ಚರಂಡಿಯಲ್ಲಿ ತ್ಯಾಜ್ಯ ..ರಾತ್ರಿಯಾದಂತೆ ಶೌಚಾ ತ್ಯಾಜ್ಯ ಚರಂಡಿಗೆ ಸಾಂಕ್ರಮಿಕ‌ರೋಗ ಭೀತಿಯಲ್ಲಿ ನಿವಾಸಿಗಳು.

by | 15/11/23 | ಜನಧ್ವನಿ


ಚಳ್ಳಕೆರೆ ನ.15. ತ್ಯಾಜ್ಯದಿಂದ ಹೂಳು ತಮಬಿದ ಚರಂಡಿಗಳು ರಾತ್ರಿಯಾದಂತೆ ಮಲ‌ಮೂತ್ರ ನೀರು ಹರಿಸುವುದು ಇದು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಸಾಂಕ್ರಮಿಕ ರೋಗಗಳ ಬೀತಿಯಲ್ಲಿ ನಾಗರೀಕರು. ಹೌದು ಇದು ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದಿಂದ ಅಜ್ಜನಗುಡಿ ಕಡೆ ಹೋಗುವ ಶಾಂತಿನಗರದ ಚರಂಡಿಯ ಕಥೆ ಪ್ರತಿ ದಿನ ರಾತ್ರಿ 11 ಗಂಟೆಯಾದರೆ ಸಾಕು ಇಲ್ಲಿನ ಜನರು ನಿದ್ರೆಗೆ ಜಾರಿದ ತಕ್ಷಣ ಚರಂಡಿಗೆ ಮಲ ಮೂತ್ರದ ತ್ಯಾಜ್ಯವನ್ನು ಬಿಡ್ತಾರೆ ಇದರ ಗೊಬ್ಬುವಾಸನೆ ಮುಗಿಗೆ ಬಡಿದ ತಕ್ಷ ನಿದ್ರೆ ಬರಲ್ಲ ಹೊಟ್ಟೆಯಲ್ಲಿ ಕರಳು ಕಿತ್ತು ಬರುತ್ತದೆ ಎನ್ನುತ್ತಾರೆ. ಆದರೆ ಯಾವ ಹೋಟೆಲ್ ನವರು ಅಥವಾ ಮನೆಯವರು ಶೌಚಾಲಯದ ತ್ಯಾಜ್ಯ ಚರಂಡಿಗೆ ಬಿಡ್ತರೆ ಎಂಬುದು ಮಾತ್ರ ನಿಗೂಡವಾಗಿದೆ. ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಪಕ್ಕ. ಸಾರ್ವಜನಿಕ‌ ಶೌಚಾಲಯಕ್ಕೆ ಹೊಂದಿಕೊಂಡು ನಿರ್ಮಿಸಿದ ಚರಂಡಿಯಲ್ಲಿ ತ್ಯಾಜ್ಯದಿಂದ ತುಂಬಿದ್ದು ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಈ ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಿಗೆ ತ್ಯಾಜ್ಯ ಹಾಗೂ ಮಲ ಮೂತ್ರ ತ್ಯಾಜ್ಯ ಹಾಕವವರಿಗೆ ದಂಢವಿಧಿಸುವುದು ಕಾನೂನಿನಲ್ಲಿದೆ ಇದು ನಗರಸಭೆ ಅಧಿಕಾರಿಗಳಿಗೆ ಅನ್ವಯವಾಗುವಂತಿಲ್ಲ ಎಂಬಂತಾಗಿದೆ. ಸಾರ್ವಜನಿಕರು ಸಾಂಕ್ರಮಿಕ ರೋಗಗಳ ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.


ಚರಂಡಿಗಳು ಹೂಳು ತುಂಬಿಕೊಂಡಿರುವ ಕಾರಣ ನೀರು ಮುಂದೆ ಹರಿಯದೇ, ಅಲ್ಲಿಯೇ ನಿಲ್ಲುವುದರಿಂದ ದುರ್ವಾಸನೆ ಹರಡುತ್ತಿದೆ.
ಸೊಳ್ಳೆ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ಫಾಗಿಂಗ್ ಮಾಡಿಸುತ್ತಿಲ್ಲ. ಅಲ್ಲದೇ, ಬ್ಲಿಚಿಂಗ್ ಪೌಡರ್ ಸಹ ಸಿಂಪರಣೆ ಮಾಡುತ್ತಿಲ್ಲ. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿರುವ ಸಾಂಕ್ರಮಿಕ ರೋಗ ಭೀತಿ ಎದುರಾಗಿದೆ.
ಕೂಡಲೆ ಸಂಬಂಧ ಪಟ್ಟ. ನಗರಸಭೆ ಅಧಿಕಾರಿಗಳು ಚರಂಡಿಯಲ್ಲಿನ ಹೂಳು ತೆರವುಗೊಳಿಸ ಬೇಕು ರಾತ್ರಿಯಾಗುತ್ತಿದ್ದಂತೆ ಚರಂಡಿ ಶೌಚಾಲಯದ ತ್ಯಾಜ್ಯ ನೀರು ಯಾರು ಬಿಡುತ್ತಾರೆ ಎಂಬುದನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ನಗರಸಭೆ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಮಂಜುಳಮ್ಮ ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *