ಹಿರಿಯೂರು :
ಜನರಲ್ ತಿಮ್ಮಯ್ಯ ಸಾಹಸ ತರಬೇತಿ ಅಕಾಡೆಮಿ ತರಬೇತಿ ಕೇಂದ್ರವು ವಿದ್ಯಾರ್ಥಿಗಳು, ಸ್ವಯಂ ಸೇವಕರಿಗೆ ಸಾಹಸ ಚಟುವಟಿಕೆಗಳ ಬಗ್ಗೆ ಪರಿಚಯಿಸಿ, ಯುವಕರಲ್ಲಿ ಸಾಹಸ ಮನೋಭಾವನೆ ತುಂಬಿ, ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ ಅವರ ಉಜ್ವಲ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂಬುದಾಗಿ ಜನರಲ್ ತಿಮ್ಮಯ್ಯ ಸಾಹಸ ತರಬೇತಿ ಅಕಾಡೆಮಿ ಮ್ಯಾನೇಜರ್ ಶಬ್ಬೀರ್ ತಿಳಿಸಿದ್ದಾರೆ.
ಮಕ್ಕಳಿಗೆ ನಿರಂತರವಾಗಿ ತರಬೇತಿ ಶಿಬಿರಗಳು ನಡೆಯುತ್ತಿದ್ದು, ಬೇಸಿಗೆ ಶಿಬಿರ ವಿಶೇಷವಾಗಿರುತ್ತದೆ, ಈಜುವುದರ ಜೊತೆಗೆ ಅನೇಕ ತರಬೇತಿಗಳನ್ನು ಪಡೆದ ಮಕ್ಕಳು ಖೇಲ್ ಇಂಡಿಯಾ, ನ್ಯಾಷನಲ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪದಕ ಪಡೆದಿದ್ದಾರೆ, ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
2008 ರಲ್ಲಿ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್, ವಿವಿಎಸ್ ಡ್ಯಾಂ ಹಿನ್ನೀರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಜನರಲ್ ತಿಮ್ಮಯ್ಯ ಸಾಹಸ ತರಬೇತಿ ಅಕಾಡೆಮಿ ಸ್ಥಾಪಿಸಿದ್ದು, ಅಂದಿನಿಂದ ಬೇಸಿಕ್ ಜಲ ಸಾಹಸ ಕ್ರೀಡಾ ತರಬೇತಿಯನ್ನು ಶಿಬಿರಗಳ ಮೂಲಕ ನೀಡಲಾಗುತ್ತಿದೆ.
ಈ ಕೇಂದ್ರದಲ್ಲಿ ತರಬೇತಿಯು ನಿರಂತರವಾಗಿ ನಡೆಯುತ್ತಿದ್ದು, 10-14, 14-17 ವರ್ಷದ ಮಕ್ಕಳು, ಶಾಲಾ ಕಾಲೇಜು ಮಕ್ಕಳು, ನಾನಾ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಬಹುದು. ಇಲಾಖೆ ವತಿಯಿಂದ ಅವರನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಇಲ್ಲಿ 3 ದಿನದ ಓರಿಯಂಟೇಷನ್, 5 ಮತ್ತು 10 ದಿನದ ಬೇಸಿಕ್ಸ್ ಹಾಗೂ ಅಡ್ವಾನ್ಸ್ 21 ದಿನದ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗಳ ತರಬೇತಿ ನೀಡಲಾಗುತ್ತಿದೆ.
ಈ ತರಬೇತಿ ಶಿಬಿರದಲ್ಲಿ ಈಜು, ರ್ಯಾಪಿಂಗ್, ಕಾಯಕಿಂಗ್, ವಿಂಗ್ ಸರ್ಫಿಂಗ್, ಕೋನೋ, ಬಾನಾನ ರೈಡ್, ಸೈಕ್ಲಿಂಗ್, ನೇಚರ್ ಸ್ಟಡಿ, ಪಕ್ಷಿಗಳ ವೀಕ್ಷಣೆ, ಹಾವುಗಳಿಂದ ರಕ್ಷಣೆ ಪಡೆಯುವ ಬಗ್ಗೆ, ಚಿತ್ರಕಲೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಊಟ, ವಸತಿಗಳೊಂದಿಗೆ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. ಆದರೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವಿಲ್ಲ.
