ಚಳ್ಳಕೆರೆ ಡಿ.20 ರೈತರ ಬೆಳೆ ಪರಿಹಾರ ತಾವುದೇ ಸಂದರ್ಭದಲ್ಲಿ ರೈತರ ಖಾತೆ ಎಫ್ ಐ ಡಿ ಮೂಲಕ ಜಮೆ ಮಾಡಲಿದ್ದು ಅಧಿಕಾರಿಗಳು ಕೂಡಲೆ ರೈತರ ಪಹಣಿಗೆ ಎಫ್ ಐ ಡಿ ಮಾಡಿಸುವಂತೆ ಜಿಲ್ಲಾಧಿಕಾರಿ ದೀವ್ಯಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಪಹಣಿಗೆ ಆಧಾರ್ ಜೋಡಣೆ ಮಾಡಿಸಿಕೊಂಡವರಿಗೆ ನೇರವಾಗಿ ರೈತರ ಖಾತೆ ಹ ಬೀಳಲಿದೆ. ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸುವಂತೆ ಕಂದಾಯ.ಕೃಷಿ.ತೋಟಗಾರಿಕೆ ಇಲಾಖೆ ಅಧಿಕಾರಿಗಳಿ zoom meeting ಮೂಲಕ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಸೂಚನೆ ನೀಡಿದ್ದಾರೆ
ರಾಜ್ಯದಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ರಯೋಗಿಕವಾಗಿ ಬೆಳೆಪರಿಹಾರದ ಮೊತ್ತವನ್ನು ರೈತರ ಖಾತೆ ವರ್ಗಾವಾಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದ್ದು ಚಳ್ಳಕೆರೆ ತಾಲೂಕಿನಲ್ಲಿ ಇದುವರೆಗೂ ಶೇ 75 ಮಾತ್ರ ರೈತರು ಎಫ್ ಐ ಡಿ ಮಾಡಿಸಿದ್ದು ಬೆಳೆ.ವಿಮೆ.ಬೆಳೆ ಪರಿಹಾರ . ಸೇರಿದಂತೆ ಬೆಂಬಲ ಬೆಲೆ ಮಾರಾಟ್ಟೆ ಮಾರಾಟ ಮಾಡು ಎಫ್ ಐ ಡಿ ಕಡ್ಡಾಯವಾಗಿದೆ ಕೂಡಲೆ ಉಳಿದ ರೈತರು ತಮ್ಮ ಜಮೀನಿನ ಪಹಣಿಗೆ ಎಫ್ ಐ ಡಿ ಮಾಡಿಸುವಂತೆ ತಿಳಿಸಿದರು.
![](https://janadhwani.in/wp-content/uploads/2023/12/Screenshot_20231220_154657.png)
![](https://janadhwani.in/wp-content/uploads/2023/12/Screenshot_20231220_154651.png)
ಯಾವುದೇ ಸಮಯದಲ್ಲಿ ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ಪರಿಹಾರ ಪಟ್ಟಿ ಬಿಡುಗಡೆ ಮಾಡಲಿದ್ದು ಕೃಷಿ.ಕಂದಾಯ. ತೋಟಗಾರಿಗೆ ಇಲಾಖೆ ಅಧಿಕಾರಿಗಳು ಸಕಲ ಸಿದ್ದತೆ ತಾವುದೇ ಲೋಪ ದೋಶವಿಲ್ಲದೆ ಪಟ್ಟಿ ರೈತರ ಪಟ್ಟಿ ತಯಾರಿಸುವಂತೆ ತಿಳಿಸಿದರು. ಜೂಮ್ ಮೀಟಿಂಗ್ ನಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ. ಕೃಷಿ ತಾಂತ್ರಿಕ ಅಧಿಕಾರಿ ಮೇಘನಾ. ಕಂದಾಯ ನಿರೀಕ್ಷರಾದ ಲಿಂಗೇಗೌಡ. ತಿಪ್ಪೇಸ್ವಾಮಿ. ರಾಜೇಶ್. ಚೇತನ್ ಕುಮಾರ್. ತಾಲೂಕಿನ ಎಲ್ಲಾ ಪಿರ್ಕಾ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
0 Comments