ಚಳ್ಳಕೆರೆ ಜನಧ್ವನಿ ವಾರ್ತೆ ಜ.4 ಗ್ರಾಮೀಣ ಕೂಲಿ ಕಾರ್ಮಿಕರಿಗೆ ರೈತರಿಗೆ ನರೇಗಾ ಯೋಜನೆ ವರದಾನವಾಗಿದ್ದು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಕೈ ಜೋಡಿಸುವಂತೆ ತಾಪಂ ಇಒ ಶಶಿಧರ್ ಕಿವಿ ಮಾತು ಹೇಳಿದರುಮ. ತಾಲೂಕಿನ ಗೌರಸಮು ಗ್ರಾಮಪಂಚಾತಿ ವ್ಯಾಪ್ತಿಯಲ್ಲಿ ನರೇಗಾಯೋಜನೆಯಡಿಯಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು. ನರೇಗಾಯೋಜನೆಯಡಿಯಲ್ಲಿ ರೈತರ ಭೂ ಅಭಿವೃದ್ದಿ. ಕೆರೆ ಕಾಲುವೆ ಹೂಳೆತ್ತುವುದು. ರಸ್ತೆ. ಚರಂಡಿ ಕೃಷಿ. ತೋಟಗಾರಿಗೆ ಅಭಿವೃದ್ಧಿ. ಸರಕಾರಿ ಶಾಲಾ ಅಂಗನವಾಡಿ ಕಟ್ಟಡ.ತಡೆಗೋಡೆ ನಿರ್ಮಾಣ. ಗ್ರಾಮೀಣ ಸಂತ ಉದ್ಯಾನವನ. ಶಾಲಾ ಮಕ್ಕಳಿಗೆ ಬಿಸಿಯೂಟ ಕೋಣೆ. ಕ್ರೀಡಾಂಗಣ. ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶವಿದ್ದು ಕ್ರೀಯಾ ಯೋಜನೆ ರೂಪಿಸಿ ಅನುಮೋದನಡಯನ್ನು ಪಡೆದು ಕಾಮಗಾರಿಗಳನ್ನು ಕೈಗೆತ್ತಿಕೊಂಡು ದುಡಿತುವ ಕೈಗಳಿಗೆ ಕೆಲಸ ನೀಡುವ ಮೂಲಕ ಗುಣ ಮಟ್ಟ ಕಾಮಗಾರಿಗಳನ್ನು ರೂಪಿಸ ಬೇಕು ಈಗಾಗಲೆ ನರೇಗಾ ಯೋಜನೆಯಡಿ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರು ಕ್ರೀಡಾಂಗಣ ಚೆನ್ನಾಗಿವೆ ಅದೇ ರೀತಿ ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೆ ಕ್ರೀಡಾ ಕೂಟಗಳಿಗೆ ಪ್ರೋತ್ಸಹಿಸಲು ಕ್ರೀಡಾಂಗಣಗಳನ್ನು ನಿರ್ಮಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ ಓಬಣ್ಣ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹನುಮಂತ ರಾಯ ಗ್ರಾಮ ಪಂಚಾಯತಿ ಸದಸ್ಯರಾದ ಜಿ.ಎಂ ಈರಣ್ಣ ಟಿ. ಶಶಿಕುಮಾರ್. ಸಂಜಯ್ ಗೌಡ ಇತರರಿದ್ದರು.
0 Comments