ಪಾವಗಡ ಮೇ 7 ಸೇವೆ ಮಾಡುವುದು ಮನುಷ್ಯನ ಕರ್ತವ್ಯ, , ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯಕ್ರಮಗನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಋಣ ತೀರಿಸುವುದು ದೊಡ್ಡ ಗುಣ ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಬಿ.ಆರ್.ರವಿಕಾಂತೇ ಗೌಡ, ಐ.ಪಿ.ಎಸ್ ಹೇಳಿದರು.
ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಅವರು ಭೇಟಿ ನೀಡಿ ಕಣ್ಣಿನ ಆಸ್ಪತ್ರೆ, ವಿವಿಧ ಚಿಕಿತ್ಸಾ ಆರೋಗ್ಯ ಕೇಂದ್ರ ಹಾಗೂ ಜಾನುವಾರುಗಳಿಗೆ ಮೇವು ವಿತರಣೆ ಕಾರ್ಯಮ ವೀಕ್ಷಣೆ ಮಾಡಿ ಮಾತನಾಡಿದರು.
ಕುಷ್ಠರೋಗ ನಿರ್ಮೂಲನೆ, ಕ್ಷಯರೋಗ ನಿಯಂತ್ರಣ, ಅಂಧತ್ವ ನಿಯಂತ್ರಣ, ಕಿವಿ, ಗಂಟಲು, ಮೂಗಿನ ಯೋಜನೆ ಮುಂತಾದ ಇಪ್ಪತ್ತಕ್ಕೂ ಹೆಚ್ಚಿನ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಜೊತೆಯಲ್ಲಿ ತಾವು ಮತ್ತೊಂದು ಅದ್ಭುತವಾದ ವಿಚಾರವನ್ನು ಕಂಡಿರುವುದೇನೆಂದರೆ ಕರ್ನಾಟಕವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಒಡಿಶಾ, ಮುಂತಾದ ರಾಜ್ಯಗಳಲ್ಲಿಯೂ ಸಹ ನೆರೆ ಹಾವಳಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪೂಜ್ಯರ ನೇತೃತ್ವದಲ್ಲಿ ನಡೆಸುತ್ತಿರುವ ಪರಿಹಾರ ಯೋಜನೆಗಳು ದೇಶಕ್ಕೆ ಒಂದು ಮಾದರಿ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಹಿಂದುಳಿದ ಪ್ರದೇಶದಲ್ಲಿ ಶ್ರೀಸ್ವಾಮಿವಿವೇಕಾನಂದರ, ಶ್ರೀಶಾರದಾಶ್ರಮ ಹಾಗೂ ಸುಧಾಮೂರ್ತಿಯವರ ಟ್ರಸ್ಟ್ ಅಡಿಯಲ್ಲಿ ಬಡಮಕ್ಕಳಿಗೆ ಶಿಕ್ಷಣ ಆರೋಗ್ಯ ಸೇವೆ ನೀಡುವ ಜತೆ ಜತೆಯಲ್ಲಿ ಪ್ರಾಣಿ ಸಂಕುಲ, ಗೋ ಮಾತೆಗಳಿಗೆ ಉಚಿತ ಮೇವು ನೀರು , ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವುದು ವಿವೇಕಾನಂದರ ಆಶಯಗಳನ್ನು ಸಾಕಾರಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ.
ಇಂತಹ ಬೀಕರ ಬರಗಾಲದಲ್ಲಿ ದೇವರ ಎತ್ತುಗಳಿಗೆ ಹಾಗೂ ರೈತರ ಜಾನುವಾರುಗಳಿಗೆ ಮೇವು ಒದಗಿಸುತ್ತಿರುವುದು ಇದು ಪುಣ್ಯದ ಕೆಲಸ ಎಂದು ಶ್ರೀ ಜಪಾನಂದಸ್ವಾಮೀಜಿಯವರ ಸೇವೆಯನ್ನು ಶ್ಲಾಘೀಸಿದರು.
ಶ್ರೀ ಜಪಾನಂದಜೀ ಮಾತನಾಡಿ, ಕಳೆದ ಸುಮಾರು 30 ವರ್ಷಗಳಿಂದ ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರ ನಿರಂತರವಾಗಿ ಜನಸೇವೆ ಸಲ್ಲಿಸುತ್ತಿದೆ. ಕಣ್ಣಿನ ಆಸ್ಪತ್ರೆ ಕೂಡ ಭವಿಷ್ಯದಲ್ಲಿ ಜನರಿಗೆ ಅನುಕೂಲವಾಗಲಿದೆ, ಬಡವರ ಪರವಾದ ಸಾಕಷ್ಟು ಕಾರ್ಯಕ್ರಮವನ್ನು ಆಶ್ರಮದ ವತಿಯಿಂದ ರೂಪಿಸಲಾಗಿದ್ದು, ಇನ್ಫೋಸಿಸ್ ಫೌಂಡೇಷನ್ ನೆರವು ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಐ.ಪಿ.ಎಸ್. ರೈತ ಮುಖಂಡರಾದ ಜಯಸಿಂಹರೆಡ್ಡಿ, ಹೊನ್ನಪ್ಪ, ಸುದೇಶ್ ಬಾಬು, ಎಂ.ಭಗವಂತಪ್ಪ, ರಾಮಮೂರ್ತಿ, ರಾಮನಾಥ್, ಕಮಲ್ ಬಾಬು, ಕೃಷ್ಣಮೂರ್ತಿ, ಗೋವಿಂದರಾಜು ಇತರರಿದ್ದರು.
0 Comments