ಚಳ್ಳಕೆರೆ ಜೂ.11ರಸ್ತೆಯಲ್ಲೇ ನಿಂತ ಚರಂಡಿ ನೀರು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಜನರು ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು. ಹೌದು ಇದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ಕೇಂದ್ರ ಸ್ಥಳವಾದ ಈಶ್ವರದೇವಸ್ಥಾನ .ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ಮುಚ್ಚಿಹೋಗಿದ್ದು ಚರಂಡಿ ನೀರು ಹಾಗೂ ಮಳೆ ನೀರು ನಿಂದು ಸೊಳ್ಳೆ. ವಿಷಜಂತುಗಳ ಹಾವಳಿ ಗೊಬ್ಬು ವಾಸನೆಯಿಂದ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಿದೆ.
, ಸುಮಾರು ಮೂರು ವರ್ಷಗಳಿಂದ ಅವೈಜ್ಞಾನಿಕ ಚರಂಡಿ ಸಮಸ್ಯೆಯಿಂದ ನೀರು ಹರಿಯದೆ ರಸ್ತೆಯಲ್ಲೇ ನಿಂತಿವೆ ಇಲ್ಲಿ ಖಾಸಗಿ ಆರೋಗ್ಯ ಕ್ಲೀನಿಕ್ ಸಹ ಇದೆ ಈಶ್ವರ ದೇವಸ್ಥಾನಕ್ಕೆ ಹೋಗಬೇಕೆಂದರೆ ತ್ಯಾಜ್ಯ ನೀರು ತುಳಿದುಕೊಂಡೇ ಹೋಗ ಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಗ್ರಾಪಂ ಸದಸ್ಯರ ಹಾಗೂ ಪಿಡಿಒ ಗಮನ ಸೆಳೆದರೂ ಯಾವುದೇ ಪ್ರಯೋಜವಾಗಿಲ್ಲ ಆದ್ದರಿಂದ ನಾವು ಜನಧ್ವನಿ ಮಾಧ್ಯಮದ ಮುಂದೆ ಬಂದಿದ್ದೇವೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಜನ ಪ್ರತಿ ನಿಧಿಗಳು ಚರಂಡಿ ವ್ಯವಸ್ಥೆ ಸರಿಪಡಿ ರಸ್ತೆ ಮೇಲೆ ಹರಿಯಂತೆ ಮಾಡುವರೇ ಕಾದು ನೋಡ ಬೇಕಿದೆ.
0 Comments