ಚಿತ್ರದುರ್ಗ : ಚಿತ್ರದುರ್ಗದ ಅಸ್ಥಿ ಪಂಜರ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಸ್ಥಿ ಪಂಜರಗಳಿದ್ದ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಚಿತ್ರದುರ್ಗ ಪೊಲೀಸರು ಡೆತ್ ನೋಟ್ನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡ ಸಿದ್ದವ್ವನಹಳ್ಳಿ ಜಗನ್ನಾಥರೆಡ್ಡಿ ಮನೆಯಲ್ಲಿ ಡೆತ್ನೋಟ್ ಸಿಕ್ಕಿದ್ದು, ಐವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇದೀಗ ಡೆತ್ ನೋಟ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ರಾಬರಿ ಕೇಸ್ ಇತ್ತಂತೆ, ನರೇಂದ್ರರೆಡ್ಡಿ 2013ರಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದರು. 2013ರಲ್ಲಿ ಬಿಡದಿ ಬಳಿ ವಾಹನ ತಡೆದು ದರೋಡೆ ಮಾಡಿದ್ದ ಆರೋಪವಿದ್ದು, ಗೆಳೆಯರ ಜತೆ ತೆರಳಿ ದರೋಡೆ ಕೇಸಲ್ಲಿ ಭಾಗಿಯಾಗಿದ್ದ ಆರೋಪ ವ್ಯಕ್ತವಾಗಿದೆ. ದರೋಡೆ ಕೇಸಲ್ಲಿ ನರೇಂದ್ರರೆಡ್ಡಿ ಕೆಲದಿನ ಜೈಲು ಪಾಲಾಗಿದ್ದ, ನರೇಂದ್ರರೆಡ್ಡಿ ವಿರುದ್ಧದ ಕೇಸ್ನಿಂದ ಮನನೊಂದು ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ.
2019ರಲ್ಲಿ ಮನನೊಂದು ಇಡೀ ಫ್ಯಾಮಿಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕ ತಿಮ್ಮಾರೆಡ್ಡಿ ಮೃತ ಐವರ ಗುರುತು ಪತ್ತೆ ಮಾಡಿದ್ದಾರೆ. ಜಗನ್ನಾಥರೆಡ್ಡಿ ನಿವೃತ್ತ ಇಇ, ಪತ್ನಿ ಪ್ರೇಮಾ, ಹಿರಿಯ ಮಗಳು ತ್ರಿವೇಣಿ, ಮೂರನೇ ಮಗ ಕೃ್ಷ್ಣಾ ರೆಡ್ಡಿ, ನಾಲ್ಕನೇ ಮಗ ನರೇಂದ್ರ ರೆಡ್ಡಿ ಅನ್ನೋ ಗುರುತು ಪತ್ತೆಯಾಗಿದೆ. ಹಿರಿಯ ಪುತ್ರ ಮಂಜುನಾಥ್ ರೆಡ್ಡಿ ಡಾಕ್ಟರ್ ಆಗಿದ್ದರು, 10 ವರ್ಷದ ಹಿಂದೆಯೇ ಹಿರಿಯ ಮಗನ ಸಾವು ಸಂಭವಿಸಿತ್ತು. ಇಡೀ ಜಗನ್ನಾಥರೆಡ್ಡಿ ಫ್ಯಾಮಿಲಿ ಕಥೆಯೇ ನಿಗೂಢವಾಗಿದೆ.
ಐದಾರು ವರ್ಷದ ತನಕ ಸಾವು ಯಾಕೆ ಹೊರ ಬರಲೇ ಇಲ್ಲ, ಈ ಹಿಂದೆ ಇವರ ಜಮೀನು ವ್ಯಾಜ್ಯ ಕೋರ್ಟ್ನಲ್ಲಿ ಇತ್ತು. ಕೋರ್ಟ್ನಲ್ಲಿ ಇವರಂತೆ ತೀರ್ಪು ಕೂಡಾ ಬಂದಿತ್ತಂತೆ, ಬ್ಯಾಂಕ್ ಲಾಕರ್ನಲ್ಲಿ ಇವರ ಚಿನ್ನಾಭರಣಗಳೂ ಇದ್ದವು. ವಕೀಲರು, ಬ್ಯಾಂಕ್ ಸಿಬ್ಬಂದಿ ಈ ಫ್ಯಾಮಿಲಿಗೆ ಹುಡುಕಾಡಿದ್ದಾರೆ ಎಂದು ಈ ಪ್ರಕರಣದ ಬಗ್ಗೆ ಸಂಬಂಧಿ ತಿಮ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ.
0 Comments