ಚಳ್ಳಕೆರೆ ಶಾಸಕರ ಭವನದಲ್ಲಿ ಜವಹರಲಾಲ್ ನೆಹರು ಹಾಗೂ ಮಕ್ಕಳದಿನಾಚರಣೆ

by | 14/11/23 | ಸುದ್ದಿ

‌‌‌‌‌
ಚಳ್ಳಕೆರೆ ನ.14
ಸ್ವಾತಂತ್ರ‍್ಯ ಭಾರತವು ಅಭಿವೃದ್ಧಿಯತ್ತ ಸಾಗಬೇಕೆಂದರೆ ಮಕ್ಕಳಿಗೆ ಗುಣಮಟ್ಟ ಶಿಕ್ಷಣ, ಉತ್ತಮ ಆರೋಗ್ಯ, ಮಕ್ಕಳ ಹಕ್ಕು ರಕ್ಷಣೆ, ಶಿಕ್ಷೆ ರಹಿತ ಶಿಕ್ಷಣ, ಪರಿಶುದ್ಧ ಪ್ರೇಮ ಕಲಿಕೆ, ಬದುಕುವ, ಭಾಗವಹಿಸುವ ಹಕ್ಕುಗಳ ಅನುಪಾಲನೆ ಮಾಡಿದಾಗ ಮಾತ್ರ ನೆಹರು ಜನ್ಮ ದಿನಾಚರಣೆ ಸಾರ್ಥಕವಾಗುತ್ತದೆ ಎಂದು ಸಮಾಜ ಸೇವಕ ಹೆಚ್.ಎಸ್.ಸೈಯಾದ್ ಹೇಳಿದರು.


ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಜವಹರಲಾಲ್ ನೆಹರು ಹಾಗೂ ಮಕ್ಕಳದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚಾಚಾ ನೆಹರುರವರಿಗೆ ಗುಲಾಬಿ ಹೂಗಳು ಮತ್ತು ಮಕ್ಕಳೆಂದರೆ ತುಂಬಾ ಪ್ರೀತಿ, ಮಕ್ಕಳು ಹೂತೋಟದ ಮೊಗ್ಗುಗಳು, ಪ್ರೀತಿಯಿಂದ ಸಂರಕ್ಷಿಸಿ, ಬೆಳೆಸಬೇಕು. ಮಕ್ಕಳು ದೇಶದ ಬುನಾದಿ, ದೇಶದ ನಿಜವಾದ ಶಕ್ತಿಯೆಂದು ನೆಹರು ನಂಬಿದ್ದರೆAದರು. ಸ್ವಾತಂತ್ರ‍್ಯ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜೀ ರವರ ಕನಸ್ಸಾಗಿತ್ತೆಂದು ಹೇಳಿದರು.
ನೆಹರು ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನವಾಗಿ ಆಚರಣೆ ಮಾಡುತ್ತಿದ್ದು, ನ. 20ವಿಶ್ವ ಮಕ್ಕಳ ದಿನ. ಇದು ಮುಖ್ಯವಾಗಿ ಮಕ್ಕಳ ಬಾಲ್ಯದ ಆಚರಣೆಯಾಗಿದ್ದು, ಸಂಯುಕ್ತ ರಾಷ್ಟ್ರೀಯಗಳ ಸಾಮಾನ್ಯ ಸಭೆ 1989ರ ನ. 20ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆ ಒಪ್ಪಿ ಸಹಿ ಹಾಕಿತು. 6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ರಾಷ್ಟçದ ಪ್ರಗತಿಗೆ ಅನಿವಾರ್ಯವಾಗಿದೆಯೆಂದರು. ನೆಹರು ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ್ ವೀರಭದ್ರಪ್ಪ.ರಾಜ್ಯ ಕನ್ನಡ ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ, ಜಿಪಂ ಕೆಡಿಪಿ ಸದಸ್ಯ ರಂಗಸ್ವಾಮಿ, ಸೇವಾದಳದ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಮುಖಂರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *