ಚುನಾವಣೆ ಘೋಷಣೆ ಮುನ್ನವೇ ಅಕ್ರಮ ಪ್ಲೆಕ್ಸ್ , ಬ್ಯಾನರ್ ಅಳವಡಿಕೆಗೆ ಬಿತ್ತು ಬ್ರೇಕ್ ,ಒಂದೇ ಕಾರ್ಯಕ್ರಮಕ್ಕೆ 25800 ರೂ ನಗರಸಭೆ ಬೊಕ್ಕಸಕ್ಕೆ ಬಂತು ಆಧಾಯ

by | 18/03/23 | ಜನಧ್ವನಿ, ಸುದ್ದಿ


ಪ್ರತಿ ನಿತ್ಯ ಪ್ಲೆಕ್ಸ್ ಬ್ಯಾನರ್ ಗಳಿಂದ ತುಂಬಿದ್ದ ನೆಹರು ವೃತ್ತ ಕಟ್ಟು ನಿಟ್ಟಿನ ಕಾನೂನು ಪಾಲನೆಯಿಂದ ತೆರವು ಬಿಕೋಎನ್ನುತ್ತಿರುವ ವೃತ್ತ
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.18
ಇದೇನಪ್ಪ ಚುನಾವಣೆ ನೀತಿ ಸಂಹಿತೆ ಏನಾದರೂ ಘೋಷಣೆಯಾತ್ತ ಪ್ಲೆಕ್ಸ್ ಬ್ಯಾನರ್ ತೆರವುಗೊಳಿಸುತ್ತಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ರಾಜಕೀಯ ನೇತಾರರಿಂದ ಪದೇ ಪದೇ ನಿಯಮ ಉಲ್ಲಂಘನೆಯಾದರೂ ಕಡಿವಾಣ ಹಾಕುವ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಈಗ ನಗರಸಭೆ ಅಧಿಕಾರಿಗಳು ಅಕ್ರಮ ನಿಷೇದಿತ ಪ್ಲೆಕ್ಸ್ ,ಬ್ಯಾನರ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ನೆಹರು ವೃತ್ತ ಸೇರುದಂತೆ ಸಾರ್ವಜನಿಕ ಸ್ಥಳದಲ್ಲಿ ವಿವಿಧ ಪಕ್ಷಗಳ ಸಭೆ.ಸಮಾರಂಭ. ಹುಟ್ಟು ಹಬ್ಬ, ನಾಮಕರಳ, ನಾಟಕ, ಜಾತ್ರೆ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಪ್ಲೆಕ್ಸ್ ಬ್ಯಾನರ್ ಗಳನ್ನು ನಗರಸಭೆ ಅನುಮತಿ ಪಡೆಯದೆಎಲ್ಲೆಂದಲ್ಲಿ ಹಾಕಿ ಕಾರ್ಯಗಳು ಮುಗಿದರೂ ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿರಲಿಲ್ಲ. ನ್ಯಾಯಾಲಯ ಆದೇಶ ಇದ್ದರೂ ಸಹ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ಅಳವಡಿಸಿದರೆ ಒಂದು ಸಾವಿರ ದಂಡ ಮತ್ತು ೬ ತಿಂಗಳು ಜೈಲು ಶಿಕ್ಷೆ ವಿಧಿಸಲಾಗು ಎಂಬ ಕಾನೂನು ಇದ್ದರೂ ಸಹ ಉಲ್ಲಂಘಿಸಿ ರಾಜಕೀಯ ಸಮಾವೇಶ, ರಾಜಕಾರಣಿಗಳ ಜನ್ಮದಿನ, ಸಮಾರಂಭ, ಜಯಂತಿ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಸ್ಟಿಕ್ಕರ್, ಭಿತ್ತಿಪತ್ರ, ಸ್ವಾಗತ ಕಮಾನುಗಳು ನಗರದ ಎಲ್ಲೆಡೆ ರಾರಾಜಿಸುವಂತೆ ಮಾಡುತ್ತಿದ್ದರು.
