ಚಳ್ಳಕೆರೆ ಜೂ.7 ಮಳೆ ಬಂದಿದೆ ಎಂದು ಕುಡಿಯುವ ನೀರು , ಮೇವು ಸರಬರಾಜು ನಿಲ್ಲಿಸ ಬೇಡಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇರೆಯಾದರೆ ಮಳೆಗಾಲದಲ್ಲಿ ಒಂದು ಸಮಸ್ಯೆಯಾಗುತ್ತದ ಅಧಿಕಾರಿಗಳು ಎಚ್ಚರಿಂದ ಕರ್ತವ್ಯ ನಿರ್ವಹಿಸುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಚುನಾವಣೆ ನೀತಿ ಸಂಹಿತಿ ಮೂರು ತಿಂಗಳ ನಂತರ ಕ್ಷೇತ್ರವ್ಯಾಪ್ತಿಯ ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅತಿ ವೃಷ್ಠಿ ಅನಾವೃಷ್ಠಿಗೆ ಹಾಗೂ ಅತಿ ಹೆಚ್ಚು ಮಳೆಗೆ ಕೊಚ್ಚಿಹೋದ ರಸ್ತೆ ಹಾಗೂ ಸೇತುವೆಗಳ ಕಾಮಗಾರಿಯನ್ನು ಪ್ಲೆಡ್ ಯೋಜನೆಯಡಿ ಸೇರಿಸಿ ಅಭಿವೃದ್ಧಿ ಪಡಿಸಬೇಕು , ಕೆಟ್ಟು ನಿಂತ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸ ಬೇಕು ಎಂದು ಹೇಳಿದರು.
ನನ್ನಿವಾಳ ಪಿಡಿಒ ಇನಾಯತ್ ಪಾಷ ಸಭೆಗೆ ಮಾಹಿತಿ ನೀಡುವಾಗ ಗ್ರಾಪಂ ವ್ಯಾಪ್ತಿಯಲ್ಲಿ 16 ಶುದ್ದ ಕುಡಿಯುವ ನೀರಿನ ಘಟಕಗಳಿವೆ ಅವುಗಳನ್ನು 10 ಕೆಟ್ಟಿವೆ ಎಂದು ಸಭೆಗೆ ಮಾಹಿತಿನೀಡಿದಾಗ.
ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ ಕೂಡಲೆ ದುರಸ್ಥಿ ಪಡಿಸ ಬೇಕು ಮಳೆಗಾಲದಲ್ಲಿ ಪ್ಲೋರೈಡ್ ಹಾಗೂಕಲುಷಿತ ನೀರು ಸೇವನೆಯಿಂದ ಸಾಂಕ್ರಮಿಕ ರೋಗಗಳ ಬರುವ ಸಾಧ್ಯತೆ ಇದೆ ಎಂದು ಹೇಳಿದಾಗ.
ಕುಡಿಯುವ ನೀರು ಜೆಇ ತಿಪ್ಪೇಸ್ವಾಮಿ ಮಾತನಾಡಿ ಅವು ಕೆಟ್ಟಿಲ್ಲ ಗ್ಲಾಸ್ ಒಡೆದು ಬಿಡಿ ಭಾಗಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದರು.
ಶಾಸಕ ಟಿ,.ರಘುಮೂರ್ತಿ ಮಾತನಾಡಿ ನಿಮ್ಮ ಮನೆ ಅಥವಾಜಮೀನನಲ್ಲಿ ಕಳವಾದರೆ ಸುಮ್ಮನೆ ಇರುತ್ತೀರಾ ದೂರು ನೀಡಿತ್ತೀರು ಇದು ಸರಕಾರದ ಸೊತ್ತು ಎಂದು ನಿರ್ಲಕ್ಷವೇ? ಕಳವು ಮಾಡುವವರು ನೀರು ಹಿಡಿಯುವವರಲ್ಲಿ ಬೇರೆಯವರಿರುತ್ತಾರೆ ಕೂಡಲೆ ದೂರು ನೀಡಿ ಎಂದು ಸೂಚನೆ ನೀಡಿದರು.
ಈಗಾಗಲೆ ರೈತರು ಸಂಕಷ್ಟದಲ್ಲಿದ್ದಾರೆ ಬೆಳೆ ಪರಿಹಾರ, ಬೆಳೆವಿಮೆ ಬಂದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಇದಕ್ಕೆ ನಿಖರವಾದ ಮಾಹಿತಿಯನ್ನು ರೈತರ ನೀಡ ಬೇಕು . ಬೆಳೆ ನಷ್ಟವಾದ ರೈತರಿಗೆ ಕೂಡಲೆ ಪರಿಹಾರ ಕೊಡಸ ಬೇಕು ಎಂದು ತಿಳಿಸಿದರು.
ಮುಂಗಾರು ಉತ್ತಮ ಮಳೆಯಾಗಿದ್ದು ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳ ಬೇಕು ಎಂದು ಶಾಸಕ ಟಿ.ರಘುಮೂರ್ತಿ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಡಿಒಗಳು ಯಾರ ಒತ್ತಡಕ್ಕೆ ಮಣಿಯದೆ ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡ ಬೇಕು, ಬೋಗಸ್ ಬಿಲ್ ನೀಡಿ, ಕಾನೂನು ಚೌಕಟ್ ಬಿಟ್ಟು ಮಾಡಿ ಎಂದು ನಾನು ಹೇಳುವುದಿಲ್ಲ ಗ್ರಾಪಂ ಸದಸ್ಯರು ಹೇಳಿದ ಸಮಸ್ಯರನ್ನು ವಿಶ್ವಾಸಕ್ಕೆ ಪಡೆದು ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ , ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಿದರೆ ನಿಮ್ಮ ಬಗ್ಗೆ ದೂರುಗಳು ಬರುವುದಿಲ್ಲ ಎಂದು ತಿಳಿಸಿದರು.
ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ ಬಿಲ್ ಬಾಕಿದೆ ಎಂದು ಬಿಡುಗಡೆ ಮಾಡಿಸುವಂತೆ ಪಿಡಿಒಗಳು ಸಭೆ ಗಮನಸೆಳೆದರು.
ತಹಶೀಲ್ದಾರ್ ರೇಹಾನ್ ಪಾಷ ಬೆಳೆ ಪರಿಹಾರ ಬೆಳೆ ಬಿಡುಗಡೆಯಾಗಿರುವ ಅಂಕಿ ಅಂಶಗಳನ್ನು ಸಭೆ ಗಮನಸೆಳೆದರು.
ಸಭೆಯಲ್ಲಿ ತಾಪಂ ಆಡಳೀತ ಅಧಿಕಾರಿ ಕೃಷಿ ಜಂಟಿ ನಿರ್ದೇಶಕ ಡಾ.ಮಂಜುನಾಥ. ಚಿತ್ರದುರ್ತ ತಹಶೀಲ್ದಾರ್ ನಾಗವೇಣಿ, ತಾಪಂ ಇಒ ಲಕ್ಷ್ಮಣ್, ಚಿತ್ರದುರ್ಗ ತಾಪಂ ಇಒ ಅನಂತರಾಜ್, ಕುಡಿಯುವ ನೀರು ಸರಬರಾಜು ಇಲಾಖೆ ಇ ಇ ಬಸವನಗೌಡ ಪಾಟಿಲ್, ಪೌರಾಯುಕ್ತ ಜೀವನ್ ಕಟ್ಟಿ, ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments