ಹಿರಿಯೂರು :
ತಾಲೂಕಿನ ಯಾವ ಗ್ರಾಮ ಪಂಚಾಯತಿಯಲ್ಲೂ ಈ ಸ್ವತ್ತು ಖಾತೆ ಮಾಡುತ್ತಿಲ್ಲ, ಖಾಸಗಿ ಕಂಪ್ಯೂಟರ್ ಸೆಂಟರ್ ಗಳಲ್ಲಿ ಮಾಡಲಾಗುತ್ತಿದ್ದು, ಈ ಸ್ವತ್ತು ಖಾತೆಗೆ 1,50,000 ದಿಂದ ಕನಿಷ್ಠ 10,000 ದವರೆಗೆ ಹಣ ಪಡೆಯುತ್ತಿದ್ದಾರೆ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯರಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆಪಾದಿಸಿದ್ದಾರೆ.
ನಗರದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಬಗ್ಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಕಾಯ್ದೆ ಕಾನೂನುಗಳನ್ನು ಉಲ್ಲಂಘನೆ ಮಾಡಿ, ಅಕ್ರಮವಾಗಿ, ಕಾನೂನುಬಾಹಿರವಾಗಿ, ನಡೆಯುತ್ತಿರುವ ಅವ್ಯವಹಾರಗಳ ಕುರಿತು ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸಿದರು
ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ರಾಜ ಪ್ರಮುಖರು, ರಾಜ್ಯಪಾಲರ ಹೆಸರಿನಲ್ಲಿ ಮತ್ತು ಶಿಕ್ಷಣಕ್ಕೆ ಮೀಸಲಿರಿಸಿದ ಸ್ಥಳ, ಸರ್ಕಾರಿ ಜಾಗ, ಗುಂಡು ತೋಪು, ಗ್ರಾಮ ಠಾಣಾ ಜಾಗಗಳಲ್ಲಿ ಈ ಸ್ವತ್ತು ಖಾತೆ ಮಾಡಲಾಗಿರುತ್ತಿದೆ ಹಣ ಕೊಡದೆ ಇದ್ದಲ್ಲಿ 2/3 ವರ್ಷ ಕಳೆದರೂ ಈ ಸ್ವತ್ತು ಖಾತೆ ಮಾಡಿಕೊಡುವುದಿಲ್ಲ.
ಅಲ್ಲದೆ ನಗರ ಹಾಗೂ ಗ್ರಾಮ ಸಭೆ ನಡೆಸದೆ ವಸತಿ ಯೋಜನೆ ಫಲಾನುಭವಿಗಳನ್ನು ಪಂಚಾಯತಿಯಲ್ಲಿ ಆಯ್ಕೆಮಾಡಲಾಗುತ್ತಿದ್ದು, ತಾಲೂಕಿನಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಸುಮಾರು 5000ಕ್ಕೂ ಹೆಚ್ಚು ಮನೆಗಳು ಬೋಗಸ್ಸಾಗಿವೆ ಅನೇಕ ಬಾರಿ ಮನವಿ ಮಾಡಿದರು ಇದುವರೆಗೂ ತನಿಖೆ ನಡೆಸಿ ಕ್ರಮಕೈಗೊಂಡಿಲ್ಲ.
ಉದ್ಯೋಗ ಖಾತರಿ ಯೋಜನೆಯಲ್ಲಿ ಹಲವಾರು ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ನಡೆಸದೆ ಬಿಲ್ ಪಡೆದಿರುತ್ತಾರೆ ಮತ್ತು ರೈತರ ಕಾಮಗಾರಿಗಳಿಗೆ ಎನ್ ಎಂ ಆರ್ ಹಾಕದೆ ಅನೇಕ ಬಾರಿ ಜೋರು ಮಾಡುತ್ತಾರೆ ಮತ್ತು ರೈತರ ಕಾಮಗಾರಿಗಳಿಗೆ ಇದುವರೆಗೂ ಸಪ್ಲೇ ಬಿಲ್ ಕೊಟ್ಟಿರುವುದಿಲ್ಲ.
