ಜಮೀನಿನಲ್ಲಿದ್ದ ಹನಿ ನೀರಾವರಿಯ ಡ್ರಿಪ್-ವೈರ್ ಕಳವು ::
ಮೊಳಕಾಲ್ಕೂರು, ನವೆಂಬರ್ 28 : ಮೊಳಕಾಲ್ಕೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ವಾಸಿ ವೀರಾರೆಡ್ಡಿ
(58) ತಂದೆ ನಾಗಣ್ಣ ರವರ ಬಾಬು ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ, ರಿ.ಸ.ನಂ:115/4 ರಲ್ಲಿ 02
ಎಕರೆ, ರಿ.ಸ.ನಂ:115/3 ರಲ್ಲಿ 02 ಎಕರೆ ಜಮೀನುಗಳಲ್ಲಿ ಡ್ರಿಪ್-ವೈರ್ ನ್ನು ಹಾಕಿದ್ದು ಹನಿ ನೀರಾವರಿ
ಮಾಡಿಕೊಂಡಿರುತ್ತಾರೆ. ವೀರಾರೆಡ್ಡಿರವರ ಜಮೀನಿನಲ್ಲಿರುವ 04 ಕೊಳವೆ ಬಾವಿಗಳು ಉತ್ತಮವಾಗಿ ಕಾರ್ಯ
ನಿರ್ವಹಿಸುತ್ತಿದ್ದುದರಿಂದ, ಇವರ ಮೂರು ಜಮೀನಿಗೆ ಹಾಕಿದ್ದ ಸುಮಾರು 20 ಸಾವಿರ ಮೌಲ್ಯದ ಡ್ರಿಪ್-ವೈರ್
ನ್ನು 72 ಸಿಂಬೆ-ಬಂಡಲ್ ಗಳಾಗಿ ಮಾಡಿ ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ ಜಮೀನಿನಲ್ಲಿ ಸಂಗ್ರಹ
ಮಾಡಿದ್ದು, ದಿನಾಂಕ:23.11.2023 ರಿಂದ ದಿನಾಂಕ:27.11.2023 ಮಧ್ಯದ ಅವಧಿಯಲ್ಲಿ ವೀರಾರೆಡ್ಡಿ ರವರು
ತಮ್ಮ ಮಾವನ ಊರಾದ ಬಳ್ಳಾರಿಗೆ ಹೋಗಿರುವಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಬೈಕ್ ಅಒಘಸತ ಇಬ್ಬರಿಗೆ ಗಾಯ.
ಮಾರಣಾಂತಿಕವಲ್ಲದಅಪಘಾತ ಪ್ರಕರಣಗಳು ::
ಚಿತ್ರದುರ್ಗ, ನವೆಂಬರ್ 28 : ಚಿತ್ರದುರ್ಗ ಟೌನ್ ನ ಕಾಮನಬಾವಿ ಬಡಾವಣೆ ನಿವಾಸಿ ಹರೀಶ್ (35) ತಂದೆ
ಲೇಟ್ ಚಂದ್ರಪ್ಪ ರವರು ದಿನಾಂಕ.27.11.2023 ರಂದು ತನ್ನ ಬಾಬು ನಂ.ಕೆ.ಎ.16-ಈಯು-6298 ನೇ
ಮೋಟಾರ್ ಸೈಕಲ್ ನಲ್ಲಿ ತಮ್ಮನಾದ ಹನುಮಂತಪ್ಪ(28) ತಂದೆ ಲೇಟ್ ಚಂದ್ರಪ್ಪ ರವರ ಜೊತೆಗೆ
ಕಾಸವನಹಳ್ಳಿ ಗ್ರಾಮದ ತಮ್ಮ ತೋಟಕ್ಕೆ ಹೋಗಿ ರಾತ್ರಿ ವಾಪಸ್ಸು ಮನೆಗೆ ಬರುತ್ತಿರುವಾಗ ಸುಮಾರು ರಾತ್ರಿ
10.20 ಗಂಟೆ ಸಮಯದಲ್ಲಿ ಚಿತ್ರದುರ್ಗ ಟೌನ್ ನ ಚಳ್ಳಕೆರೆ ಗೇಟ್ ಮೇಲ್ಬಾಗದ ಬೆಂಗಳೂರು ಕಡೆಯಿಂದ
ದಾವಣಗೆರೆ ಹಳೆಯ ಎನ್.ಹೆಚ್-48 ರಸ್ತೆಯಲ್ಲಿ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಹನುಮಂತಪ್ಪ
ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ
ಯಾವುದೋ ಒಂದು ಎಮ್ಮೆಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಪರಿಣಾಮ ಬೈಕ್ ಸಮೇತ ಇಬ್ಬರೂ ರಸ್ತೆಗೆ
ಬಿದ್ದು, ಹಿಂಬದಿ ಕುಳಿತಿದ್ದ ಹರೀಶ್ ರವರಿಗೆ ಮೈ-ಕೈಗೆ, ಸೊಂಟಕ್ಕೆ ಒಳಪೆಟ್ಟು ಬಿದ್ದು ನೋವುಂಟಾಗಿರುತ್ತದೆ
ಹಾಗೂ ಚಾಲಕ ಹನುಮಂತಪ್ಪನಿಗೂ ಸಹ ಒಳಪೆಟ್ಟು ಬಿದ್ದು ನೋವಾಗಿದ್ದು, ಈ ಬಗ್ಗೆ ಚಿತ್ರದುರ್ಗ ಸಂಚಾರಿ
ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments