ಸೆ.27 ಚಳ್ಳಕೆರೆ ಶಾಸಕರ ಭವನ ರಾಜ್ಯಕ್ಕೆ ಮಾದರಿಯಾಗಿದ್ದು ಇದರ ಒಂದು ಸಂಪೂರ್ಣ ವೀಡಿಯೊ ಮಾಡಿಕೊಡಿ ನಾನು ರಾಜ್ಯಕ್ಕೆ ಪ್ರಚಾರ ಮಾಡಲಾಗುವುದು ಎಂದು ಸಿರಿಗೆರೆ ಮಠದ ತರಳು ಬಾಳು ಜಗದ್ದುರು ಬೃಹನ್ಮಠದ ಶ್ರೀಶಿವಕುಮಾರಸ್ವಾಮೀಜಿ ಶ್ಲಾಘಿಸಿದರು.
ಚಳ್ಳಕೆರೆ ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಶ್ರೀಗಳು ಶಾಸಕರ ಭವನಕ್ಕೆಭೇಟಿ ನೀಡಿ ವೀಕ್ಷಣೆ ಮಾಡುವ ಮೂಲಕ ಮೆಚ್ಚಿಗೆ ವ್ಯಕ್ತ ಪಡಿಸಿದರು.
ಶಾಸಕರ ಭವನದಲ್ಲಿ ಸ್ವಾತ್ರಂತ್ರ್ಯ ಫೂರ್ವದ ನಂತರ ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನ ಮಂತ್ರಿಗಳ, ರಾಜ್ಯದ ಮುಖ್ಯಮಂತ್ರಿಗಳ, ಚಿತ್ರದುರ್ಗ ಕ್ಷೇತ್ರದ ಸಂಸದರ , ಕ್ಷೇತ್ರದ ಶಾಸಕರ , ಬುದ್ದ, ಬಸವ,ಅಂಬೇಡ್ಕರ್ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹಾನ್ ಸಂತರ ಭಾವ ಚಿತ್ರ ಹಾಗೂ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಪೋಟೊಗಳನ್ನು ಹಾಕಿರುವುದು ನೋಡಿದರೆ ಇಲ್ಲಿ ಜಾತಿ, ಧರ್ಮ, ಪಕ್ಷ ಬೇದ ಮರೆತು ಸರ್ವ ಜನಾಂಗದ ತೋಟವಿದ್ದಂತಿದ
ಶಾಸಕರ ಭವನಕ್ಕೆಬರುವ ಸಾರ್ವಜನಿಕರಿಗೆ ಅನ್ನ ಸಾಂಭಾರ್, ಬಿಸಿ ಬಿಸಿ ಕಾಫೀ, ಓದಲು ಎಲ್ಲಾ ದಿನಪತ್ರಿಕೆಗಳು, ವಿವಿಧ ಪುಸ್ತಗಳನ್ನು ಸಂಗ್ರಹಿ ಗ್ರಂಥಾಲಯ ಮಾಡಿರುವುದು ವಿಶಾಲವಾದ ಸಭಾಂಗಣ ನಿರ್ಮಿಸಿರುವುದು ಇದು ರಾಜಕ್ಕೆ ಮಾದರಿಯಾಗಿದೆ ಎಂದು ಶಾಸಕರ ಭವನದಲ್ಲಿ ಹಾಕಿರುವ ಪೋಟೊಗಳನ್ನು ವೀಕ್ಷಿಸಿ ಶಾಸಕ ಟಿ.ರಘುಮೂರ್ತಿಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಈಸಂದರ್ಭದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಸಹ ಜ್ಞಾನ ಬಂಡರ ತುಂಭಿದ ಶಾಸಕರ ಭವನ ರಾಜ್ಯದಲ್ಲಿ ಇದೇ ಪ್ರಥಮ ಎಂದ ಬಣ್ಣಿಸಿದರು.
![](https://janadhwani.in/wp-content/uploads/2023/09/IMG_20230927_110903-scaled.jpg)
ಶಾಸಕ ಟಿ.ರಘುಮೂರ್ತಿ, ನಗರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments