ಚಳ್ಳಕೆರೆ ಜನಧ್ವನಿ ಫೆ22
ಬಾಲ್ಯದಿಂದಲೇ ರಾಮಾಯಣ ಹಾಗೂ ಮಹಾಭಾರತದಂತಹ ಕಥೆಗಳನ್ನು ತಮ್ಮ ತಾಯಿ ಜೀಜಾಬಾಯಿಯಿಂದ ಕೇಳುತ್ತಾ ಬೆಳೆದ ಛತ್ರಪತಿ ಶಿವಾಜಿ ಮಹಾರಾಜರು ಭಾರತದಲ್ಲಿ ಬೃಹತ್ ಹಿಂದೂ ಸಾಮ್ರಾಜ್ಯ ಕಟ್ಟಿದ ಮಹಾನ್ ನಾಯಕ ಇವರ ಆದರ್ಶಗಳನ್ನು ಎಲ್ಲಾರು ಅಳವಡಿಸಿಕೊಳ್ಳವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಮರಾಠಸಮುದಾಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಿಂದಲೇ ತಮ್ಮ ತಾಯಿ ಜೀಜಾಬಾಯಿ ಹೇಳುವ ಕಥೆಗಳಿಂದ ಪ್ರೇರಿತರಾಗಿ ರಾಷ್ಟçಭಕ್ತಿ, ಪರಾಕ್ರಮ ಸೇರಿದಂತೆ ಜೀವನ ಮೌಲ್ಯಗಳ ಮೈಗೂಡಿಸಿಕೊಂಡು ಅತ್ಯಂತ ದೇಶಪ್ರೇಮಿಯಾದರು.ಪಶ್ಚಿಮಘಟ್ಟಗಳಲ್ಲಿ ನೆಲೆಸಿದ್ದ ಮಾವಳರೆಂಬ ಗಿರಿಜನರ ಸಹವಾಸದಿಂದ ತಮ್ಮ ಜೀವನದಲ್ಲಿ ಧೈರ್ಯ, ಸಾಹಸಗಳನ್ನು ರೂಢಿಸಿಕೊಂಡಿದ್ದರಲ್ಲದೆ, ಆ ಗಿರಿಜನರನ್ನೆಲ್ಲಾ ಒಟ್ಟುಗೂಡಿಸಿ, ದೊಡ್ಡದಾದ ಸೇನೆ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ತಿಳಿಸಿದರು.
ಈ ಕಾರ್ಯಕ್ರಮದ ತಹಶೀಲ್ದಾರ್ ರೇಹಾನ್ ಪಾಷಾ, ಮೈತ್ರಿದ್ಯಾಮಣ್ಣ, ಮಾತನಾಡಿದರು, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ನಗರಸಭೆ ಸದಸ್ಯರು, ಸಮಾಜಾದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments