ಚನ್ನಗಿರಿ ನೂತನ ತಾಲೂಕು ಭಗೀರಥ ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಅಸ್ತಿತ್ವಕ್ಕೆ

by | 18/10/23 | ಸುದ್ದಿ


ಚನ್ನಗಿರಿ, ಅ.17- ದಾವಣಗೆರೆ ಜಿಲ್ಲೆಯ ಚನ್ನಗಿರಿ
ತಾಲೂಕಿನಲ್ಲಿ, ತಾಲೂಕು ಭಗೀರಥ ಉಪ್ಪಾರ ನೌಕರರ
ಕ್ಷೇಮಾಭಿವೃದ್ಧಿಸಂಘ (ರಿ) ವನ್ನು ಪುನಶ್ಚತನಗೊಳಿಸಿ,
ಹೊಸದಾಗಿ ಪದಾಧಿಕಾರಿಗಳನ್ನು ಚನ್ನಗಿರಿ ತಾಲೂಕು
ಉಪ್ಪಾರ ಸಮಾಜದ ಸಮಕ್ಷಮದಲ್ಲಿ ನೇಮಿಸಲಾಯಿತು.
2009 ರಿಂದ ಅಸ್ಥಿತ್ವದಲ್ಲಿರುವ ತಾಲೂಕಿನ ಮೊದಲ
ಸರ್ಕಾರಿ ನೌಕರರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರ
ವಾಗಿರುವ ಸಂಘವು, ಕಳೆದ 15 ವರ್ಷಗಳಿಂದ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಿಶೇಷ ಸಾಧನೆ
ಮಾಡಿದ ಸಮಾಜದ ಬಂಧುಗಳಿಗೆ ಸನ್ಮಾನ, ದತ್ತಿ
ಕಾರ್ಯಕ್ರಮಗಳು, ಉಚಿತ ಕಣ್ಣಿನ ತಪಾಸಣಾ ಶಿಬಿರ,
ಉಚಿತ ರಕ್ತದಾನ ಶಿಬಿರ, ಸಮಾಜದ ನೌಕರ ಬಂಧುಗಳಿಗೆ
ಅನುಕೂಲವಾಗುವಂತೆ ಒಂದೇ ಕಡೆ ಭಗೀರಥ ಲೇಔಟ್
ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹೀಗೆ
ಹತ್ತು ಹಲವು ಕಾರ್ಯಕ್ರಮಗಳನ್ನು ಹಿಂದಿನ ಅಧ್ಯಕ್ಷರು
ಗಳಾದ, ರಾಜಪ್ಪ ಶಿಕ್ಷಕರು, ರಮೇಶ್ ಶಿಕ್ಷಕರು,
ಸಿದ್ಧಲಿಂಗಪ್ಪ, ಶಿಕ್ಷಕರು ಹಾಗೂ ಹನುಮಂತಪ್ಪ ಶಿಕ್ಷಕರು
ಇವರ ಆಡಳಿತ ಅವಧಿಯಲ್ಲಿ ಮಾಡಿದ್ದು, ಈಗ ಸಂಘಕ್ಕೆ
ಯುವಸಾರಥ್ಯ ನೀಡಿ ಕಾರ್ಯ ಚಟುವಟಿಕೆಗಳಿಗೆ ಚಾಲನೆನೀಡಲಾಯಿತು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾಗಿ ಈಶ್ವರಪ್ಪ
ಎಂ.ಎನ್. ದೇವರಹಳ್ಳಿ ಕಾರ್ಯದರ್ಶಿಗಳಾಗಿ ಶೇಖರಪ್ಪ
ಹೊದಿಗೆರೆ, ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ಜಿ. ಎನ್.
ನಲ್ಲೂರು, ಮಹಂತೇಶ್ ಹೆಚ್, ಕಿಚಡಪ್ಪ (ಪ್ರಸನ್ನ)
ಚಿರಡೋಣಿ, ಖಜಾಂಚಿಯಾಗಿ ಬಸವರಾಜಪ್ಪ ಯು.
ಚನ್ನಗಿರಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ
ಕವಿತಾ ಜಗದೀಶ್, ಚನ್ನಗಿರಿ, ಸಹಕಾರ್ಯದರ್ಶಿಯಾಗಿ
ರವಿ ಹೆಚ್.ಎನ್. ಹಾಗೂ ನಿರ್ದೇಶಕರಾಗಿ ಪ್ರಸನ್ನ
ಕುಮಾರ್ ಎಂ.ಹೆಚ್., ರಂಗನಾಥ ಕೆ ಎನ್, ಶ್ರೀಮತಿ
ಲಕ್ಷ್ಮಿದೇವಿ ಎಂ.ಜಿ., ಮೈಲಾರಪ್ಪ ಎಸ್, ಮಲ್ಲೇಶ್
ಎಲ್,ಶ್ರೀಮತಿ ಲಕ್ಷ್ಮಿದೇವಿ ಯು,ಸ್ವಾಮಿ.ಎಸ್. ಇವರನ್ನು
ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಭಗೀರಥ ಸಮಾಜದ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲಾ
ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು,
ಕಟ್ಟೇಮನೆ ಗೌಡರುಗಳು, ತಾಲೂಕಿನ ಎಲ್ಲಾ ಸರ್ಕಾರಿ
ಹಾಲಿ ಮತ್ತು ನಿವೃತ್ತ ನೌಕರರುಗಳು ಹಾಜರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page