ಚಳ್ಳಕೆರೆ ಜನಧ್ವನಿ ವಾರ್ತೆ ಅ.29.
ಶಾಸಕರ ಬಹಿರಂಗ ಅತೃಪ್ತಿ ಬೆನ್ನಲ್ಲಿಯೇ ಕಾಂಗ್ರೆಸ್ ಅದನ್ನು ಶಮನಗೊಳಿಸಲು ನಿಗಮ, ಮಂಡಳಿಗಳ ತಂತ್ರಕ್ಕೆ ಮೊರೆ ಹೋಗಿದೆ. ಅದರಂತೆ ಆಡಳಿತಾರೂಢ ಕಾಂಗ್ರೆಸ್ ತನ್ನ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಂಚುವ ಮತ್ತೊಂದು ಮಹತ್ವದ ಟಾಸ್ಕ್ಗೆ ಅಣಿಯಾಗುತ್ತಿದೆ. ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ನಾಮ ನಿರ್ದೇಶನ ಸಂಬಂಧ ಮಾನದಂಡಗಳಡಿ ಅಧಿಕಾರ ಹಂಚಲು ಪಟ್ಟಿ ಸಿದ್ಧಪಡಿಸಿದ್ದ ಜಿಲ್ಲಾ ಉಸ್ತುರವರಿ ಸಚಿವ ಸ್ಥಾನ ಜತೆಗೆ ಈಗ ಕೋಟೆ ನಾಡಿಗೆ ಎರಡು ನಿಮಗಂಡಿಯ ಅಧ್ಯಕ್ಷ ಸ್ಥಾನಗಳು ಮುಡಿಗೇರುವ ಸಾಧ್ಯತೆ ಇದೆ.
ಹೌದು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಹಾಗೂಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಇಬ್ಬರ ಹೆಸರುಗಳು ಸೇರಿ ಒಟ್ಟು 25 ಶಾಸಕರ ಹೆಸರುಗಳು ನಿಗಮ ಮಂಡಳಿಯ ಅಧ್ಯಕ್ಷ ಪಟ್ಟ ಗದ್ದುಗೇರಲಿದ್ದಾರ
ಕಡಿಮೆ ಅವಧಿಯಲ್ಲೇ ಖ್ಯಾತಿ ಪಡೆದ ಕೀರ್ತಿ.
ಹಟ್ಟಿ ಗಣಿ ಅಧ್ಯಕ್ಷರಾಗಿ ಆರು ತಿಂಗಳಲ್ಲಿ ಗಣಿ ಕಾರ್ಮಿಕರ ಬಾಕಿ ಇದ್ದ ವೇತನ ಸೇರಿದಂತೆ ಇತರೆ ಸ್ಔಲಭ್ಯಗಳನ್ನು ಕಲ್ಪಿಸಿಕೊಟ್ಟದ್ದ ಶಾಸಕ ಟಿ.ರಘುಮೂರ್ತಿಗೆ ಶಾಸಕರ ಭವನದಲ್ಲಿ 27/2/2021 ಹಟ್ಟಿಗಣಿ ಕಾರ್ಮಿಕರು ಶಾಸಕ ಭವನದಲ್ಲಿ ಸನ್ಮಾನ ಮಾಡಿದ ಸಂದರ್ಭ
ಹಟ್ಟಿ ಚಿನ್ನದಗಣಿ ಅಧ್ಯಕ್ಷರಾಗಿ ಆರುತಿಂಗಳಲ್ಲೇ ಕಾರ್ಮಿಕರ ಸಮ್ಯೆಗಳನ್ನು ಬಗೆಹರಿಸಿ ಬಾಕಿ ಇದ್ದ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿದ ಏಕೈಕ ಹಟ್ಟಿಗಣಿ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿಗೆ ಸಲ್ಲುತ್ತದೆ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದ ಶಾಸಕ ಟಿ.ರಘುಮೂರ್ತಿಗೆ ಈಗ ಮತ್ತೆ ಯಾವ ನಿಗಮ ಅಧ್ಯಕ್ಷ ಸ್ಥಾನದ ಲಭಿಸಲಿದೆ.
ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಚಿವ ಸ್ಥಾನ ಸೇರಿನಲ್ಲಿದ್ದ ಶಾಸರಿಗೆ ಕೊನೆಗೆ 2019 ರ ಜನವರಿ 11 ರಂದು ಹಟ್ಟಿಚಿನ್ನದ ಗಣಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಜೂನ್ 11 ಕ್ಕೆ ಅಧಿಕಾರ ಇದ್ದಾಗಲೆ ಸರಕಾರ ಬೀಳುವ ಸೂಚನೆ ಸಿಕ್ಕಾಗ ಸರಕಾರಿ ವಾಹನ ಮರಳಿಸಿದ್ದರು. ಆದರೆ ಸರಕಾರ ಜೂನ್ 27 ಕ್ಕೆ ಬಿದ್ದು ಹೋಯಿತು. ಹಟ್ಟಿಗಣಿ ಅಧ್ಯಕ್ಷರಾಗಿ 6 ತಿಂಗಳ ಅವಧಿಯಲ್ಲಿ ಗಣಿ ಕಾರ್ಮಿಕರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಮಿಕರ ಸಮಸ್ಯೆ ಹಾಗೂ ಗಣಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಇಂಗಳದಾಳ್, ಕೋಲಾರ ಸೇರಿದಂತೆ ವಿವಿಧ ಚಿನ್ನದ ಗಣಿಗಳ ಅಭಿವೃದ್ಧಿ ಪಡಿಸುವ ಕನಸು ಬಗ್ನವಾದರೂ ಸಹ ಪಕ್ಷ ನಿಷ್ಟೆಯಿಂದ ಕಾಂಗ್ರೆಸ್ ತೊರೆದು ಅಧಿಕಾರದ ಆಸೆಗೆ ಹೋಗದೆ ಪಕ್ಷದಲ್ಲೇ ಉಳಿದಿಕೊಂಡು ಪಕ್ಷ ನಿಷ್ಠೆ ಮೆರೆದಿದ್ದಾರೆ.
ಆರು ತಿಂಗಳು ಕಾಲ ಹಟ್ಟಿಚಿನ್ನದ ಗಣಿ ಅಧ್ಯಕ್ಷರಾದರೂ ಸಹ ಗಣಿ ಕಾರ್ಮಿಕರಿಗೆ ಮೆಚ್ಚಿಗೆ ಪಡುವಂತಹ ಹಾಗೂ ಜೀವನ ಪರಿಯಂತಹ ಕೆಲಸ ಮಾಡಿರುವುದನ್ನು ಇಂದಿಗೂ ಸಹ ಹಟ್ಟಿ ಗಣಿ ಕಾರ್ಮಿಕರು ಶಾಸಕ ಟಿ.ರಘುಮುರ್ತಿಯವರನ್ನು ನೆನೆದು ಕೊಳ್ಳುತ್ತಾರೆ. ಸರಕಾರ ಬಿದ್ದುಹೋದಾಗ ಹಟ್ಟಿಗಣಿ ಅಧ್ಯಕ್ಷ ಸ್ಥಾನ ಹೋದಾರು ಸಹ ಹಟ್ಟಿ ಕಾರ್ಮಿಕರ ಮನದಲ್ಲಿ ಉಳಿಯುವಂತೆ ಕೆಲಸ ಮಾಡಿದ್ದಾರೆ ಅದೇ ರೀತಿ ಚಳ್ಳಕೆರೆ ವಿಧಾನ ಸಭೆ ಕ್ಷೇತ್ರದಲ್ಲೂ ಸಹ ಅಭಿವೃದ್ಧಿ ಮಾಡಿರುವುದರಿಂದ ಇಲ್ಲಿನ ಜನರು ಕೈಇಡಿಯುವ ಮೂಲಕ ಹ್ಯಾಟ್ರಿಕ್ ಗೆಲುವ ನೀಡಿದ್ದಾರೆ ಇಂಹತ ಶಾಸಕ ಟಿ.ರಘಮೂರ್ತಿಗೆ ಶಾಸಕ ಸ್ಥಾನ ನೀಡುವಂತೆ ಒತ್ತಆಯಿದ್ದರು ಸಚಿವ ಸ್ಥಾನದ ರೇಸ್ ನಲ್ಲಿದ್ದರೂ ಸಹ ಕೊನೆಗಳಿಯಲ್ಲಿ ಹಿರಿಯೂರು ಶಾಸಕ ಡಿ.ಸುಧಾಕರ್ ಸಚಿವ ಸ್ಥಾನ ಒಲಿಯಿತು.
ಹಟ್ಟಿ ಗಣಿ ಕಾರ್ಮಿಕರಿಂದ ಸನ್ಮಾನ
ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಕೊನೆಕ್ಷಣದಲ್ಲಿ ತಪ್ಪಿದ್ದು ಮತ್ತೆ ಈಗ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಹೆಸರು ಕೇಳಿ ಬಂದಿದ್ದು ಒಳ್ಳೆಯ ನಿಮಗಮಂಡಳಿ ಸ್ಥಾನ ನೀಡುವ ಜತಗೆ ಮುಂದಿನ ದಿನಗಳಲ್ಲಿ ಇವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಕ್ಷೇತ್ರದ ಜನತೆಯ ಮನವಿ.
0 Comments