ಹಿರಿಯೂರು :
ವೇದಾವತಿ ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್ ನಾಗರೀಕರಿಗೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ನಾಗರೀಕರ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಚಿತ್ರದುರ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪತ್ರದ ಮೇರೆಗೆ ನಗರಸಭೆ ಅಧಿಕಾರಿಗಳು ಒತ್ತುವರಿ ರಸ್ತೆ ತೆರವು ಮಾಡಿಸಿ ಬ್ಲಾಕ್ ಚರಂಡಿ ನಿರ್ಮಿಸಿದ್ದು, ರಸ್ತೆ ಮದ್ಯದಲ್ಲಿರುವ ವಿದ್ಯುತ್ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿಕೊಡಲು ಸಂಬಂಧಿಸಿದ ನಗರಸಭೆ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಮಾಡಿದ್ದೇವೆ, ಆದಾಗ್ಯೂ ಇಲ್ಲಿಯತನಕ ರಸ್ತೆ ಸಂಪರ್ಕ ಕಲ್ಪಿಸಲು ಸಾಧ್ಯವಾಗದೆ ನಾಗರಿಕರಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
ಚಂದ್ರಾ ಲೇ ಔಟ್ ನಾಗರಿಕರಿಗೆ ಯಾವುದೇ ದಿಕ್ಕಿನಿಂದ ಶಾಶ್ವತ ರಸ್ತೆ ಇರುವುದಿಲ್ಲ, ಅರ್ಧ ಕಿಲೋ ಮೀಟರ್ ನಲ್ಲಿ ಸಿಗುವ ಮುಖ್ಯರಸ್ತೆ ತಲುಪಲು ಸುತ್ತಿ ಬಳಸಿ 2 ಕಿಲೋ ಮೀಟರ್ ಕ್ರಮಿಸಿ ಮುಖ್ಯ ರಸ್ತೆ ತಲುಪುವಂತಾಗಿದೆ. ವಯೋವೃದ್ಧರು, ವಿಕಲ ಚೇತನರು, ಶಾಲಾ ಕಾಲೇಜು ಮಕ್ಕಳಿಗೆ ನಗರಕ್ಕೆ ಹೋಗಿ ಬರಲು ಸೂಕ್ತರಸ್ತೆ ಸಂಪರ್ಕ ಇರುವುದಿಲ್ಲ,
ಅಲ್ಲದೆ ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಹೋಗಿ ಬರಲು ಆಟೋರಿಕ್ಷಾ,ಆಂಬುಲೆನ್ಸ್ ಕೂಡ ಮನೆ ಹತ್ತಿರ ಬರುವುದಿಲ್ಲ,ಸೀಮೆಜಾಲಿ,ಪಾರ್ಥೇನಿಯಂ ಬೆಳೆದು ನಿಂತಿರುವ ತಗ್ಗು ಗುಂಡಿ ರಸ್ತೆಯಲ್ಲಿ ಕಲ್ಲು ಮುಳ್ಳು,ಹಾವು ಚೇಳು, ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ಓಡಾಡಬೇಕಾಗಿದೆ ಎಂದರಲ್ಲದೆ,
ಮಳೆಗಾಲ ಬಂತೆಂದರೆ ಕೆಸರುಗದ್ದೆ ರಸ್ತೆಯಲ್ಲಿ ಓಡಾಡಲು ತೊಂದರೆ ಆಗುತ್ತದೆ,ಪ್ರಯುಕ್ತ ನೂತನ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ತ್ವರಿತವಾಗಿ ರಸ್ತೆ ಸಂಪರ್ಕ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಕುಡಿಯುವ ನೀರಿನ ಪೈಪ್ ಚರಂಡಿ ಮೂಲಕ ಹಾದು ಹೋಗಿದೆ ಅಕಸ್ಮಾತ್ ಪೈಪ್ ಒಡೆದು ಹೋದರೆ ಕೊಳಚೆ ನೀರು ಪೂರೈಕೆಯಾಗುವ ಸಾಧ್ಯತೆ ಇರುತ್ತದೆ. ಪೈಪ್ ಲೈನ್ ಮೇಲೆ ಕಾಂಕ್ರೀಟು ಹಾಕಿಸಬೇಕೆಂದು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್, ಅಧ್ಯಕ್ಷ ಸಂತೋಷ ರಾಥೋಡ್, ಉಪಾಧ್ಯಕ್ಷ ಸ್ವಾಮಿ,ಕಾರ್ಯದರ್ಶಿ ಸಿಜಿಗೌಡ ಉಪಸ್ಥಿತರಿದ್ಧರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments