ಚಳ್ಳಕೆರೆ ಜೂ.3 ಚರಂಡಗಳನ್ನು ಒತ್ತುವರಿ ಹಾಗೂ ಮುಚ್ಚಿರುವ ಚರಂಡಿಗಳನ್ನು ಕೂಡಲೆ ತೆರವುಗೊಳಿಸುವಂತೆ ತಾಪಂ ಲಕ್ಷ್ಮಣ್ ತಾಕೀತು ಮಾಡಿದರು. ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಹೊಟ್ಟೆ ಮುರಿತ.ಬೇದಿಯಂತಹ ಪ್ರಕರಣಗಳು ಕಂಡು ಬಂದ ಹಿನ್ನೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದಲ್ಲಿ ಕುಡುಯುವ ನೀರಿನ ಪೈಪ್ ಗಳನ್ಮ ಸರಿಪಡಿಸಬೇಕು ಒಡೆಪೈಪ್ ಸಂಪರ್ಕ ಕಡಿತಗೊಳಿಸಬೇಕು ಕೂಡಲೆ ಗ್ರಾಮದಲ್ಲಿ ಸ್ಷಚ್ಚತೆ ಶುದ್ದ ಕುಡಿಯುವ ನೀರು ಸರಬರಾಜ್ ಮಾಡ ಬೇಕು ಸದಸ್ಯಕ್ಕೆ ಜನರಿಗೆ ಟ್ಯಾಂಕರ್ ಮೂಲಕ ನೀರು ಸಬರಾಜ್ ಮಾಡುವಂತೆ ಪಿಡಿಒಗೆ ಸೂಚನೆ ನೀಡಿದರು. ಕುಡಿಯುವ ನೀರು ಸರಬರಾಜ್ ಎ ಇ ಇ ದಯಾನಂದ ಮಾತನಾಡಿ ಗ್ರದಲ್ಲಿ 8 ಕೊಳವೆ ಬಾವಿಗಳಿದ್ದು ಅವುಗಳಲ್ಲಿ ಮೂರು ಮಾತ್ರ ಯೋಗ್ಯವಾಗಿ ಉಳಿದ ಐದು ಕೊಳವೆ ಬಾವಿಗಳ ನೀರು ಬಳಕೆ ಅಥವಾ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಸಂಪರ್ಕ ಕೊಡಿ.ಕೆವು ಪೈಪ್ ಲೈನ್ ಒಡೆದಿದ್ದು ಬದಲಾಯಿ ಕೆಟ್ಟ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮೇಲ್ವೀಚಾರಕ ಗಂಗಾಧರಪ್ಪ ಮಾತನಾಡಿ ಗ್ರಾಮದಲ್ಲಿ ಕಾಲರ ರೋಗವಿಲ್ಲ ಜನರು ಆತಂಕಪಡುವುದು ಬೇಡ
ಚರಂಡಿಗಳು ಕಟ್ಟಿಕೊಂಡು ಕಲುಷಿತ ವಾತಾವರದಿಂದ ಜನರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಈಗಲಾದರೂ ನಿಮ್ಮ ಮನೆ ಸುತ್ತ ಮುತ್ತ ಹಾಗೂ ಚರಂಡಿಗಳ ಸ್ವಚ್ಚತೆ ಕಾಪಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಸಂಪತ್ತು. ಡಾ.ಬಿಂದ್ರುಶ್ರೀ. ಎಇ ಇ ಕಾವ್ಯ.ಜೆ ಇ ತಿಪ್ಪೇಸ್ವಾಮಿ.ಪಿಡಿಒ ವೆಂಕಟೇಶ್. ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತ ರಿದ್ದರು.
0 Comments