ಹಿರಿಯೂರು:
ವೇದಾವತಿ ನದಿ ಪಾತ್ರದಲ್ಲಿ ವರುಣನ ಕೃಪೆಯಿಂದ ಚಿತ್ರದುರ್ಗ ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ಒಳ ಹರಿವು 1850 ಕ್ಯುಸೆಕ್ ತಲುಪಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭದಲ್ಲೇ ಅಬ್ಬರಿಸುತ್ತಿದ್ದು, ಪ್ರಸ್ತುತ ಜಲಾಶಯದಲ್ಲಿ 114.05 ಅಡಿ ನೀರು ಸಂಗ್ರಹವಿದೆ. ಮುಂಗಾರು ಪೂರ್ವ ಮಳೆಗೆ ವೇದಾವತಿ ನದಿ ಪಾತ್ರದಲ್ಲಿ ಚೆಕ್ ಡ್ಯಾಂ ಬ್ಯಾರೇಜ್ ಗಳು ಭರ್ತಿಯಾಗಿದ್ದು, ಚಿಕ್ಕಮಗಳೂರು-ವೇದಾವತಿ ನದಿ ಪಾತ್ರದಲ್ಲಿ ಮಳೆ ಸುರಿದರೆ ಅಪಾರ ಪ್ರಮಾಣದ ಜಲರಾಶಿ ಹರಿದು ಬರಲಿದೆ.
2022ರಲ್ಲಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿ 89 ವರ್ಷಗಳ ನಂತರ ಕೋಡಿ ಬಿದ್ದಿದ್ದು ಇತಿಹಾಸ. ಅಂದು ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾಗಿತ್ತು. 2023ರಲ್ಲಿ ಮಳೆ ಕೊರತೆಯಿಂದ ಜಲಾಶಯಕ್ಕೆ ನೀರು ಹರಿಯಲಿಲ್ಲ.
ಕಳೆದ ಎರಡು ವರ್ಷದಲ್ಲಿ ಅಚ್ಚುಕಟ್ಟು ಪ್ರದೇಶ, ವೇದಾವತಿ ನದಿ ನೀರಿಗೆ 18 ಟಿಎಂಸಿ ಅಡಿ ನೀರು ಬಳಕೆ ಮಾಡಲಾಗಿದೆ. 2023 ರಲ್ಲಿ ಜಲಸಂಕಷ್ಟ ಎದುರಾಗಿ ರಾಜ್ಯದ ವಿವಿಧ ಜಲಾಶಯಗಳು ನೀರಿನ ಮಟ್ಟ ಕುಸಿದಿತ್ತು. ಆದರೆ ಬಯಲು ಸೀಮೆಯ ಜಲಪಾತ್ರೆ ವಾಣಿವಿಲಾಸ ಸಾಗರದಲ್ಲಿ ಅಪಾರ ಪ್ರಮಾಣದ ಜಲರಾಶಿ ಸಂಗ್ರಹವಿತ್ತು.
ಹವಮಾನ ಇಲಾಖೆ ವರದಿ ಪ್ರಕಾರ ಈ ಬಾರಿ ಮುಂಗಾರು ಮಳೆ ಅಬ್ಬರಿಸಲಿದ್ದು, ಆಗಸ್ಟ್ – ಸೆಪ್ಟಂಬರ್ ತಿಂಗಳಲ್ಲಿ ಭಾರಿ ಮಳೆ ಸುರಿಯಲಿದೆ ಎನ್ನಲಾಗಿದೆ.ವರುಣ ಕೃಪೆ ತೋರಿದರೆ ಶತಮಾನದ ಇತಿಹಾಸವಿರುವ ವಾಣಿವಿಲಾಸ ಸಾಗರ ಜಲಾಶಯ 3ನೇ ಬಾರಿ ಭರ್ತಿಯಾಗಿ ಜಲ ವೈಭವ ಮರುಕಳಿಸಲಿದೆ.
ತಾಲ್ಲೂಕಿನಲ್ಲಿ ಜೂನ್ ತಿಂಗಳ ಆರಂಭದಲ್ಲಿ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳು ಭರ್ತಿಯಾಗುತ್ತಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ತಾಪಮಾನ ಏರಿಕೆಯಿಂದ ಒಣಗಿದ್ದ ಅಡಿಕೆ- ತೆಂಗು, ಬಾಳೆ ಇತರ ತೋಟಗಾರಿಕೆ ಬೆಳೆಗಳಿಗೆ ಜೀವ ಕಳೆ ಬಂದಿದೆ.
ಬತ್ತಿದ ಕೊಳವೆ ಬಾವಿಗಳಲ್ಲಿ ಗಂಗೆ ಉಕ್ಕುತ್ತಿದೆ. ಎತ್ತ ನೋಡಿದರೂ ಹಸಿರ ಸಿರಿ ಮೇಳೈಸುತ್ತಿದೆ. ಜನ–ಜಾನುವಾರುಗಳ ಮೇವು, ಕುಡಿಯುವ ನೀರಿನ ಸಂಕಷ್ಟ ದೂರಾಗಿದೆ. ತಾಲ್ಲೂಕಿನ 56 ಕಿ.ಮೀ. ವ್ಯಾಪ್ತಿಯ ವೇದಾವತಿ ನದಿ ಪಾತ್ರದಲ್ಲಿರುವ ಬ್ಯಾರೇಜ್ಗಳು ಭರ್ತಿಯಾಗಿದ್ದು, ಅಂತರ್ಜಲ ವೃದ್ಧಿ- ಕೃಷಿ ಚಟುವಟಿಕೆಗಳಿಗೆ ವರದಾನವಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments