ನಾಯಕನಹಟ್ಟಿ:: ಕಾಮಗಾರಿಯಲ್ಲಿ ಗುಡಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರೈಸಬೇಕು ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಳಕೆರೆ ಗೇಟಿನಿಂದ ತಾಲೂಕು ಗಡಿಯರಗೆ ಸುಮಾರು ₹ 2. ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಚೌಳಕೆರೆ ಗ್ರಾಮಸ್ಥರ ಬಹುದಿನದ ಬೇಡಿಕೆ ಇಂದು ನನಸಾಗಿದೆ ಈ ರಸ್ತೆ ಬಾರಿ ತೊಗ್ಗು ಗುಂಡಿಗಳಿಂದ ಕೂಡಿತ್ತು ಗ್ರಾಮೀಣ ಪ್ರದೇಶದ ಜನರು ಈ ರಸ್ತೆಯಲ್ಲಿ ಓಡಾಡುವುದು ತುಂಬಾ ಕಷ್ಟವಾಗಿತ್ತು ಆದ್ದರಿಂದ ಚೌಳಕೆರೆ ಗೇಟಿನಿಂದ ತಾಲೂಕು ಗಡಿಯವರಿಗೆ ಸುಮಾರು 2 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಶೀಘ್ರದಲ್ಲಿ ಕಾಮಗಾರಿ ಆರಂಭಿಸಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲರಾಜ್, ಮುಖಂಡ ಪ್ರಭುಸ್ವಾಮಿ,ಬಂಡೆ ಕಪಿಲೆ ಓಬಣ್ಣ, ನೇರಲಗುಂಟೆ ಸೂರನಾಯಕ, ಚೌಳಕೆರೆ ಸಿ ಬಿ ಮೋಹನ್, ಬಗರು ಹುಕುಂ ಕಮಿಟಿ ಸದಸ್ಯ ಪಿ ಜಿ ಬೋರನಾಯಕ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಬಿ.ಅನಿತಾಮ್ಮ ಜಿ ಎಂ ಜಯಣ್ಣ, ಸದಸ್ಯ ಬಿ. ಸಣ್ಣ ಪಾಲಯ್ಯ, ಕೋಡಿಹಳ್ಳಿ ಜಿ. ತಿಪ್ಪೇಸ್ವಾಮಿ ಲೋಕೋಪಯೋಗಿ ಇಲಾಖೆ ಅಧಿಕಾರಿ ವಿಜಯ ಭಾಸ್ಕರ್, ಎಸ್ ಪಿ ಪ್ರಕಾಶ್, ಅಕ್ಕಿಂ, ವರವು ಕಾಟಯ್ಯ, ಶಂಕರಮೂರ್ತಿ, ಮಲ್ಲೂರಹಳ್ಳಿ ಮಲ್ಲಿಕಾರ್ಜುನ್, ತೊರೆಕೋಲಮ್ಮನಹಳ್ಳಿ ಆರ್ ಬಸಪ್ಪ,ಗುಂತಕೋಲಮ್ಮನಹಳ್ಳಿ ಕೆ ಟಿ ಮಲ್ಲಿಕಾರ್ಜುನ್, ರೇಖಲಗೆರೆ ಅಶೋಕ್, ಕೊರಡಿಹಳ್ಳಿ ಸುರೇಂದ್ರಪ್ಪ, ನಾಯಕನಹಟ್ಟಿ ಓಬಳೇಶ್, ಪಿಎಸ್ಐ ಕೆ ಶಿವಕುಮಾರ್. ಇತರರು ಇದ್ದರು
0 Comments