ಚಳ್ಳಕೆರೆ ಜನಧ್ವನಿ ವಾರ್ತೆ ಅ.25 ಒಂದು ಕಡೆ ಗೋಡೌನ್ ಮುಂದೆ ಎಲ್ಲಿ ನೋಡಿದ್ರು ಪಟಾಕಿ ಬಾಕ್ಸ್ಗಳು, ಇನ್ನೊಂದು ಕಡೆ ಪಟಾಕಿ ಸೀಜ್ ಮಾಡ್ತಿರೋ ದೃಶ್ಯ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಚಳ್ಳಕೆರೆ ನಗರದಲ್ಲಿ.
ನಗರದ ಗುಪ್ತ ಸ್ಟೋರ್ ಮೇಲೆ ಪೊಲೀಸರ ದಾಳಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಗಳ ವಶ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಡಿ.ವೈ.ಎಸ್.ಪಿ. ಟಿ.ಬಿ ರಾಜಣ್ಣ ಹಾಗೂ ಪಿಎಸ್ಐ ಶಿವರಾಜ್ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಕಡೆ ನಡೆದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಇತ್ತೀಚಿಗಷ್ಟೆ , ಅತ್ತಿಬೆಲೆಯಲ್ಲಿ ಪಟಾಕಿಗೋದಾಮಿಗೆ ಬೆಂಕಿ ಬಿದ್ದು ಜನರ ಪ್ರಾಣ ಕಳೆದುಕೊಂಡಿದ್ದು ಇನ್ನು ಹಲವರು ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಪ್ರಕರಣ ಮಾಸುವ ಮುನ್ನವೇ ನಗರದ ವಿವಿಧ ಕಡೆ ಅಕ್ರಮವಾಗಿ ಪಟಾಕಿಯನ್ನು ಸಂಗ್ರಹ ಮಾಡಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ನಗರದ ಬಳ್ಳಾರಿ ರಸ್ತೆಯ ಪಟಾಕಿ ಅಂಗಡಿ ಸೇರಿದಂತೆ ವಿವಿಧ ಪಟಾಕಿ ಗೋದಾಮುಗಳಿಗೆ ಪೊಲೀಸರು ದಾಳಿ ಮಾಡಿದ್ದು ಅಕ್ರಮವಾಗಿ ಸಂಗ್ರಹ ಮಡಿದ್ದ ಪಟಾಕಿ ಬಂಡಲ್ ವಶಕ್ಕೆ ಪಡೆದ್ದಿದ್ದಾರೆ.
ಸ್ಥಳದಲ್ಲಿ ಚಳ್ಳಕೆರೆ ಪಿ ಎಸ್ ಐ ಶಿವರಾಜ್, ಪಿಸಿ ವಿಶಾಲ್ ವೆಂಕಟೇಶ್ ಮಂಜುನಾಥ್ ಇನ್ನು ಕೆಲವು ಸಿಬ್ಬಂದಿಗಳು ಇದ್ದರು
0 Comments