಸ್ ಕೆಲಸಕ್ಕೆ ತೆರಳುತಿದ್ದ ಆಟೋ ಗೌಡನಹಳ್ಳಿ ತೋಟದಹತ್ತಿರ ಅಪಘಾತವಾಗಿದ್ದು, ಅಪಘಾತದಲ್ಲಿ ದೇವರಾಜ್(32) ಎಂಬ ಯುವಕನು ಸ್ಥಳದಲ್ಲೇ ಸಾವನ್ನಪಿದ್ದು, ಜೊತೆಗೆ 5-6 ಜನಕ್ಕೆ ತೀರ್ವ ಗಾಯಗಳಾಗಿವೆ ಎನ್ನಲಾಗಿದೆ.
ಈ ವಿಚಾರ ತಿಳಿದ ಮಾಜಿ ಸಚಿವರಾದ ಡಿ.ಸುಧಾಕರ್ ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಆಸ್ಪತ್ರೆಗೆ ಕಳುಹಿಸಿ, ಸಾವಿಗೀಡಾದ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಕಾಂಗ್ರೆಸ್ ಮುಖಂಡರುಗಳು ಗಾಯಗೊಂಡಿರುವ ಎಲ್ಲರಿಗೂ ಆರ್ಥಿಕ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗಾಯಾಳುಗಳ ಕುಟುಂಬಸ್ಥರು, ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು, ಆಸ್ಪತ್ರೆಯ ವೈದ್ಯರು, ದಾದಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *