ನಾಯಕನಹಟ್ಟಿ ನ.27. ಕೃಷಿ ಚಟುವಟಿಕೆಗೆ ಜಮೀನುಗಳಿಗೆ ಜನ, ಜಾನುವಾರು, ಎತ್ತಿನ ಗಾಡಿ, ಟ್ರ್ಯಾಕ್ಟರ್ಗ ಳು ಹೋಗಿಬರಲು ದಾರಿಯಿಲ್ಲದೆ ತೊಂದರೆಯಾಗಿದೆ ಕೂಡದಲೇ ದಾರಿ ಬಿಡಿಸಿಕೊಡುವಂತೆ ರೈತ ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದ್ದಾನೆ.
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಭಾಗ್ಯಮ ಎಂಬುವರಿಗೆ 4 ಎಕರೆ ಜಮೀನು ಗ್ರಾಮದ ಸಮೀಪದಲ್ಲಿದ್ದು ಹೊಲಕ್ಕೆ ಹೋಗುವುದಕ್ಕೆ ಬರುವುದಕ್ಕೆ ರಸ್ತೆಯೇ ಇಲ್ಲ ಎಂದು ರೈತರು ತಹಶೀಲ್ದಾರ್ ಕಚೇರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಗ್ರಾಮ ನಕಾಶೆಯಲ್ಲಿರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿಕರು ಸಂಚರಿಸಲು ಜಮೀನು ಮಾಲೀಕರು ಅಡ್ಡಿಪಡಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಸುತ್ತೋಲೆ ಹೊರಡಿಸಿದ್ದು, ರೈತರ ದಾರಿ ಹಕ್ಕನ್ನು ರಕ್ಷಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿ ದೂರು ನೀಡಲಾಗಿದ್ದರೂ ದಾರಿ ತೆರವುಗೊಳಿಸಲು ಮುಂದಾಗಿಲ್ಲ
ರೈತ ಬಸವರಾಜ್ ಮಾತನಾಡಿ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳ ಜಾಗವನ್ನು ಗ್ರಾಮಸ್ಥರು ಆಕ್ರಮವಾಗಿ ಒತ್ತುವರಿ ಮಾಡಿಕೊಂಡು ಉಳುಮೆವಮಾಡುತ್ತಿದ್ದಾರೆ ಇದರಿಂದ ನಮ್ಮ ಜಮೀನಿಗೆ ಹೋಗಲು ದಾರಿ ಇಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಅರ್ಜಿ ನೀಡಿದರು ಯಾರೂ ಇತ್ತ ಬಂದಿಲ್ಲ ಒತ್ತುವರಿ ದಾರಿ ತೆರವುಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರೈತರ ಜಮೀನಿಗೆ ಹೋಗವ ದಾರಿ ಒತ್ತುವರಿಯನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.
![](https://janadhwani.in/wp-content/uploads/2023/11/IMG-20231127-WA0150-1.jpg)
0 Comments