ಅಲ್ಲದೆ ಪ್ರತಿವರ್ಷವೂ ಬೇಸಿಗೆ ಶಿಬಿರಗಳು ನಡೆಯುತ್ತಿದ್ದು, ಈ ವರ್ಷ 3 ಬ್ಯಾಚ್ ನಡೆದಿದೆ, ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಭಾಗವಹಿಸಿ, ಸೂಕ್ತ ತರಬೇತಿ ಪಡೆದಿದ್ದಾರೆ. ಈ ಜಿಲ್ಲೆ ಮಾತ್ರವಲ್ಲದೆ ದಾಂಡೇಲಿ, ರಾಮನಗರ, ಬಾದಾಮಿ, ಕಾರವಾರ, ಕೂರ್ಗ್ ಹಾಗೂ ವಿವಿಸಾಗರ ಕೇಂದ್ರದಲ್ಲಿ ತರಬೇತಿ ನಡೆಯುತ್ತದೆ. ಒಂದು ಬ್ಯಾಚ್ ನಲ್ಲಿ ಕನಿಷ್ಠ 50 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಅವರಿಗೆ ವಿಮಾ ಸೌಲಭ್ಯವೂ ಇರುತ್ತದೆ, ವರ್ಷದಲ್ಲಿ ಕನಿಷ್ಠ 15-20 ಬ್ಯಾಚ್ ಗಳಿಗೆ ತರಬೇತಿ ನಡೆಯುತ್ತದೆ.
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೂ ವಿಶೇಷ ಅನುದಾನದಡಿ ತರಬೇತಿ ಕೊಡಲಾಗುತ್ತದೆ. ಎಂದರಲ್ಲದೆ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಎನ್.ಎಸ್.ಎಸ್. ಎನ್.ಸಿಸಿ, ಪೋಲೀಸ್ ಇಲಾಖೆ, ಆರ್.ಎಸ್.ಐ ಪೋಲೀಸ್ ತಂಡದವರಿಗೂ ತರಬೇತಿ ನೀಡಲಾಗುತ್ತಿದ್ದು, ಸಾಕಷ್ಟು ತಂಡಗಳು ಭಾಗವಹಿಸಿ ತರಬೇತಿ ಪಡೆದಿದ್ದಾರೆ.
ಅಲ್ಲದೇ ಈ ಕೇಂದ್ರದಲ್ಲಿ ತರಬೇತಿ ಪಡೆದ ಸುಮಾರು ಹತ್ತಾರು ಮಂದಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಪಡೆದಿದ್ದಾರೆ. ಈ ಕೇಂದ್ರವು ರಾಷ್ಟ್ರಮಟ್ಟದ ಕಾಯಕಿಂಗ್ ಸ್ಪೋರ್ಟ್ಸ್ ನಲ್ಲಿ 2 ನೇ ಸ್ಥಾನ ಅಲಂಕರಿಸಿದ್ದಾರೆ. ಈ ತರಬೇತಿ ಕೇಂದ್ರದಲ್ಲಿ ಓರ್ವ ಮಹಿಳಾ ಟ್ರೈನರ್, ಮೂವರು ಪುರುಷರು ಟ್ರೈನರ್, ಒಬ್ಬ ನೇಚರ್ ಸ್ಟಡಿ ಟ್ರೈನರ್ ಹಾಗೂ 3 ಕಾವಲುಗಾರರು, ಅಡುಗೆ ಭಟ್ಟರು ಈ ತರಬೇತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments