ಜನಧ್ವನಿ ವರದಿ ಫಲಶೃತಿ
ಚಳ್ಳಕೆರೆ ಮೇ 15 ಜೀವದ ಹಂಗು ತೊರೆದು ಕೆರೆಯಲ್ಲಿ ಸುರಂಗ ಕೊರೆದು ಮರಳು ತುಂಬುತ್ತಿರುವ ದೃಶ್ಯ ನೋಡಿದರೆ ಜೀವ ಝಲ್ ಎನ್ನುವಂತಿದೆ ಎಂಬ ತಲೆಬರಹದಡಿಯಲ್ಲಿ ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಯಲ್ಲಿನ ಸುರಂಗ ಹಾಗೂ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.
ಜನಧ್ವನಿ ನ್ಯೂಸ್ ವರದಿ ಬಿತ್ತಿರಿಸಿದಾಗ
ಹೌದು ಇದು ಚಳ್ಳಕೆರೆ ನಗರ ಸಮೀಪದ ಬೊಮ್ಮಸಂದ್ರ ಕೆರೆಯಲ್ಲಿ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಸುಮಾರು 10 ರಿಂದ 15 ಎತ್ತಿನಗಾಡಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದು. ಮೇಲಿನ ಕಪ್ಪು ಮಣ್ಣು ತೆಗೆದು ಸುಮಾರು 5 ರಿಂದ 8 ಅಡಿಯವರೆಗೆ ಸುರಂಗಕೊರೆದು ಮರಳು ತೆಗೆಯುತ್ತಾರೆ ಎಂದು ಸುದ್ದಿ ಬಿತ್ತಿರಿಸಿದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಜನಧ್ವನಿ ಸುದ್ದಿ ಬೆಳಕು ಚೆಲ್ಲಿದ ನಂತರ ಪೊಲೀಸ್ ಸಿಬ್ಬಂದಿಗಳು ಕೆರೆಯಲ್ಲಿನ ಗುಂಡಿ ಮರಳು ತುಂಬಲು ತೆಗೆದ ಸುರಂಗಗಳನ್ನು ಮುಚ್ಚುತ್ತಿರುವುದು ಹಾಗೂ ಕೆರೆಗೆ ಅಕ್ರಮ ಪ್ರವೇಶ ಮಾಡದಂತೆ ಜೆಸಿಬಿ ಯಂತ್ರದಿಂದ ಟ್ರಂಚ್ ತೆಗೆಯುತ್ತಿರುವುದು,
ಕೆರೆಯಲ್ಲಿ ಅಕ್ರಮ ಮಣ್ಣು ಹಾಗೂ ಮರಳು ಸಾಗಾಟದಿಂದ ಕೆರೆಯ ಚಿತ್ರಣವೇ ಬದಲಾಗಿದ್ದು ಕೆರೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ಮರಳಿನ ಸುರಂಗಮಾರ್ಗ ಗಳನ್ನು ಜೆಸಿಬಿ ಯಂತ್ರದಿಂದ ಮುಚ್ಚಿದ್ದಾರೆ. ಕೆರೆಯಲ್ಲಿ ಅಕ್ರಮ ಪ್ರವೇಶ ಮಾಡದಂತೆ ಕೆರೆಗೆ ಪ್ರವೇಶ ಮಾಡುವ ದಾರಿಗೆ ಟ್ರಚ್ ಹೊಡೆಸಿದ್ದಾರೆ.ಮರಳು ತುಂಬುವ ಎತ್ತಿನ ಗಾಡಿಗಳಿಗೆ ಮತ್ತೆ ಇತ್ತ ಸುಳಿಯ ಬಾರದು ಎಂದು ಎಚ್ಚರಿಗೆ ನೀಡಿ ಕಳಿಸಿದ್ದಾರೆ.
ಜೀವ ರಕ್ಷಣೆಯಿಲ್ಲದೆ ಸುರಂಗ ಕೊರೆದು ಮರಳು ತುಂಬುವವರಿಗೆ ಪೊಲೀಸ್ ಅಧಿಕಾರಿಗಳು ಬುದ್ದಿ ಹೇಳಿದ್ದಾರೆ. ಜನಧ್ವನಿ ನ್ಯೂಸ್ ವರಿದಿಯ ಫಲಶೃತಿಯಾಗಿದೆ.
0 Comments