ಚಳ್ಳಕೆರೆ ಜನಧ್ವನಿ ವಾರ್ತೆ ಮೇ 25 ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷೆ ಆರ್. ದಯಾವತಿ ಪುತ್ತೂರ್ಕರ್ ತಿಳಿಸಿದ್ದಾರೆ. ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಪ್ರತಿಭಾವಂತ ಬರಹಗಾರರನನ್ನು ಸಮಾಜಕ್ಕೆ ಗುರುತಿಸುವ ಕೆಲಸ ಮಾಡಲಾಗಿದೆ. ವೇದಿಕೆಯ ಕಾರ್ಯ ಚಟುವಟಿಕೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳ ಆಯೋಜನೆ ದೃಷ್ಟಿಯಿಂದ ಪದಾಧಿಕಾರಿಗಳನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಡಾ.ಶಫೀವುಲ್ಲಾ(ಅಧ್ಯಕ್ಷ), ವಕೀಲ ಬಿ.ಕೆ. ರಹಮತ್ವುಲ್ಲಾ(ಗೌರವಾಧ್ಯಕ್ಷ) ಶೋಭಾ, ಪಂಡರಹಳ್ಳಿ ಶಿವರುದ್ರಪ್ಪ(ಉಪಾಧ್ಯಕ್ಷರು), ರೇಣುಕಾ ಪ್ರಕಾಶ್, ಮೀರನಾಡಿಗ್(ಪ್ರಧಾನ ಕಾರ್ಯದರ್ಶಿ), ಸತೀಶ್ಕುಮಾರ್(ಸಹಕಾರ್ಯದರ್ಶಿ), ವಿನಾಯಕ, ಆರ್.ಜೆ.ಸುಮರಾಜಶೇಖರ್(ಸಂಘಟನಾ ಕಾರ್ಯದರ್ಶಿ), ಪತ್ರಿಕಾ ಕಾರ್ಯದರ್ಶಿಗಳಾಗಿ ಕೆ.ಎಸ್. ತಿಪ್ಪಮ್ಮ, ಪ್ರವೀಣ್ಕುಮಾರ್ ಖಜಾಂಚಿಯಾಗಿ ಶಿವಕುಮಾರ್, ಮಹಮ್ಮದ್ ಸಾದಕ್, ಸಲಹೆಗಾರರಾಗಿ ಕರ್ಲಕುಂಟೆ ತಿಪ್ಪೇಸ್ವಾಮಿ, ಸಂಚಾಲಕರಾಗಿ ದೀಪಿಕಾಬಾಬು, ಅಜಯ್, ನಿರ್ದೇಶಕರನ್ನಾಗಿ ಕೆ.ಎಚ್. ದೇವರಾಜ್, ಮೆಹಬೂಬಿ, ತಿಪ್ಪೀರಮ್ಮ, ನಿರ್ಮಲ ಭಾರಧ್ವಜ್, ಮಧುಕುಮಾರ್ ಇವರನ್ನು ನೇಮಕ ಮಾಡಲಾಗಿದೆ.
0 Comments