ಸಾಂಧರ್ಭಿಕ ಚಿತ್ರ
ಅಕ್ರಮ ಪ್ಲೆಕ್ಸ್ ಅವಳಡಿಸುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಹಾಗೂ ನಗರಸಭೆ ಬೊಕ್ಕಸಕ್ಕೂ ನಷ್ಟವನ್ನುಂಟು ಮಾಡುತ್ತಿತ್ತು. ಈ
ನೆಹರು ವೃತ್ತದಲ್ಲಿರ ನೆಹರು ಪ್ರತಿಮೆಗೂ ಪ್ಲೆಕ್ಸ್ ಹೆಚ್ಚು ಜನಸಂದಣಿ ಇರುವ ಪ್ರಮುಖ ವೃತ್ತಗಳು ಸೇರಿ ಪಾದಚಾರಿ ಮಾರ್ಗಗಳಲ್ಲಿ, ವಿಭಜಕಗಳಲ್ಲಿರುವ ಬೀದಿ ದೀಪದ ಕಂಬಗಳು, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸುತ್ತಿದ್ದರು ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೂ ಅಡಚಣೆಯಾಗುತ್ತಿತ್ತು ವಿವಿಧ ಪಕ್ಷದಮುಖಂಡರು , ಜನಪ್ರತಿನಿಧಿಗಳ ಪ್ಲೆಕ್ಸ್ ಆಗಿರುವುದರಿಂದ ನಗರಸಭೆ ಅಧಿಗಳು ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿರಲಿಲ್ಲ ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಜಿಲ್ಲಾಡಳಿ ನೀಡಿದ ಎಚ್ಚರಿಕೆಯಿಂದ ದಿನದ೨೪ ಗಂಟೆಯೊಳಗೆ ಪ್ಲೆಕ್ಸ್ಗಳನ್ನು ತೆರವುಗೊಳಿಸಬೇಕು, ಪ್ಲೆಕ್ಸ್ ಅಳವಡಿಸುವ ಮುನ್ನ ನಿಗಧಿ ಸ್ಥಳ ಹಾಗೂ ಹಣ ನೀಡಿ ಪರವಾನಿಗೆ ಪಡೆದು ಅಳಡವಡಿಸ ಬೇಕು ಒಂದು ವೇಳೆ ಪರವಾನಿಗೆಪಡೆಯದೆ ಪ್ಲೆಕ್ಸ್ ಗಳನ್ನು ಅಳವಡಿಸಿದರೆ ಕಾನೂನು ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ .
ತಮ್ಮ ಪ್ಲೆಕ್ಸ್ಗಳಿಗೆ ತಾವೆ ಜವ್ಬಾರಿ.
ನಗರಸಭೆಯಿಂದ ಪರವಾನಿಗೆ ಪಡೆದು ಅಳವಡಿಸುವ ಜಾಹೀರಾತುಗಳಿಗೆ ಪ್ಲೆಕ್ಸ್ ದಾರರು ಜವಾಬ್ದಾರರು, ಜಾಹೀರಾತುಗಳಿಗೆ ಏನಾದರೂ ಹಾನಿಯಾದಲ್ಲಿ ನಗರಸಭೆ ಜವಾಬ್ದಾರಿಯಲ್ಲ, ಪರವಾನಿಗೆ ಪಡೆದು ಸಮಯದ ನಂತರ ಒಂದು ಗಂಟೆಯೊಳಗೆ ಹಾಕಿರುವ ಜಾಹೀರಾತುಗಳನ್ನು ತಮ್ಮ ಸ್ವಂತ ಖರ್ಚಿನಿಂದ ತೆರವುಗೊಳಿಸಿಕೊಡತಕ್ಕದ್ದು ಪರವಾನಿಗೆಯು ಜಾರಿಯಲ್ಲಿದ್ದು, ಸರ್ಕಾರದಿಂದ ಯಾವುದಾದರೂ ತುರ್ತು ಆದೇಶ ಬಂದಲ್ಲಿ, ನಿಯಮಾನುಸಾರ ಯಾವುದೇ ತಿಳುವಳಿಕೆ ನೀಡದೆ ರದ್ದುಪಡಿಸುವ ಅಧಿಕಾರವನ್ನು ಪೌರಾಯುಕ್ತರು, ನಗರಸಭೆ, ಚಳ್ಳಕೆರೆ ರವರಿಗೆ ಇರುತ್ತದೆ ಯಾವುದೇ ಸರ್ಕಾರಿ ಆಸ್ತಿಗಳ ಮೇಲೆ ಜಾಹೀರಾತುಗಳನ್ನು ಅಳವಡಿಸಬಾರದು. ನಿಗಧಿಪಡಿಸಿದ ಸ್ಥಳಗಳಲ್ಲೇ(ಪರವಾನಿಗೆ ನೀಡಿದ) ಜಾಹೀರಾತುಗಳನ್ನು ಅಳವಡಿಸತಕ್ಕದ್ದು. ನಗರಸಭೆ ವ್ಯಾಪ್ತಿಯಲ್ಲಿನ ವಿದ್ಯುತ್ ಕಂಬ ಹಾಗೂ ಮರಗಳಿಗೆ ಜಾಹೀರಾತುಗಳನ್ನು ಹಾಕುವಂತಿಲ್ಲ. ಪರವಾನಿಗೆ ಎಷ್ಟು ಬ್ಯಾನರ್ , ಪ್ಲೆಕ್ಸ್ಗಳಿಗೆ ಪಡೆದಿರುತ್ತಾರೆ ಅದಕ್ಕಿಂತ ಹೆಚ್ಚಿಗೆ ಹಾಕುವಂತೆ ಒಂದು ವೇಳ ಪರವಾನಿಗೆ ಪಡೆಯದೆ ಅಕ್ರಮವಾಗಿ ಪ್ಲೆಕ್ಸ್ ಬ್ಯಾನರ್ ಅಳವಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಚ್ಚರಿಕೆ ನೀಡಿದೆ.
ನಗರಸಭೆ ಬೊಕ್ಕಸಕ್ಕೆ ಲಾಭ.

ಪ್ಲೆಕ್ಸ್ ಅಳವಡಿಕೆಗೆ ಕಾನೂನು ಜಾರಿಯಾದ ಮೊದಲ ಬಿಜೆಪಿ ಪಕ್ಷದ ವಿಜಯಸಂಕಲ್ಪ ರೋಡ್ ಶೋಗೆ ಪ್ಲೆಕ್ಸ್ ಬ್ಯಾನರ್ ಅಳವಡಿಸಲು ಬಿಜೆಪಿ ಪಕ್ಷದಿಂದ 25800 ರೂ ನಗರಸಭೆ ಬೊಕ್ಕಸಕ್ಕೆ ಪ್ಲೆಕ್ಸ್ ಬ್ಯಾನರ್ , ಬಂಟಿAಗ್ಸ್ ನಿಂದ ಲಾಭ ಬಂದಿದೆ ಈ ಹಿಂದೆ ರಾಜಕೀಯ ಪಕ್ಷಗಳು ಯಾವುದೇ ಪರವಾನಿಗೆ ಪಡೆಯದೆ ಹಣವೂ ಸಂದಾಯ ಮಾಡದೆ ಅಳವಡಿಸುತ್ತಿದ್ದರು ಎಂಬ ಆರೋಗಳು ಜನರಿಂದ ಕೇಳಿ ಬರುತ್ತಿದ್ದವು ಈಗ ಯಾರೇ ಆಗಲಿ ಹಣ ನೀಡಿ ಪರವಾನಿಗೆ ಪಡೆದು ನಿಗಧಿಯ ಸಮಯ ನಂತರ ಒಂದುಗAಟೆಯೊಳಗೆ ತೆರವುಗೊಳಿಸ ಬೇಕು ಎಂಬಷರತ್ತು ವಿಧಿಸಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page