ಚಳ್ಳಕೆರೆ ಜನಧ್ವನಿ ವಾರ್ತೆ ಜ.1 ಜಗತ್ತಿನ ಅದ್ಭುತ ಶಿಲ್ಪಗಳ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಬೆಲೂರು ಮತ್ತು ಹಳೆಬೀಡು ಸೇರಿದಂತೆ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದು ತಹಶೀಲ್ದಾರ್ ರೇಹಾನ್ ಪಾಷ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಚಾರಿ ಜಯೋಂತ್ಸವ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಮರ ಶಿಲ್ಪಿ ಜಕಣಾಚಾರಿಅವರು ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂನಮ್ಮನ್ನು ಬೆರಗುಗೊಳಿಸುತ್ತವೆ. ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನಾಡಿನ ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ಶಿಲ್ಪ ಕಲೆಯನ್ನು ಜಗದ್ವಿಖ್ಯಾತ ಗೊಳಿಸಿದವರು ಅಮರಶಿಲ್ಪಿ ಜಕಣಾಚಾರಿಗಳು ಬೇಲೂರು ಹಳೇಬೀಡುನಲ್ಲಿರುವ ಚನ್ನಕೇಶವ ದೇವರ ಮೂರ್ತಿಯನ್ನು ಕೆತ್ತುವ ಮೂಲಕ ತಮ್ಮ ಅಭೂತಪೂರ್ವ ಕೈಚಳಕ ತೋರಿಸಿ ಜನಮನ ಗೆದ್ದವರು ಎಂದು ಹೇಳಿದರು.
ವಿಶ್ವಕರ್ಮಸಮುದಾಯದಲ್ಲಿನ ಕರಕುಶಲ ಕಲೆಯೂ ಸಹ ಚಿನ್ನದ ಒಡವೆಗಳಲ್ಲಿ ವಿವಿಧ ಕಲಾಕೃತಿಯಲ್ಲಿ ಕೆತ್ತನೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಕರ್ಮ ಸಮಾಜದ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರು ರಥಶಿಲ್ಪಿ ತಿಪ್ಪೇಸ್ವಾಮಿನಾಯಕನಹಟ್ಟಿ, ಲೋಹಶಿಲ್ಪಿ ಎಂಜೇರಾಚಾರಿ, ಸಿದ್ದಬಂಡಾಚಾರಿಪರಶುರಾಂಪುರ.
ಕಾರ್ಯಕ್ರಮಗದಲ್ಲಿ ಉಪನ್ಯಾಸ ಸುಮಲತ, ವಿಶ್ವಕರ್ಮ ಪರಿಶತ್ತಿನ ರಾಜ್ಯ ಅಧ್ಯಕ್ಷ ಆರ್.ಪ್ರಸನ್ನಕುಮಾರ್,ನಗರಸಭೆ ಸದಸ್ಯೆ ಮಂಜುಳಪ್ಪ ಮಾತನಾಡಿದರು.
ವಿಶ್ವಮ ಕರ್ಮ ಸಂಘದಅಧ್ಯಕ್ಷ ವೆಂಕಟೇಶ್, ಸಿ,ಪ್ರಸನ್ನ, ಮಹಿಳಾ ಸಂಘದ ಗೌರವ ಅಧ್ಯಕ್ಷೆ ಸರಸ್ಪತಮ್ಮ, ಅಧ್ಯಕ್ಷೆ ಕಮಲಮ್ಮ, ಉಮಾದೇವಿ, ಲೋಕಾಶ ಚಾರ್, ಲಕ್ಷ್ಮಿನಾರಾಣಚಾರ್, ನಾಗರಾಜಚಾರ್, ನಟರಾಜಚಾರ್, ರಂಜಿತ್ ಕುಮಾರ್, ಶ್ರೀನಿವಾಸ್, ಶ್ರೀಧರ್ ಚಾರ್,ದೇವಿರಾಚಾರ್.ಪೌರಾಯುಕ್ತ ಚಂದ್ರಪ್ಪ.ಕಂದಸಯ ನಿರೀಕ್ಷಕ ಲಿಂಗೇಗೌಡ
ನಗರ ಗ್ರಾಮಲೆಕ್ಕಾಧಕಾರಿ ಪ್ರಕಾಶ್. ಹಾಗೂ ವಿಶ್ವ ಕರ್ಮ ಸಾಮಾಜರ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲು ತಾಲೂಕು ಕಚೇರಿ ಸಿಬ್ಭಂದಿಗಳು ಹೊಸ ವರ್ಷದ ಅಂಗವಾಗಿ ತಹಶೀಲ್ದಾರ್ ರೇಹಾನ್ ಪಾಷ ಇವರಿಗೆ ಗೌರವಿಸಿ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
![](https://janadhwani.in/wp-content/uploads/2024/01/IMG_20240101_114218-scaled.jpg)
0 Comments