ಚಳ್ಳಕೆರೆ ಜನಧ್ವನಿ ವಾರ್ತೆ ಜ.1 ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಿನ ನಿತ್ಯ ಜನರೊಂದಿಗೆ ಬೆರತು ಕಚೇರಿಯಲ್ಲಿ ಕೂತು ಸಾರ್ವಜನಿಕರ ಸಮಸ್ಯೆಗಳನ್ನು ಹಾಲಿಸಿ ಕೆಲಸ ಮಾಡಿದಾಗ ನಿಮ್ಮ ಬಗ್ಗೆ ಯಾವುದೇ ದೂರುಗಳು ಬರುವುದಿಲ್ಲ ಎಂದು ತಾಪಂ ಇಒ ಶಶಿಧರ್ ಕಿವಿಮಾತು ಹೇಳಿದರು,
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಪಂ ಪಿಡಿಓ , ಕಾರ್ಯದರ್ಶಿ, ಕಡವಸೂಲಿಗಾರ, ಕಂಪ್ಯೂಟರ್ ಆಪರೇಟ್ ಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಿಬ್ಬಂದಿಗಳಿಂದ ಆಯೋಜಿಸಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಸರಕಾರಗಳಿಂದ ಬರುವ ಸುತ್ತೋಲೆಗಳನ್ನು ನಿರ್ಲಕ್ಷ ವಹಿಸದೆ ಅವುಗಳನ್ನು ಸಕಾಲಕ್ಕೆ ಪಾಲನೆ ಮಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಗ್ರಾಮಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಗ್ರಾಮಗಳ ಅಗತ್ಯ ಮೂಲ ಭೂತ ಸೌಲಭ್ಯಗಳ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಅನುಷ್ಠಾನಗೊಂಡ ಕಾಮಗಾರಿಗಳನ್ನು ನಿಗಧಿತ ಅವದಿಯೋಗಳಗೆ ಗುಣ ಮಟ್ಟ ಕಾಮಗಾರಿಗಳನ್ನು ನಿರ್ಮಿಸ,
ಗ್ರಾಮದಲ್ಲಿ ಆಸ್ತಿಗಳ ಸರ್ವೆಕಾರ್ಯ ಮಾಡುವ ಮೂಲಕ ಆನ್ ಲೈನ್ ಗೆ ಅಳವಡಿಸಬೇಕು, ಇ-ಸ್ವತ್ತು ನಿಗಧಿತ ಅವಧಿಯೊಳಗೆ ಜನರನ್ನು ಕಚೇರಿಗೆ ಅಲೆದಾಡಿಸದೆ ಮಡಿಕೊಡಬೇಕು, ಕರವಸೂಲಿ ಮಾಡಿದ ಹಣವನ್ನು ದುರ್ಬಳಕೆ ಮಾಡದೆ ವಸುಲಾತಿಯಾದ ಹಣವನ್ನು ಬ್ಯಾಂಕಿಗೆ ಪಾವತಿ ಮಾಡಬೇಕು. ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿಗಳ ಗುಣ ಮಟ್ಟ ಹಾಗೂ ಚೆಕ್ ಲೀಸ್ಟ್ ಪ್ರಕಾರ ಕಡತಗಳನ್ನು ಸಿದ್ದ ಪಡಿಸಬೇಕು.
![](https://janadhwani.in/wp-content/uploads/2024/01/IMG_20240101_123115-scaled.jpg)
ಗ್ರಾಮೀಣ ಜನರಿಗೆ ಕುಡಿಯುವ ನೀರು, ಸ್ವಚ್ಚತೆ ಬೀದಿ ದೀಪ, ನೈರ್ಮಲ್ಯ, ಇ-ಸ್ವತ್ತು ಖಾತೆಗಳನ್ನು ನೀಡಿದರೆ ಯಾರೂ ನಿಮ್ಮ ಬಗ್ಗೆ ಆರೋಪಗಳನ್ನು ಮಾಡುವುದಿಲ್ಲ ನಿಗಧಿತ ಅವಧಿಯೊಳಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಿ ಹಾಗೂ ಸಾರ್ವನಿಕರು ನಿಮಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸಿ ಮಾತನಾಡಿ ಮಾಹಿತಿ ಪಡೆದುಕೊಳ್ಳಿ ಹಾಗೂ ಮಾಹಿತಿ ನೀಡಿ ಅವರ ಸಂಪರ್ಕಕ್ಕೆ ನೀವು ಸದಾ ಸಿಗುವಂತಾಗ ಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನರೇಗಾ ಸಹಾಯಕ ನಿರ್ಧೇಶಕ ಸಂತೋಷ್, ತಾಪಂ ಸಹಾಯಕ ನಿರ್ಧೇಶಕ ಸಂಪತ್ ಕುಮಾರ್, ಲೆಕ್ಕಾಧಿಕಾರಿ ಕೆಂಚಪ್ಪ, ಸಹಾಯಕ ಲೆಕ್ಕಾಧಿಕಾರಿ ದಿವಾಕರ್, ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಮಾಜಿ ಅಧ್ಯಕ್ಷ ದೇವರಾಜ್, ಜಿಲ್ಲಾ ಪಿಡಿಒಗಳ ಸಂಘದ ಮಾಜಿ ಅಧ್ಯಕ್ಷ ಗುಂಡಪ್ಪ ಇತರರಿದ್ದರು.
ಇದೇ ಸಂದರ್ಭದಲ್ಲಿ ತಾಪಂ ಕಚೇರಿಯ ವಿಶೇಷ ಚೇತನ ಪ್ರಥಮರ್ಜೆ ಸಹಾಯಕ ನೌಕರನಿಂದ ಕೇಕ್ ಕತ್ತರಿಸುವ ಮೂಲಕ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ ಹೊಸ ವರ್ಷಾಚರಣೆ ಆಚರಣೆ ಮಾಡಿದರು.
0 Comments