ಚಳ್ಳಕೆರೆ ಡಿ.15 ನರೇಗಾ ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದು ಯಂತ್ರಗಳನ್ನು ಬಳಕೆ ಮಾಡದೆ ಕೂಲಿ ಕಾರ್ಮಿಕರಿಂದ ಗುಣ ಮಟ್ಟದ ಕಾಮಗಾರಿಗಳನ್ನು ನಿರ್ಮಿಸುವ ಮೂಲಕ ಗ್ರಾಮಗಳ ಸರ್ವೊತೋ ಮುಖ ಅಭಿವೃದ್ಧಿಗೆ ಶ್ರಮಿಸುವಂತೆ ತಾಪಂ ಇಒ ಶಶಿಧರ್ ಕಿವಿಮಾತು ಹೇಳಿದರು.
ತಾಲೂಕಿನ ಚೌಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಅನುಷ್ಠಾಗೊಂಡ ಕಾಮಗಾರಿಗಳು ಸಾಮಾಗ್ರಿ ಬಿಲ್ ಎಫ್ ಟಿ ಒ ಮಾಡುವ ಮುನ್ನ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ನರೇಗಾ ಯೋಜನೆಯಡಿಯಲ್ಲಿ ಅಂತರ್ಜಲ ಹೆಚ್ಚಿಸಲು ಕೆರೆ.ಕಾಲುವೆ.ಗೋಕಟ್ಟೆ.ತೋಟಗಾರಿಕೆ.ಶಾಲಾ ಅಂಗನವಾಡಿಗಳಿಗೆ ಶೌಚಾಲಯ .ಕಾಂಪೌಡ್ ನಿರ್ಮಾಣ. ಸೇರಿದಂತೆ ಗ್ರಾಮೀಣ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚು ಕೂಲಿ ಸಿಗುಂತೆ ಕೆಲಸ ನೀಡಿ ಕೂಲಿಗಾಗಿ ಗುಳೆ ಹೋಗುವುದನ್ನು ತಪ್ಪಿಸಬೇಕು. ನರೇಗಾ ಕಾಮಗಾರಿಗಳಲ್ಲಿ ಕಳಪೆ ಅಥವಾ ಕಾಮಗಾರಿಗಳ ಆರೋಪಗಳು ಬರದಂತೆ ಕಾಮಗಾರಿಗಳ ಗುಣ ಮಟ್ಟ ಕಾಪಾಡುವಂತೆ ತಿಳಿಸರು. ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ.ನರೇಗಾ ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments