ಹಿರಿಯೂರು :
ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾದ ಡಾ. ಡಿ. ಜಿ. ಪ್ರಕಾಶ ಇವರ ಮಾರ್ಗದರ್ಶನದಲ್ಲಿ ಎಂ. ಆರ್. ಅಮೃತಲಕ್ಷ್ಮಿಯವರು ಮಂಡಿಸಿದ ಸಮ್ ಸ್ಟಡೀಸ್ ಆನ್ ಕಾಂಟಾಕ್ಟ್ ಮೆಟ್ರಿಕ್ ಮ್ಯಾನಿಫೋಲ್ಡ್ಸ್ ಎಂಬ ಮಹಾ ಪ್ರಬಂಧವನ್ನು ಅಂಗೀಕರಿಸಿ ಎಂ.ಆರ್.ಅಮೃತಲಕ್ಷ್ಮಿಯವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿ.ಹೆಚ್. ಡಿ ಪದವಿ ನೀಡಿ ಗೌರವಿಸಿದೆ.
ಎಂ. ಆರ್. ಅಮೃತಲಕ್ಷ್ಮಿ ರವರು ಬಿ. ಎಸ್ಸಿ ಮತ್ತು ಎಂ. ಎಸ್ಸಿ ಎರಡೂ ಪದವಿಗಳಲ್ಲೂ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಚಿನ್ನದ ಪದಕಗಳನ್ನು ಪಡೆದಿದ್ದರು ಎಂಬುದು ವಿಶೇಷವಾಗಿದ್ದು, ಇವರು ಹಿರಿಯೂರಿನ ಹಿರಿಯ ಪತ್ರಕರ್ತರಾದ ಎಂ.ರವೀಂದ್ರನಾಥ್ ಹಾಗೂ ಪೊಲೀಸ್ ಇಲಾಖೆಯ ಶ್ರೀಮತಿ ಎನ್.ರೇಖಾ ದಂಪತಿಗಳ ಸುಪುತ್ರಿಯಾಗಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿರುವ ಅಮೃತಲಕ್ಷ್ಮೀಯವರಿಗೆ ವಿಶ್ವವಿದ್ಯಾನಿಲಯದ ಮಾರ್ಗದರ್ಶಕರಾದ ಡಾ. ಡಿ. ಜಿ. ಪ್ರಕಾಶ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಸಿ. ಪ್ರಸನ್ನಕುಮಾರ್, ಪ್ರಾಧ್ಯಾಪಕರಾದ ಡಾ. ಯು.ಎಸ್.ಮಹಾಬಲೇಶ್ವರ್ ಸೇರಿದಂತೆ ವಿಭಾಗದ ಎಲ್ಲ ಸಹ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಶುಭಹಾರೈಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments