ಜಮೀನಿನಲಲ್ಲಿದ್ದ ಡ್ರಿಪ್ ವೈರ್ ಕಳವು- ಬೈಕ್ ಅಪಘಾತ ಇಬ್ಬರಿಗೆ ಗಾಯ.

by | 28/11/23 | ಕ್ರೈಂ

ಜಮೀನಿನಲ್ಲಿದ್ದ ಹನಿ ನೀರಾವರಿಯ ಡ್ರಿಪ್-ವೈರ್ ಕಳವು ::
ಮೊಳಕಾಲ್ಕೂರು, ನವೆಂಬರ್ 28 : ಮೊಳಕಾಲ್ಕೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ವಾಸಿ ವೀರಾರೆಡ್ಡಿ
(58) ತಂದೆ ನಾಗಣ್ಣ ರವರ ಬಾಬು ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ, ರಿ.ಸ.ನಂ:115/4 ರಲ್ಲಿ 02
ಎಕರೆ, ರಿ.ಸ.ನಂ:115/3 ರಲ್ಲಿ 02 ಎಕರೆ ಜಮೀನುಗಳಲ್ಲಿ ಡ್ರಿಪ್-ವೈರ್ ನ್ನು ಹಾಕಿದ್ದು ಹನಿ ನೀರಾವರಿ
ಮಾಡಿಕೊಂಡಿರುತ್ತಾರೆ. ವೀರಾರೆಡ್ಡಿರವರ ಜಮೀನಿನಲ್ಲಿರುವ 04 ಕೊಳವೆ ಬಾವಿಗಳು ಉತ್ತಮವಾಗಿ ಕಾರ್ಯ
ನಿರ್ವಹಿಸುತ್ತಿದ್ದುದರಿಂದ, ಇವರ ಮೂರು ಜಮೀನಿಗೆ ಹಾಕಿದ್ದ ಸುಮಾರು 20 ಸಾವಿರ ಮೌಲ್ಯದ ಡ್ರಿಪ್-ವೈರ್
ನ್ನು 72 ಸಿಂಬೆ-ಬಂಡಲ್ ಗಳಾಗಿ ಮಾಡಿ ರಿ.ಸ.ನಂ:115/5 ರಲ್ಲಿ 04 ಎಕರೆ 26 ಗುಂಟೆ ಜಮೀನಿನಲ್ಲಿ ಸಂಗ್ರಹ
ಮಾಡಿದ್ದು, ದಿನಾಂಕ:23.11.2023 ರಿಂದ ದಿನಾಂಕ:27.11.2023 ಮಧ್ಯದ ಅವಧಿಯಲ್ಲಿ ವೀರಾರೆಡ್ಡಿ ರವರು
ತಮ್ಮ ಮಾವನ ಊರಾದ ಬಳ್ಳಾರಿಗೆ ಹೋಗಿರುವಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಬೈಕ್ ಅಒಘಸತ ಇಬ್ಬರಿಗೆ ಗಾಯ.
ಮಾರಣಾಂತಿಕವಲ್ಲದಅಪಘಾತ ಪ್ರಕರಣಗಳು ::
ಚಿತ್ರದುರ್ಗ, ನವೆಂಬರ್ 28 : ಚಿತ್ರದುರ್ಗ ಟೌನ್ ನ ಕಾಮನಬಾವಿ ಬಡಾವಣೆ ನಿವಾಸಿ ಹರೀಶ್ (35) ತಂದೆ
ಲೇಟ್ ಚಂದ್ರಪ್ಪ ರವರು ದಿನಾಂಕ.27.11.2023 ರಂದು ತನ್ನ ಬಾಬು ನಂ.ಕೆ.ಎ.16-ಈಯು-6298 ನೇ
ಮೋಟಾರ್ ಸೈಕಲ್ ನಲ್ಲಿ ತಮ್ಮನಾದ ಹನುಮಂತಪ್ಪ(28) ತಂದೆ ಲೇಟ್ ಚಂದ್ರಪ್ಪ ರವರ ಜೊತೆಗೆ
ಕಾಸವನಹಳ್ಳಿ ಗ್ರಾಮದ ತಮ್ಮ ತೋಟಕ್ಕೆ ಹೋಗಿ ರಾತ್ರಿ ವಾಪಸ್ಸು ಮನೆಗೆ ಬರುತ್ತಿರುವಾಗ ಸುಮಾರು ರಾತ್ರಿ
10.20 ಗಂಟೆ ಸಮಯದಲ್ಲಿ ಚಿತ್ರದುರ್ಗ ಟೌನ್ ನ ಚಳ್ಳಕೆರೆ ಗೇಟ್ ಮೇಲ್ಬಾಗದ ಬೆಂಗಳೂರು ಕಡೆಯಿಂದ
ದಾವಣಗೆರೆ ಹಳೆಯ ಎನ್.ಹೆಚ್-48 ರಸ್ತೆಯಲ್ಲಿ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಹನುಮಂತಪ್ಪ
ಮೋಟಾರ್‌ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ
ಯಾವುದೋ ಒಂದು ಎಮ್ಮೆಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಪರಿಣಾಮ ಬೈಕ್ ಸಮೇತ ಇಬ್ಬರೂ ರಸ್ತೆಗೆ
ಬಿದ್ದು, ಹಿಂಬದಿ ಕುಳಿತಿದ್ದ ಹರೀಶ್ ರವರಿಗೆ ಮೈ-ಕೈಗೆ, ಸೊಂಟಕ್ಕೆ ಒಳಪೆಟ್ಟು ಬಿದ್ದು ನೋವುಂಟಾಗಿರುತ್ತದೆ
ಹಾಗೂ ಚಾಲಕ ಹನುಮಂತಪ್ಪನಿಗೂ ಸಹ ಒಳಪೆಟ್ಟು ಬಿದ್ದು ನೋವಾಗಿದ್ದು, ಈ ಬಗ್ಗೆ ಚಿತ್ರದುರ್ಗ ಸಂಚಾರಿ
ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page