ಹಿರಿಯೂರು :
ವೇದಾವತಿ ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್ ನಿವಾಸಿಗಳಿಗೆ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ನಾಗರೀಕರ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್ ಆಗ್ರಹಪೂರ್ವಕ ಒತ್ತಾಯ ಮಾಡಿದ್ದಾರೆ.
ಈಗಾಗಲೇ ಒತ್ತುವರಿ ತೆರವು ಮಾಡಿರುವ ರಸ್ತೆ ಮದ್ಯದಲ್ಲಿರುವ ವಿದ್ಯುತ್ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿಕೊಡಲು ಸಂಬಂಧಿಸಿದ ನಗರಸಭೆ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
“ಡಾಗ್ ಸರ್ಕಲ್” ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಈ ಭಾಗದ ನಾಗರೀಕರಿಗೆ ಸಿ ಸಿ ರಸ್ತೆ,ಬಾಕ್ಷ್ ಚರಂಡಿ,ಬೀದಿ ದೀಪ,ಸಮರ್ಪಕ ಕುಡಿಯುವ ನೀರಿನ ತೊಂದರೆ ಇರುತ್ತದೆ. ಕೂಗಳತೆ ದೂರದಲ್ಲಿ ಓವರ್ ಹೆಡ್ ಟ್ಯಾಂಕ್ ಇದ್ದರೂ ಸಮರ್ಪಕ ಕುಡಿಯುವ ನೀರು ಬರುತ್ತಿಲ್ಲ.
ಮುಖ್ಯ ಕೊಳವೆ ಮಾರ್ಗಗಳು ಮತ್ತು ವಿತರಣ ಉಪ ಕೊಳವೆ ಮಾರ್ಗಗಳಲ್ಲಿ ಎರಡೂ ಕಡೆ 3 ಇಂಚು ಪೈಪ್ ಲೈನ್ ಇರುವ ಕಾರಣಕ್ಕೆ ಈ ಬಡಾವಣೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ವಾಟರ್ ಮ್ಯಾನ್ ಕುಮಾರ್ ತಿಳಿಸಿದ್ದಾರೆ.
ಆದಪ್ರಯುಕ್ತ ಮುಖ್ಯ ಕೊಳವೆ ಮಾರ್ಗಗಳಲ್ಲಿ 6 ಇಂಚು ಪೈಪ್ ಲೈನ್ ಹಾಕಿಸಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಅವರು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದಾರೆ.
ಚಂದ್ರಾ ಲೇ ಔಟ್ ನಲ್ಲಿರುವ ಉದ್ಯಾನವನ ಜಾಗವನ್ನು ನಗರ ಸಭೆ ದಾಖಲೆಗಳ ಪ್ರಕಾರ ಅಳತೆ ಮಾಡಿಸಿ ಗಡಿ ಗುರುತು ಮಾಡಿ ಗಿಡ ನೆಡುವ ಮೂಲಕ ಉದ್ಯಾನವನ ಜಾಗ, ನರ್ಸರಿ ಶಾಲೆ,ಆಟದ ಮೈದಾನದ ಜಾಗವನ್ನು ನಾಗರೀಕರಿಗೆ ಉಳಿಸಿ ಕೊಡಬೇಕೆಂದು ನಗರಸಭೆ ಪೌರಾಯುಕ್ತರಿಗೆ ಎಸ್.ವಿ.ರಂಗನಾಥ್ ಮನವಿ ಮಾಡಿದ್ದಾರೆ.
ಈ ಸಭೆಯಲ್ಲಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್ ವಿ ರಂಗನಾಥ್,ಅಧ್ಯಕ್ಷ ಸಂತೋಷ ರಾಥೋಡ್,ಉಪಾಧ್ಯಕ್ಷ ಸ್ವಾಮಿ,ಕಾರ್ಯದರ್ಶಿ ಸಿ ಜಿ ಗೌಡ,ನಿರ್ದೇಶಕರಾದ ಸನಾವುಲ್ಲ,ರಂಗಸ್ವಾಮಿ, ತಿಪ್ಪೇಸ್ವಾಮಿ,ರಾಘು,ರಾಜಪ್ಪ,ಗೋವರ್ಧನ್,ಸಾಧಿಕ್ ಶ್ರೀನಿವಾಸ,ಜಾಫರ್, ಚನ್ನಪ್ಪ,ಪರಮೇಶ್ವರಪ್ಪ, ಶಶಿಕುಮಾರ್,ಅಶ್ವತ್ಥ ನಾರಾಯಣ,ವೀರಣ್ಣ ಇತರರು ಉಪಸ್ಥಿತರಿದ್ಧರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments