ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31 ಗ್ರಾಮೀಣ ಪ್ರದೇಶದಲ್ಲಿನ ಚರಂಡಿಗಳ ಸ್ವಚ್ಚತೆ ಹಾಗೂ ಪಿನಾಯಿಲ್ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಿ ಸಾಂಕ್ರಮಿಕ ರೋಗಗಳು ಹರಡದಂತೆ ಮುಂಗಾಗೃತೆ ಕ್ರಮ ಕೈಗೊಳ್ಳುವಂತೆ ತಾಪಂಇಒ ಲಕ್ಷ್ಮಣ್ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಗ್ರಾಪಂ ಪಿಡಿ ಒಗಳಿಗೆ ಆಯೋಜಿಸಿದ್ದ ಜ್ಯೂಮ್ ಮೀಟಿಂಗ್ ನಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.
ಮಳೆ ಬಂದಿದೆ ಹಾಗೂ ಇನ್ನು ಮಳೆ ಬರುವ ಸೂಚನೆ ಇದ್ದು ಚರಂಡಿಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚತೆ ಮಾಡಿಸಿ ಸಾಂಕ್ರಮಿಕ ರೋಗಗಳು ಹರಡದಂತೆ ನೋಡಿ ಕೊಳ್ಳ ಬೇಕು, ಕೂಸಿನ ಮನೆಗಳನ್ನು ಕಡ್ಡಾಯವಾಗಿ ಪ್ರಾರಂಭಿಸಿ ನರೇಗಾಕೂಲಿ ಕಾರ್ಮಿಕರ ಮಕ್ಕಳನ್ನು ದಾಖಲು ಮಾಡಿಕೊಳ್ಳ ಬೇಕು ಹಾಜರಾತಿ ಕಡ್ಡಾಯ.
15 ನೇ ಹಣ ಕಾಸು ಹಾಗೂ ವಿವಿಧ ಯೋಜನೆಯಡಿಯಲ್ಲಿ ಹಣ ಬಳಕೆ ಪ್ರಮಾಣ ಪತ್ರ, ಆಸ್ತಿ ಸರ್ವೆ ಮಾಹಿತಿ, ನರೇಗಾ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ನಿಗಧಿ ಪಡಿಸಿದ ಗುರಿಯನ್ನು್ ಶೇ100 ರಷ್ಟು ಗುರಿ ಸಾಧಿಸ ಬೇಕು , ಕುಡಿಯುವ ನೀರು , ಬೀದಿ ದೀಪ , ರಸ್ತೆ ,ಚರಂಡಿಗಳ ಸ್ವಚ್ಚಗೆ ಬಗ್ಗೆ ಹೆಚ್ಚು ಗಮನಹರಿಸುವಂತೆ ಪಿಡಿಒಗಳಿಗೆ ಇಒ ಲಕ್ಷ್ಮಣ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಹಯಾಯಕ ನಿರ್ದೇಶಕ ಸಂಪತ್, ನರೇಗಾ ಎಂಐಎಸ್ ಸಂಯೋಜಕ ಮಹೇಂದ್ರ ಇದ್ದರು,
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments