![](https://janadhwani.in/wp-content/uploads/2023/12/IMG_20231202_122619-scaled.jpg)
ಚಳ್ಳಕೆರೆ ಡಿ2. ಹೆಲ್ಮೆಟ್ ಹಾಕದ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿದ ಪೋಲಿಸರನ್ನು ಕೂಡಲೆ ಬಂದಿಸುವಂತೆ ಆಗ್ರಹಿಸಿ ತಾಲೂಕು ವಕೀಲರ ಸಂಘ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.![](https://janadhwani.in/wp-content/uploads/2023/12/IMG-20231202-WA0070.jpg)
ವಕೀಲರು, ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ವಕೀಲ ಪ್ರೀತಮ್ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ ನಮ್ಮ ಪ್ರತಿಭಟನೆ ಹಾಗೂ ಘೋಷಣೆಗಳ ಹಲ್ಲೆ ಮಾಡಿದ ಪೋಲಿಸರ ವಿರುದ್ದ ಮಾತ್ರ ಚಳ್ಳಕೆರೆ ವಕೀಲರ ಸಂಘದ ಎಂದು ಹೇಳಿದರು. ನ್ಯಾಯಾಲಯದಿಂದ ವಾಲ್ಮೀಕಿ ವೃತ್ತ. ಡಾ.ಅಂಬೇಡ್ಕರ್ ವೃತ್ತ .ನೆಹರು ವೃತ್ತದಲ್ಲಿ ಮಾನವ ಸರಪಣಿ ಮಾಡಿ ಹಲ್ಲೆ ಮಾಡಿದ ಪೊಲೀಸರ ಹಾಗೂ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಅಕ್ರೋಶ ಹೊರಹಾಕಿದ್ದಾರೆ.
ತಾಲೂಕು ಕಚೇರಿ ಮುಂದೆ ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ ನಾಗರಾಜು ಮಾತನಾಡಿ ಚಿಕ್ಕಮಗಳೂರು ನಗರದಲ್ಲಿ ವಕೀಲರಾದ ಪ್ರೀತಮ್ ಮೇಲೆ ನಗರ ಠಾಣೆಯ ಪೊಲೀಸರು ಯಾವುದೇ ಕಾರಣವಿಲ್ಲದೆ ಕೇವಲ ಹೆಲ್ಮೆಟ್ ಧರಿಸದ ಕಾರಣವನ್ನು ಮುಂದಿಟ್ಟುಕೊಂಡು ಕಾನೂನುಬಾಹಿರವಾಗಿ ಹಲ್ಲೆ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿರುವುದು ಖಂಡನೀಯ ಪೊಲೀಸರ ಈ ಕೃತ್ಯಕ್ಕೆ ಸಾಮಾನ್ಯ ಜನರ ಜೀವ ಮತ್ತು ಜೀವನದ ಮೇಲೆ ನಂಬಿಕೆ ಇಲ್ಲದಂತಾಗಿದೆ ಕಾನೂನು ಪಾಲಿಸುವ ವಕೀಲರ ಮೇಲೆ ಇಂತಹ ಘಟನೆ ನಡೆದಿರುವುದು ಸಹಿಸಲು ಸಾಧ್ಯವಿಲ್ಲ ಸರ್ಕಾರ ಹಲ್ಲೆ ನಡೆಸಿದ ಪೊಲೀಸರನ್ನು ಕೇವಲ ಅಮಾನತುಗೊಳಿಸಿ ಆದೇಶ ಹೊರಡಿಸಿದೆ ಇಂತಹ ಕೃತ್ಯ ಎಸಗಿದ ಪೊಲೀಸರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳಿಸಬೇಕು ವಕೀಲರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ನಡೆಸುತ್ತಿರುವುದು ವಕೀಲ ವೃತ್ತಿ ನಿರ್ವಹಿಸುತ್ತಿರುವ ವಕೀಲ ವೃಂದಕ್ಕೆ ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದ್ದು ಇಂತಹ ಘಟನೆಗಳಿಂದ ವಕೀಲರುಗಳಿಗೆ ರಕ್ಷಣೆ ನೀಡುವ ಕುರಿತು ವಕೀಲ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಕಾರ್ಯ ಸೂಚಿಗಳನ್ನು ರಚಿಸುವ ಮೂಲಕ ವಕೀಲರಿಗೆ ರಕ್ಷಣೆ ನೀಡಬೇಕು ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
![](https://janadhwani.in/wp-content/uploads/2023/12/IMG-20231202-WA0075.jpg)
![](https://janadhwani.in/wp-content/uploads/2023/12/IMG-20231202-WA0073.jpg)
![](https://janadhwani.in/wp-content/uploads/2023/12/IMG-20231202-WA0072.jpg)
ಈ ಸಂದರ್ಭದಲ್ಲಿ ವಕೀಲ ಸಂಘದ ಪದಾಧಿಕಾರಿಗಳಾದ ಸಂಘದ ಉಪಾಧ್ಯಕ್ಷ ಬಿ ಪಾಲಯ್ಯ ಪ್ರಧಾನ ಕಾರ್ಯದರ್ಶಿ ಎಂ ಸಿದ್ದರಾಜು ರಾಮಕೃಷ್ಣ ಟಿ ರುದ್ರಯ್ಯ ಎನ್ ಬೀರಪ್ಪ ತಿಪ್ಪೇಸ್ವಾಮಿ ಹನುಮಂತರಾಯ ಬೋರಯ್ಯ ದೊರೆ ನಾಗರಾಜು ಸಣ್ಣ ಬೋರ ನಾಯಕ ಬಿಟಿ ಶ್ಯಾಮಲ .ಸರಸ್ವತಿ .ನಾಗರಾಜ್. ತಿಪ್ಪೇಸ್ವಾಮಿ.ವಿಶ್ವನಾಥ್ ಇತರರಿದ್ದು.
0 Comments