ಚಳ್ಳಕೆರೆ ಸೆ.9. ಮುಂಗಾರು ಮಳೆ ಕೈಕೊಟ್ಟಿದ್ದು ಅಂತರ್ಜಲ ಮಟ್ಟ ಕುಸಿಯುವ ಸಾಧ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಜಿ ಪಂ ಸಿಇಒ.ಜೆ.ಸೋಮಶೇಖರ್ ಕಿವಿಮಾತು ಹೇಳಿದರು.
ನೂತನವಾಗಿ ಜಿಪಂ ಅಧಿಕಾರಿ ಸ್ವೀಮರಿಸಿ ಪ್ರಥಮಬಾರಿಗೆ ಚಳ್ಳಕೆರೆ ತಾಲೂಕಿನ ಸಾಣೀಕೆರೆ. ಬೆಳಗೆರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ .ಅಮೃತಸರ ಹಾಗೂ ಘನ ತ್ಯಾಜ್ಯ ಘಟಕಗಳಿಗೆ ಭೇಟಿ ನೀಡಿ ಅನುಷ್ಠಾನಗೊಂಡ ಕಾಮಗಾರಿಗಳ ಕಡತಗಳನ್ನು ಪರಿಶೀಲನೆ ನಡೆಸಿ ನಂತರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒ ಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರ ಬೀದಿ ದೀಪ. ಸ್ವಚ್ಚತೆ. ಇ-ಸ್ವತ್ . ಖಾತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಿದರೇ ನಿಮ್ಮ ಮೇಲೆ ಯಾವುದೇ ಆರೋಪಗಳು ದೂರುಗಳು ಬರುವುದಿಲ್ಲ ಕಚೇರಿಗೆ ಬಂದ ಜನರನ್ನು ಅಲೆದಾಡಿಸದೇ ಕೆಲಸ ಮಾಡಿಕೊಟ್ಟರೆ ಜನರ ಮೆಚ್ಚಿಗೆಗೆ ಪಾತ್ರರಾಗಿ ಜನರ ಮನದಲ್ಲಿ ಉಳಿಯುತ್ತೀರಿ. ನರೇಗಾ ಯೋಜನೆಯಡಿಯಲ್ಲಿ ಗುಣ ಮಟ್ಟದ ಕಾಮಗಾರಿಗಳನ್ನು ಮಾಡುವ ಜತೆಗೆ ಗ್ರಾಮೀಣ ಭಾಗದ ದುಡಿಯುವ ಕೂಲಿ ಕಸರ್ಮಿಕರ ಕೈಗಳಿಗೆ ಕೆಲಸ ನೀಡುವಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ . ಕುಡಿಯುವ ನೀರಿನ ಮೂಲಗಳ ಸ್ವಚ್ಚತೆ ಹಾಗೂ ಪೈಪ್ ಲೈನ್ ದುರಸ್ಥಿ ಪಡಿಸ ಬೇಕು ಚಿತ್ರದುರ್ಗದ ತಾಲೂಕಿನ ಕಾವಡಿಗರ ಹಟ್ಟಿಯ ಘಟನೆ ಮತ್ತೆ ಎಲ್ಲೂ ಮರುಕಳಿಸ ಬಾರದು. ಗ್ರಾಮಪಂಚಾಯ್ ಗಳಲ್ಲಿನಿಗಧಿ ಪಡಿಸಿದ ದಿನಾಂಕದೊಳಗೆ ಸಾಮಾನ್ಯ ಸಭೆ.ಗ್ರಾಮಸಭೆ.ವಾರ್ಡ್ ಸಭೆ ಹಾಗೂ ಅನ್ ಲೈನ್ ಸಭೆಗಳನ್ನು ಆಯೋಜಿಸಿ ಪಂಚತಂತ್ರದಲ್ಲಿ ಎಲ್ಲಾ ಮಾಹಿತಿಯನ್ನು ಅಳವಡಿಸಬೇಕು.
ಅಧಿಕಾರಿಗಳು ಯಾವುದೇ ಲೋಪವೆಸಗೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಕೊರಮ ತಿಮ್ಮಪ್ಪ. ಜಿಪಂ ಯೋಜನಾಧಿಕಾರಿ ಸತೀಶ್ ರೆಡ್ಡಿ. ಕಾರ್ಯಪಾಲಕ ಅಭಿಯಂತರ (ಪಂ.ರಾ) ಹನುಮಂತಪ್ಪ. ತಾಪಂ ಇಒ ಹೊನ್ನಯ್ಯ ಜಿ ,ನರೇಗಾ ಸಹಾಯಕ ನಿರ್ದೇಶಕ ಸಂತೋಷ್. ಜಿಲ್ಲಾ ಎ.ಡಿ.ಪಿ.ಸಿ,ಜಿಲ್ಲಾ ಐ ಇ.ಸಿ ಹಾಗೂ ಎಡಿ.ಪಿ.ಎಂ.ಯು ಹಾಗೂ ತಾಲ್ಲೂಕಿನ ಎಲ್ಲಾ ಪಿ.ಡಿ.ಓ.ತಾಂತ್ರಿಕ ಸಹಾಯಕರು ತಾ.ಪಂ ಹಾಗೂ ಇತರೆ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
0 Comments