ಉದ್ಯೋಗ ಖಾತರಿ ಇಂಜಿನಿಯರ್ ಸರಿಯಾಗಿ ಕಾರ್ಯನಿರ್ವಹಿಸದೆ ಫಲಾನುಭವಿಗಳಿಗೆ ಎಂ ಬಿ ಬರೆಯಲು ಕೊಡುತ್ತಾರೆ. ಕಂಪ್ಯೂಟರ್ ಆಪರೇಟರ್ ಕೆಲವು ಅವರ ಪರಿಚಯಸ್ತರ ಅಕೌಂಟ್ ಗೆ ಹಣ ಹಾಕಿಕೊಳ್ಳುತ್ತಾರೆ ಮತ್ತು ಪಂಚಾಯತಿಯಲ್ಲಿ ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.
ಜಲಜೀವನ್ ಯೋಜನೆ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ, ಗ್ರಾಮಗಳಲ್ಲಿ ಐ ಮಾಕ್ಸ್ ಅಳವಡಿಸುವಲ್ಲಿ ಬಾರಿ ಅವ್ಯವಾರ ನಡೆದಿದೆ, ಗ್ರಾಮ ನೈರ್ಮಲ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ಪೆನಾಯಿಲ್, ಬ್ಲಿಚಿಂಗ್ ಪೌಡರ್ ಬಳಸುತ್ತಿಲ್ಲ, ಇವುಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದರಲ್ಲದೆ,
ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಕೈಗಾರಿಕೆಗಳು ಮತ್ತು ವಾಣಿಜ್ಯ ಕಂಪನಿಗಳಲ್ಲಿ ಉತ್ಪಾದನೆಗೆ ಅನುಗುಣವಾಗಿ ತೆರಿಗೆ ವಸೂಲಾತಿ ಮಾಡದೆ ಅಧಿಕಾರಿಗಳು ಕಂಪನಿಯ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಂದಾಯ ವಸೂಲಾತಿ ಆಗುತ್ತಿಲ್ಲ. ಅನೇಕ ಕೈಗಾರಿಕೆ ಮತ್ತು ವಾಣಿಜ್ಯ ಕಂಪನಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ದೂರಿದರು.
ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರಿ ದಾಖಲೆಗಳನ್ನು ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರು ಮಾಹಿತಿ ಕೊಡುತ್ತಿಲ್ಲ.ತಾಲೂಕು ಪಂಚಾಯಿತಿ ಆಡಳಿತ ಅವಧಿ ಮುಗಿದಾಗಿನಿಂದ ಇಂದಿನವರೆಗೆ ಎಲ್ಲಾ ಅನುದಾನಗಳ ಕಾಮಗಾರಿಗಳ ತನಿಖೆ ನಡೆಸಬೇಕು ಎಂದರಲ್ಲದೆ,
ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅಭಿವೃದ್ಧಿ ಅಧಿಕಾರಿಗಳು ಮತ್ತು ರೈತ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರೆ ಎಲ್ಲಾ ದಾಖಲೆಗಳನ್ನು ಸಭೆಗೆ ಒಪ್ಪಿಸುತ್ತೇವೆ. ಆದ್ದರಿಂದ ತಾವುಗಳು ಸಮಗ್ರ ತನಿಖೆ ನಡೆಸಲು ಜಿಲ್ಲಾ ಮಟ್ಟದ ವಿಶೇಷ ತಂಡ ರಚಿಸಿ ತನಿಖೆ ನಡೆಸಿ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಆಲೂರು ಸಿದ್ದರಾಮಣ್ಣ, ಶಿವಣ್ಣ ತಿಮ್ಮಾರೆಡ್ಡಿ, ರಂಗಸ್ವಾಮಿ, ಅರಳಿಕೆರೆ ತಿಪ್ಪೇಸ್ವಾಮಿ, ಜಗನ್ನಾಥ್, ಜಯಣ್ಣ, ದೇವೇಂದ್ರಪ್ಪ, ರಾಮಣ್ಣ, ಗೌಡಪ್ಪ, ನಾರಾಯಣಪ್ಪ, ಕೆಂಚಪ್ಪ, ರಾಜಪ್ಪ, ದೊರೆಸ್ವಾಮಿ, ಈಶ್ವರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments